ಕೃಷ್ಣಾನಂದ ಕಾಮತ್ :ಚಿಕಿತ್ಸಕ ಮನಸ್ಸಿನ ಆಲ್ರೌಂಡರ್
ಬರಹಗಾರನ ಅನುಭವ ಸಮೃದ್ಧವಾಗಿದ್ದಾಗ ಆತನ ಸಾಹಿತ್ಯವೂ ಶ್ರೀಮಂತವಾಗಿರುತ್ತದೆ. ಶಿವರಾಮಕಾರಂತರು ನಮಗೆ ಮೆಚ್ಚೆನಿಸುವುದೇ ಹೀಗೆ. ತೇಜಸ್ವಿ ಅವರ ಕೃತಿಗಳು ಸೊಗಸೆನಿಸುವುದು ಈ ಕಾರಣದಿಂದಾಗಿಯೇ. ಆದರೆ, ಅಂಥವರ ಸಂಖ್ಯೆ ಎಷ್ಟಿದೆ ಹೇಳಿ? ಈ ಅಪರೂಪದ ಸಾಲಿಗೆ ಸೇರಿದವರು ಡಾ. ಕೃಷ್ಣಾನಂದ ಕಾಮತ್.
ಕಾಲೇಜು- ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಬಂಧಿಯಾಗಿರುವ ಸಾರಸ್ವತ ಲೋಕದ ಏಕತಾನತೆಯನ್ನು ಮುರಿಯುವುದೇ ಕಾಮತರಂಥ ವಿವಿಧ ಅಭಿರುಚಿಗಳ ಆಲ್ರೌಂಡರ್ಗಳು. ಕಾಮತರನ್ನು ಯಾವ ವರ್ಗಕ್ಕೆ ಸೇರಿಸುವುದು ? ಲೇಖಕ- ವಿಜ್ಞಾನಿಯಾಗಿ ಮಾತ್ರವಲ್ಲದೆ ಛಾಯಾಗ್ರಾಹಕರಾಗಿ, ಚಿತ್ರಕಾರರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಅವರು ಪ್ರಸಿದ್ಧರು. ಪರಿಸರ-ಪ್ರಾಣಿ ಸಾಹಿತ್ಯದಲ್ಲೂ ಸಿದ್ಧಹಸ್ತರು. ಡಾಟ್ಕಾಂ ಜಗತ್ತಿನಲ್ಲೂ ಕಾಮತ್ ಚಿರಪರಿಚಿತ ಹೆಸರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ- ಸಮಾಜದ ಕನ್ನಡಿಯಂತಿರುವ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications