ಗಾಂಚಾಲಿ ಬಿಟ್ಟು ಕನ್ನಡ ಬಳಸುವವರಿಗೆ ಜೈ

ಈ ಪ್ರಸ್ತಾವನೆಗೆ ಫೇಸ್ ಬುಕ್ ನಲ್ಲಿ ಪ್ರಭೃತಿಯೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿ, ಕನ್ನಡರೆಲ್ಲರಿಂದ ಉಗಿಸಿಕೊಂಡು, ಕರ್ಚೀಫಿನಿಂದ ಮುಖ ಒರೆಸಿಕೊಂಡು ಕ್ಷಮಾಪಣೆ ಪತ್ರ ಬರೆದಿದ್ದಾನೆ. ಫೇಸ್ ಬುಕ್ಕಿನಲ್ಲಿ ಕನ್ನಡ ದ್ವೇಷಿಗಳ ವಿರುದ್ಧ ಕನ್ನಡ ಪ್ರೇಮಿಗಳು ಯುದ್ಧವನ್ನೇ ಸಾರಿದ್ದಾರೆ. 'ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ' ಎಂಬ ಗುಂಪು ಕಟ್ಟಿಕೊಂಡಿರುವ ಕನ್ನಡದ ಕಟ್ಟಾಳುಗಳು ಕನ್ನಡದ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದ್ದಾರೆ. ಯುದ್ಧರಂಗಕ್ಕಿಳಿಯದೆ ಯುದ್ಧ ಗೆಲ್ಲುವುದು ಅಸಾಧ್ಯ!
ಆದರೆ, ಬೆಂಗಳೂರನ್ನು ಬಂದು ಬಂದು ತುಂಬುತ್ತಿರುವ ಅನ್ಯಭಾಷಿಕರು ಕನ್ನಡ ಕಲಿಯುವಂತೆ ಮಾಡುವುದು ಹೇಗೆ? ಕನ್ನಡ ಮಣ್ಣಿನ ವಾಸನೆ, ನೀರು, ಗಾಳಿ ಕುಡಿದು ಆಹಾರ ತಿನ್ನುವ ಪರಭಾಷಿಕರು ತಾವಾಗಿಯೇ ಕನ್ನಡ ಮೇಲೆ ಪ್ರೀತಿ ಗಳಿಸಿಕೊಂಡು ಕನ್ನಡ ಕಲಿಯುತ್ತಾರೆಂದು ಕೂಡಲು ಸಾಧ್ಯವೆ? ಬೆಂಗಳೂರೇ ಕಾಸ್ಮೋಪಾಲಿಟನ್ ಸಿಟಿಯಾಗಿರುವಾಗ, ಕನ್ನಡದವರೇ ಇಂಗ್ಲಿಷ್ ನಲ್ಲಿ ಟುಸ್ ಪುಸ್ ಅಂತ ಮಾತಾಡುವಾಗ ತಾವೇಕೆ ಕನ್ನಡ ಕಲಿಯಬೇಕು ಎಂಬ ಉಢಾಫೆ ಬೆಳೆಸಿಕೊಂಡಿರುವ ಇಂಥವರಿಗೆ ಕನ್ನಡ ಕಲಿಸುವುದು ಹೇಗೆ? ನಮ್ಮವರಲ್ಲಿಯೇ ಕನ್ನಡ ಪ್ರೀತಿ ಬೆಳೆಸುವುದು ಹೇಗೆ?
ಸಾಮ, ಭೇದದಿಂದ ಕನ್ನಡ ಕಲಿಸುವುದು ಸಾಧ್ಯವೇ ಇಲ್ಲ, ಕಲಿಸಲು ಯಾರಿಗೆ ತಾಳ್ಮೆಯೂ ಇಲ್ಲ. ಇರುವುದೊಂದೇ ದಂಡೋಪಾಯ. ಇದನ್ನು ಮನಗಂಡಿರುವ ವೀರೋಚಿತ ಕನ್ನಡ ಯುವಕರ ಪಡೆ ಫೇಸ್ ಬುಕ್ ನಲ್ಲಿ 'ಗಾಂಚಲಿ ಬಿಡಿ ಕನ್ನಡ ಮಾತಾಡಿ' ಎಂಬ ತಂಡ ಕಟ್ಟಿರುವ ಸಾವಿರಕ್ಕೆ ಹತ್ತಿರದ ಕನ್ನಡಿಗರ ಗ್ಯಾಂಗ್ ಕನ್ನಡದ ಅವಸಾನವಾಗಲು ಬಿಡುವುದಿಲ್ಲ ಎಂದು ತೊಡೆತಟ್ಟಿ ನಿಂತಿದೆ.
ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳಲು ಮತ್ತು ಹಬ್ಬಿಸುವ ಕೆಲಸಕ್ಕೆ ಮಾತ್ರ ಈ ಗುಂಪಿನ ಚಟುವಟಿಕೆ ಸೀಮಿತವಾಗದಿರಲಿ. ಗಾಂಚಲಿ ಬಿಡು ಕನ್ನಡ ಮಾತಾಡು ಎಂಬ ನುಡಿಗಳಲಿ ಇರುವ ಗತ್ತು ನಮ್ಮ ನಡೆಗಳಲೂ ಅವ್ಯಾಹತವಾಗಿ ಮುಂದುವರೆಯಲಿ. ಕನ್ನಡವನ್ನು ಉಳಿಸುವ ಬಗ್ಗೆ ಮಾತ್ರವಲ್ಲ, ಕನ್ನಡವನ್ನು ಅನ್ಯಭಾಷಿಕರಲ್ಲಿ ಬಿತ್ತುವ ಕೆಲಸವೂ ನಮ್ಮ ಕನ್ನಡಿಗರಿಂದ ಆಗಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತಾಡಲು ಅಸಹ್ಯ ಪಟ್ಟುಕೊಳ್ಳುವ ಕನ್ನಡಿಗರನ್ನು ಮುಂದೆ ನಿಲ್ಲಿಸಿಕೊಂಡೇ, ಗಾಂಚಲಿ ಬಿಡು ಕನ್ನಡ ಮಾತಾಡು ಎಂದು ಧೈರ್ಯವಾಗಿ ಹೇಳಬೇಕಿದೆ. ಕನ್ನಡ ಪರವಾಗಿ ಚಂದ್ರ ಮತ್ತು ಚಂದ್ರುಗಳಿಬ್ಬರು ಊದಿರುವ ಯುದ್ಧ ಕಹಳೆಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಿದೆ. ಫೇಸ್ ಬುಕ್ ಕನ್ನಡಿಗರಿಗೆ ಜೈ, ಕನ್ನಡಕ್ಕಾಗಿ ಗುಂಪು ಕಟ್ಟಿಕೊಂಡು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಕನ್ನಡಿಗರಿಗೆ ಜಯಸಿಗಲಿ. [ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿಸಿ]
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ












Click it and Unblock the Notifications