ಜಿಜ್ಞಾಸೆ

ಮನುಷ್ಯಪ್ರಯತ್ನಕ್ಕೆ ಏನು ಅರ್ಥ?
ಬ್ರಹ್ಮನೇ ಸಕಲವನ್ನೂ ಬರೆದುಬಿಟ್ಟರೆ
ಮಾನವಯತ್ನವೆಂಬುದು ವ್ಯರ್ಥ
ಹಾಗೆಂದು, ನಮ್ಮ ಕೈಯಲ್ಲಿದೆಯೇ
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ಹುಟ್ಟು ನನ್ನಧೀನದಲ್ಲಿರಲಿಲ್ಲ,
ಸಾವು ನನ್ನಧೀನದಲ್ಲಿರದು;
ನಡುವಿನ ಜೀವನ ನನ್ನದು
ಎಂದುಕೊಂಡರೆ ಅದೂ ಎಷ್ಟೋ ಸಲ
ನನ್ನಧೀನಕ್ಕೆ ಬರದು
ಇದೆಲ್ಲ ತಂತಾನೆಯೇ?
ಅಥವಾ ನಿಯಾಮಕನಿದ್ದಾನೆಯೇ?
ತಂತಾನೇ ಎಂದಾದರೆ
ಜೀವನಕ್ಕಿಲ್ಲ ಅರ್ಥ;
ಮೌಲ್ಯವೆಂಬುದಕ್ಕೂ ಅರ್ಥವಿಲ್ಲ,
ವಿಶ್ವಕ್ಕೂ ಇಲ್ಲ ಅರ್ಥ.
ಆದರೆ, ವಾಸ್ತವ ಹೀಗಿಲ್ಲ.
ಸೃಷ್ಟಿಯ ಕಣಕಣದಲ್ಲೂ
ಬಾಳಿನ ಕ್ಷಣಕ್ಷಣದಲ್ಲೂ
ಗೋಚರಿಸುತ್ತಿದೆಯಲ್ಲ
ಅರ್ಥಗಳ ಮಾಲೆ!
ಇದುವೇ ವಿಧಿಲೀಲೆ!
ಅಂದಮೇಲೆ,
ವಿಧಿಯುಂಟು;
ವಿಧಿಲಿಖಿತ ಉಂಟು.
ಜೊತೆಯಲ್ಲೇ,
ಬಾಳಿನ ನಿಧಿಯಾದ
ಸ್ವಪ್ರಯತ್ನಗಳಿಗೂ
ನೆಲೆಯುಂಟು,
ಬೆಲೆಯುಂಟು.
ವಿಧಿಲಿಖಿತಕ್ಕೂ ಸ್ವಪ್ರಯತ್ನಕ್ಕೂ
ಪರಸ್ಪರ ನಂಟು
More From
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications