ಜಾಸ್ತಿ ಇಲ್ಲ, ಬರೀ ನಾಲ್ಕೇ ನಾಲ್ಕು ..
ನಾಲ್ಕೇ ನಾಲ್ಕು ಸಾಲು ಇದು. ಕವನ , ಕಾವ್ಯ ಅಥವಾ ಇನ್ಯಾವುದೋ ಎಂದು ಆರೋಪಿಸಬೇಡಿ.... ಸುಮ್ಮನೇ ನಾನು ನನಗಿಷ್ಟ ಎಂದು ಬರೆದೆ.ಅದು ನಿಮ್ಮ ಇಷ್ಟವೂ ಆದೀತು..
1
ಮುಗಿಲನ್ನು ನೋಡಿ
ಕಾಲಾಂತರದಿಂದ ಜನ
ಕಾವ್ಯ ಬರೆದರು
ಚಿತ್ರ ಬಿಡಿಸಿದರು
ಯಾರೂ
ಮುಗಿಲನ್ನು ಮುಟ್ಟಲೇ ಇಲ್ಲ
ಮುಗಿಲು
ಸ್ಪರ್ಶಾತೀತ
2
ಒಳಗೊಂದು
ಸಣ್ಣ ದೀಪಕ್ಕೆ
ಪೂರ್ತಿ ಬೆಳಕಾಗಿದ್ದವಳು
ಹೊರಗಿನ ಕಡುಗತ್ತಲೆಯಲ್ಲಿ
ಬೀಸಿದ ಮಿಂಚ ಹಿಡಿಯಲೋಡಿದಳು
ಆಮೇಲೆ
ಒಳಗಿನ ದೀಪ ಉರಿಸಲು
ಅವಳಿಗೆ .....
ಆಗಲೇ ಇಲ್ಲ.
3
ಬಿಸಿಲಲ್ಲಿ ನಡೆಯತ್ತಾ
ಅವನು ಬಸವಳಿದ
ಮಳೆ ಬರಲಿ ಎಂದ
ಮಳೆ ಬಂತು
ಅವನು ಮಳೆಯಲ್ಲಿ ನೆನೆದ
ಆಮೇಲೆ ಬಿಸಿಲಿಗಾಗಿ
ಹುಡುಕಾಡಿದ
ಬಿಸಿಲು ಮಳೆಯಲ್ಲಿ
ಲೀನವಾಗಿತ್ತು.
ಅವನು ಕಾಣಲಿಲ್ಲ..!
4
ಇನ್ನೊಂದು ಊರಿನಲ್ಲೂ
ಇದೇ ಬಾನು
ಇದೇ ಸೂರ್ಯ
ಮತ್ತು ತಾರೆ ಚಂದಿರ ಹೀಗೇ..
ತೋರಬಹುದು.
ಆದರೆ
ಅಲ್ಲಿ ಅದನ್ನು ಕಾಣುವ
ಮನಸು
ಈ ಊರಿನ
ಬಾನು ಅಥವಾ ತಾರೆಗಳಂತೆ
ಇರಲಾರದು
ಇದೇ ಜಗತ್ತಿನ ಸಂಹಿತೆ.
(ಕೃಪೆ :http://kuntini.blogspot.com/)
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications