ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದ ಅರಿವು ಶಾಲೆ

ಕಲಿಕೆಯ ಹೊಸತಂತ್ರ!
ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಬದ್ಧತೆ, ಪರಿಸರದೊಂದಿಗೆ ಹೊಂದಾಣಿಕೆ, ನಾಯಕತ್ವ ಮತ್ತು ಸಹಕಾರದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಇಲ್ಲಿ ಪರಿಸರಕ್ಕೂ, ಮಕ್ಕಳಿಗೂ ಹಿತವೆನ್ನಿಸೋ ಕಲಿಕೆಯನ್ನು ನೀಡುತ್ತಿದೆ. ಮಕ್ಕಳಿಗೆ ತಾವಿರುವ ಪರಿಸರದಿಂದಲೇ ಶಿಕ್ಷಣ ನೀಡುತ್ತಾ ಇಂದಿನ ಸ್ಫರ್ಧಾ ಪ್ರಪಂಚದಲ್ಲಿ ತಮ್ಮತನ ಕಾಯ್ದುಕೊಳ್ಳುವಂತಹ ಸುಲಭ - ಸಹಜ ಕಲಿಕೆಗೆ ಅನುವು ಮಾಡಿಕೊಡುತ್ತಿದೆ. ಪರಿಸರದ ಮೂಲಕ ಕಲಿಕೆ ಎಂದೇ ಹೊರಟಿರುವ ಅರಿವು ಶಾಲೆ ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದೆ. ತರಗತಿಯಲ್ಲಿ ನಡೆಯುವ ಪಠ್ಯಪುಸ್ತಕ ಶಿಕ್ಷಣದ ಜೊತೆಯಲ್ಲೇ ಪ್ರತಿವಾರ ಕೆರೆ, ಗುಡ್ಡ, ಪಕ್ಷಿ ವೀಕ್ಷಣೆ, ಸುತ್ತಲ ಗಿಡಮರಗಳ ಅಧ್ಯಯನಕ್ಕೆ ಹೋಗುತ್ತಾರೆ. ಪೊಲೀಸ್ ಸ್ಟೇಷನ್, ಇಟ್ಟಿಗೆ ಕಾರ್ಖಾನೆ, ಮ್ಯೂಸಿಯಂಗಳು, ಎಣ್ಣೆ ಗಾಣ ಹೀಗೆ ಊರಿನಲ್ಲಿರುವ ಎಲ್ಲ ಬಗೆಯ ಸ್ಥಳಗಳಿಗೆ ಹೋಗಿ ತಿಳಿವು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ತಮ್ಮ ಕಣ್ಣಿಗೆ ಕಾಣುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಮಕ್ಕಳಲ್ಲಿ ಸಹಜವಾಗಿಯೇ ಕಲಿಯುವ ಆಸಕ್ತಿ ಹೆಚ್ಚುತ್ತದೆ.
ನುರಿತ ತರಬೇತುದಾರರಿಂದ ಪಠ್ಯೇತರ ಕಲಿಕೆ
"ಅರಿವು ಶಾಲೆ" ಮಕ್ಕಳಿಗೆ ವಿವಿಧ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸುಮಾರು 8 ತರಬೇತುದಾರರು ನಿಜವಾದ ಶಿಕ್ಷಣದತ್ತ ಮಕ್ಕಳನ್ನು ಒಯ್ಯುತ್ತಿದ್ದಾರೆ. ಈಜು, ತಬಲಾ, ರಂಗಗೀತೆಗಳು, ಶಾಸ್ತ್ರೀಯ ಸಂಗೀತ, ದೇಸಿ ಆಟಗಳು, ಇಂಗ್ಲಿಷ್ ಸಂವಹನ, ಚಾರಣ ಮುಂತಾದ ಹಲವು ಕ್ಷೇತ್ರಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಿಸುತ್ತಾರೆ. ಹಾಂ... ನೀವು ಈ ಶಾಲೆಯ 1-2ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ರಕ್ತ ಪರಿಚಲನೆ, ಮೂತ್ರೋತ್ಪತ್ತಿ, ಅಯಸ್ಕಾಂತ, ಮಸೂರಗಳ ಬಗ್ಗೆ ಮಾತನಾಡಿದರೆ ಅಚ್ಚರಿ ಪಡಬೇಕಿಲ್ಲ! ಆಡುನುಡಿಯಲ್ಲಿ ಕಲಿಯುವುದರಿಂದ ಮತ್ತು ಅನುಭವಗಳ ಸಮೇತ ಕಲಿಸುವ ಪದ್ದತಿ ಇರುವುದರಿಂದ ಅರ್ಥವಾಗುವಷ್ಟನ್ನು ಹೇಳುತ್ತಾರೆ. ಈ ಮಕ್ಕಳಲ್ಲಿ ಕಂಡದ್ದನ್ನೆಲ್ಲಾ ಇದೇನು? ಇದೇನು? ಎಂದು ತಿಳಿದುಕೊಳ್ಳಬೇಕೆನ್ನುವ ಕುತೂಹಲ ತೋರಿಸುವುದು ಹೆಚ್ಚಿದೆ. ಮಕ್ಕಳ ಸಹಜವಾದ ಈ ಕುತೂಹಲವನ್ನು ತುಳಿಯದೆ ತಣಿಸುವ ವಾತಾವರಣ ಇಲ್ಲಿದೆ. ಸಾಹಸ ಕ್ರೀಡೆಗಳು, ಪರ್ವತಾರೋಹಣ, ಕೆರೆ ಓಡಾಟ ಮಕ್ಕಳಿಗೆ ಸಾಕಷ್ಟು ಧೈರ್ಯ ಕಲಿಸಿದೆ.
ಪರಿಸರ ಪಾಠದ ಗುರುಗಳಾದ ಗುರು ಸಾರ್ ಮಕ್ಕಳಿಗೆ ಹಾವು ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ ಅಂದ್ರೆ ನಂಬ್ತೀರಾ? ನೋಡಿ ಈ ಫೋಟೋನಾ.. ಜೀವ ಸಂಕುಲದ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಮಕ್ಕಳು ಮುಂದೆ ಪರಿಸರ ಹಾನಿಯ ಕೆಲಸ ಮಾಡಲಾರರು ಎಂಬ ಭರವಸೆ ಮೂಡುತ್ತದೆ. ಸತತವಾಗಿ ಅರಿವು ಬಳಗ ತಮ್ಮನ್ನು ತಾವು ಕಲಿಕೆಗೆ ಒಡ್ದಿಕೊಂಡು ಮಕ್ಕಳೊಡನೆ ಒಂದಾಗಿ ಕಲಿಸುವ, ಕಲಿಕೆಯ ರೀತಿಯ ಬಗ್ಗೆ ನಿರಂತರತೆ ಕಾಯ್ದುಕೊಳ್ಳುವ ಗುರಿ ಹೊಂದಿದೆ.
ಹೆಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್
ಲಿಂಗಾಂಬುದಿ ಪಾಳ್ಯ ರಸ್ತೆ,
ಲಿಂಗಾಂಬುದಿ ಪಾಳ್ಯ, ಶ್ರೀರಾಂಪುರ,
ಮೈಸೂರು
ದೂರವಾಣಿ: 0821-2363399
ಡಾ ಮನೋಹರ - 9901225074
ಸುದರ್ಶನ - 9480326758
ಜನಾರ್ದನ - 9008512188
ಬರ್ಟಿ ಒಲಿವೆರಾ - 9448481968
ಮಾರುತಿ - 9880530404 (ಕೃಪೆ : ಕಲಿಕೆಯು...)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications