Get Updates
Get notified of breaking news, exclusive insights, and must-see stories!

ತಂದೆಯ ಮನಸ್ಸು ಮತ್ತು ಕವಿತೆಯ ಕಣ್ಣು

Viyashankar Harapanahalli
ಕಳೆದ ವಾರ ದಟ್ಸ್ ಕನ್ನಡ ದಲ್ಲಿ ಪ್ರಕಟವಾದ ನನ್ನ ಕವನ ಮಹಾಭಾರತದ ಸತ್ಯಾಸತ್ಯದ ಕುರಿತು ಬರೆದದ್ದಲ್ಲ. ಕವನದ ಉದ್ದೇಶವೂ ಅದಲ್ಲ. ಮಹಾಭಾರತ ನಿಜವಾಗಿ ನಡೆದಿತ್ತಾ? ಗೊತಿಲ್ಲ! ಅದರೆ, ಮಹಾಭಾರತ ನಿಜವಾಗಿ ಘಟಿಸಿದ್ದು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಏಕೆಂದರೆ, ಅಂತಹ ಮಹಾಕಾವ್ಯ ಪೂರ್ತಿ ಪೂರ್ತಿ ಕಲ್ಪನೆ ಇರ್ಲಿಕ್ಕಿಲ್ಲ. ಹೀಗಾದರೂ, ಹಾಗಾದರೂ, ಹೇಗಾದರೂ ವ್ಯಾಸ ಕವಿ ಗ್ರೇಟ್. ಅದರ ಬಗ್ಗೆ ಚಕಾರ ಇಲ್ಲ ಎಂದು ನಾನು ಇಲ್ಲಿ ಸ್ಪಷ್ಟಪಡಿಸುವ ಅಗತ್ಯವೂ ಇಲ್ಲ!

ನನ್ನ ಕವನದ ಬಗೆಗೆ ಅನೇಕರ ಬಗೆಬಗೆಯ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಹಲವು ಸ್ನೇಹಿತರು ಸರಿಯಾಗಿ ಗುರುತಿಸಿರುವಂತೆ ಕವನದ ಜೀವಾಳ ಮಕ್ಕಳ ಆಸೆಯ ತಂದೆಯ ಮನಸ್ಸು ಮತ್ತು ಮಹಾರಾಜ ಧೃತರಾಷ್ಟ್ರನ ಬಗ್ಗೆ ಅಚ್ಚರಿ ಅಷ್ಟೆ! ಕವಿತೆಯ ಅರ್ಥ ಹುಟ್ಟ ಬೇಕಾಗಿದ್ದು ಸಹೃದಯ ಓದುಗನ ಅಂತರಾಳದಲ್ಲಿ. ಹಾಗಾಗಿ ಕವಿತೆಯನ್ನು ವಿವರಿಸಲು ಹೋಗುವುದಿಲ್ಲ. ಒಬ್ಬ ಕವಿ ತನ್ನ ಕವಿತೆಯನ್ನು ತಾನೇ ವಿವರಿಸುವುದು ಕವಿತೆಯ ಸಾಧ್ಯತೆಯನ್ನೇ ಕೊಂದಂತೆ.

ಕವಿತೆಯ ಬಗ್ಗೆ ಮಹಾಜನತೆ ತೋರಿದ ಆಸಕ್ತಿ, ಕುತೂಹಲ ಮತ್ತು ಹಲಕೆಲವು ಜಿಜ್ಞಾಸೆಗಳಿಗೆ ನಾನು ಮೇಲೆ ಹೇಳಿದ ಟಿಪ್ಪಣಿ ಬಿಟ್ಟರೆ ಮತ್ಯಾವ ಮಾರುತ್ತರವೂ ನನ್ನಿಂದ ಇಲ್ಲ. ಅಂದಹಾಗೆ, ನನ್ನ ಕವನಕ್ಕಿಂತ ಮಹಾಕಾವ್ಯ ಮಹಾಭಾರತ ಬಗ್ಗೆ ವ್ಯಕ್ತಪಡಿಸಿದ ಕಾಳಜಿಗೆ ಓದುಗ ಮಿತ್ರ ಸಾಗರಕ್ಕೆ ನಮೋನ್ನಮಃ.

ಇಂತಿ ನಿಮ್ಮ ಪ್ರೀತಿಯ,

ವಿದ್ಯಾಶಂಕರ ಹರಪನಹಳ್ಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+