ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರತ್ನಮಾಲಾ ಪ್ರಕಾಶ್- ಮಾಲತಿ ಶರ್ಮಾ ‘ಭಾವ ವೈಭವ’ಕ್ಕೆ ಬೆಳ್ಳಿಹಬ್ಬ
ಬೆಂಗಳೂರು : ಕನ್ನಡ ಸುಗಮ ಸಂಗೀತ ಕ್ಷೇತ್ರದ ಸಿರಿ ಕಂಠಗಳಾದ ರತ್ನಮಾಲಾ ಪ್ರಕಾಶ್ ಹಾಗೂ ಮಾಲತಿ ಶರ್ಮಾ ಅವರ ಹಾಡುಗಾರಿಕೆಗೀಗ ಬೆಳ್ಳಿಹಬ್ಬ ! ಈ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿರುವ ರತ್ನಮಾಲಾ- ಮಾಲತಿ ಭಲೇಜೋಡಿ, ‘ಭಾವ ವೈಭವ’ ಎನ್ನುವ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಾರ್ಚ್ 1 ರ ಸಂಜೆ 5.30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ‘ಭಾವ ವೈಭವ’ ಕಾರ್ಯಕ್ರಮದಲ್ಲಿ ತಮ್ಮ ಸುಗಮ ಸಂಗೀತ ಜೀವನದಲ್ಲಿ ಮಾರ್ಗದರ್ಶನ ನೀಡಿದ ಹಿರಿಯರನ್ನು ರತ್ನಮಾಲಾ- ಮಾಲತಿ ಗೌರವಿಸುವರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರತ್ನಮಾಲಾ ಪ್ರಕಾಶ್ ಈ ಭಾವ ವೈಭವದ ವಿವರಗಳನ್ನು ನೀಡಿದರು.
ಈ ಗುರು ಗೌರವ ಕಾರ್ಯಕ್ರಮದಲ್ಲಿ ಸಂಗೀತ- ಸಾಹಿತ್ಯ ಕ್ಷೇತ್ರದ ತಾರೆಗಳಾದ ಆರ್.ಕೆ.ಶ್ರೀಕಂಠನ್, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ , ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ ಅವರ ಪತ್ನಿ ಶಾಂತಾ ಅನಂತಸ್ವಾಮಿ ಅವರನ್ನು ಸನ್ಮಾನಿಸಲಾಗುವುದು.
(ಇನ್ಫೋ ವಾರ್ತೆ)
Comments
Story first published: Thursday, February 28, 2002, 5:30 [IST]