ಎಷ್ಟೊಂದು ಅಚ್ಚ ಬಿಳೀ ಮಲ್ಲಿಗೆ ಹೂಗಳು !
- ಪ್ರಮೀಳಾ ಚೊಕ್ಕಾಡಿ, ಬೆಳ್ತಂಗಡಿ
ಅವರೆಂದರು
ಶೂದ್ರನಿಗೆ ಬುದ್ಧಿ ಬೋಳೆ
ಇವರೆಂದರು
ವಿಪ್ರ ಕಂತ್ರೀ ನನ್ಮಗ
ಇಬ್ಬರೂ ಸೇರಿ ಗುಂಡಿ ತೋಡಿದರು ಬಡವನಿಗೆ!
***
ಎಲ್ಲಿ ದೇವತೆಗಳು ?
ರಾಮಾಯಣದ ಸೀತೆಯ ಪಾತಿವ್ರತ್ಯಕ್ಕೆ
ಸಾಕ್ಷಿ ನುಡಿಯಲು
ಆಗಸದಲ್ಲಿ ಟೊಂಕಕಟ್ಟಿ ನಿಂತಿದ್ದ
ದೇವಾನುದೇವತೆಗಳೇ
ಈಗೆಲ್ಲಿ ಹೋದಿರಿ ನೀವೆಲ್ಲ ?
ಅಗ್ನಿಯೇ
ನೀನಾದರೂ ಸುಡದೇ ಇರಬಹುದಲ್ಲ
ಬಲವಂತದಿಂದ ಆಹುತಿಯಾಗುವ
ಈ ನೆಲದ ಅಮಾಯಕ ಹೆಣ್ಣುಗಳನ್ನು ?
***
ಪ್ರೀತಿ ಆಸರೆ
ಹಸಿವಿನಿಂದ ಚೀತ್ಕರಿಸುತ್ತಿದ್ದ
ಪುಟ್ಟ ಮರಿಹಕ್ಕಿ
ಆಹಾರ ಸಿಗದೆ
ಹಾರಿಬಂದ ತಾಯಿ ಹಕ್ಕಿಯ
ಚುಂಚಿನ ಬೆಚ್ಚನೆಯ ಮೃದು ಸ್ಪರ್ಶಕ್ಕೆ
ನೇವರಿಕೆಗೆ
ಅಲ್ಲೇ ಆ ಕ್ಷಣ ರೆಕ್ಕೆಯಡಿಯಲ್ಲಿ
ಮೆತ್ತಗೆ ಮಲಗಿ ನಿದ್ದೆ ಹೋಯಿತು
***
ಹಳ್ಳಿಯ ಹೂಗಳು
ಹಳ್ಳಿಯ
ಎಷ್ಟೊಂದು ಅಚ್ಚ ಬಿಳೀ ಮಲ್ಲಿಗೆ ಹೂಗಳು
ಸಿಟೀ ಬಸ್ಸ್ಟ್ಯಾಂಡುಗಳ ಬಿಸಿಲಿನಲ್ಲಿ !
ಹೂ ಮಾರುವವನ ಕತ್ತರಿಯಲ್ಲಿ !
ಹರಿದು ಹಂಚಿಹೋಗಿ ಜಡದೇವರುಗಳ ಗುಡಿಗಳಲ್ಲಿ !
ಚುಚ್ಚಿಸಿಕೊಂಡು ಲಲನೆಯರ ಮುಡಿಗಳಲ್ಲಿ !
ಕೊನೆಗೆ
ತುಳಿಸಿಕೊಂಡು
ಹೂತು ಮಣ್ಣಿನಲ್ಲಿ !
ಚಳಿ-ಚುಟುಕು
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications