ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಯಕರಿಗೆ ಎಸ್ಪಿಬಿ 'ತಣ್ಣನೆಯ' ಕಿವಿಮಾತು

By Staff
|
Google Oneindia Kannada News

SPBs advise to Kannada Singersಸುಶ್ರಾವ್ಯ ಕಂಠವನ್ನು ಕಾಪಾಡಿಕೊಳ್ಳಲು ಗಾಯಕರು ಏನೇನು ಮಾಡಬೇಕು ? ಮೊದಲು ಕರಿದ ತಿಂಡಿಗಳನ್ನು ತಿನ್ನಬಾರದು, ಗುಂಡು ಹಾಕಬಾರದು, ಸಿಗರೇಟು ಮುಟ್ಟಲೇಬಾರದು, ಮುಖ್ಯವಾಗಿ ಐಸ್ ವಾಟರ್ ಕುಡಿಯಲೇಬಾರದು! ಹೀಗೆಂದು ಹೇಳುವ ಗಾಯಕ, ಗಾಯಕಿಯರನ್ನು ನೀವು ಕಂಡಿರಬಹುದು, ಕೇಳಿರಬಹುದು.

ಆದರೆ, ನಮ್ಮಲ್ಲೊಬ್ಬ ಗಾನ ಗಂಧರ್ವ ಇದ್ದಾರಲ್ಲಾ; ಎಸ್ ಪಿ ಬಾಲಸುಬ್ರಮಣ್ಯಂ ಅಂತ.. ಎಲ್ಲವೂ ತದ್ವಿರುದ್ಧ. ಇವರು ಧೂಮಪಾನ ಮಾಡುವುದಿಲ್ಲ , ನಿಜ. ಆದರೆ ಲೈಟಾಗಿ ವೈಟ್ ವೈನ್ ಕುಡಿಯುತ್ತಾರೆ. ಕರಿದ ತಿಂಡಿಗಳು ಎಂದರೆ ಪಂಚರತ್ನ ಕೃತಿಗಳಿಗಿಂತ ಪಂಚಪ್ರಾಣ. ಸಾಲದ್ದಕ್ಕೆ ಹಾಡು ಹೇಳಲು ಮೈಕ್ ಕೈಗೆತ್ತಿಕೊಳ್ಳುವುದಕ್ಕಿಂತ ಮುಂಚೆ ಐಸ್ ವಾಟರ್ ಬಾಟಲ್ ಬೇಕೇಬೇಕು.

ಆದರೆ, ಉಳಿದ ಗಾಯಕ ಗಾಯಕರಿಗೆ ಇವರು ಹೇಳು 'ತಣ್ಣನೆಯ' ಕಿವಿಮಾತುಗಳು ಹೀಗಿವೆ : "ನಾನು ಮಾಡ್ತೆನೇಂತ ನೀವು ಮಾಡಲು ಹೋಗಬೇಡಿ. ಇದು ನನ್ನ ದೇಹ ಪ್ರಕೃತಿಗೆ ಒಗ್ಗಿಕೊಂಡಿದೆ. ನೀವು ನಿಮ್ಮ ದೇಹ ಪ್ರಕೃತಿಗೆ ಒಗ್ಗಿಕೊಂಡಿರುವುದನ್ನೇ ಮಾಡಿ".

ಓಕೇ ? ಆರ್ ನಾಟ್ ಓಕೆ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X