ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಮಧ್ವ’ ಪದ ಸೇರಿದರೆ ನಾಡಗೀತೆಯ ಛಂದೋಭಂಗ
ಮೈಸೂರು : ಕುವೆಂಪು ಅವರ ನಾಡಗೀತೆಯ ಮೂಲಪಾಠ ಛಂದಸ್ಸು ದೃಷ್ಟಿಯಿಂದ ಕ್ರಮಬದ್ಧವಾಗಿಯೇ ಇದೆ ಎಂದು ಛಂದಸ್ಸು ಶಾಸ್ತ್ರ ತಜ್ಞ ಡಾ. ಎಲ್. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ರಸಋಷಿ ಕುವೆಂಪು ರಚಿತ 'ಜಯಭಾರತ ಜನನಿಯ ತನುಜಾತೆ’ ಕವನಕ್ಕೆ 'ಮಧ್ವ’ ಪದ ಹೊಸತಾಗಿ ಸೇರಿದರೆ ಛಂದಸ್ಸಿನ ಲೆಕ್ಕ ತಪ್ಪುತ್ತದೆ ಎಂದು ಅವರು 'ಲೆಕ್ಕಾಚಾರ’ ಮಾಡಿ ಹೇಳಿದ್ದಾರೆ.
ಡಾ. ಬಸವರಾಜು ಅವರು ಕೊಟ್ಟ ಛಂದಸ್ಸಿನ ಲೆಕ್ಕ ಹೀಗಿದೆ :
ನಾಡಗೀತೆಯ 2, 3, 4, 5 ನೇ ನುಡಿಯ ಮೊದಲ ಎರಡು ಸಾಲುಗಳಲ್ಲಿ ಖಚಿತವಾಗಿ 4-4-2-5 ಮಾತ್ರೆಗಳು ಬರುತ್ತವೆ. ಆದ್ದರಿಂದ ಕವನದ ಸಾಲುಗಳು ಛಂದೋಬದ್ಧ.
ಆದರೆ, ' ಮಧ್ವ ’ ಪದ ಸೇರಿದರೆ 'ಮಾತ್ರಾ’ ವ್ಯತ್ಯಾಸವಾಗಿ ಕವಿಯ ಆಶಯ ಮತ್ತು ಛಂದಸ್ಸಿನ ಗಣಿತ ತಪ್ಪಾಗುತ್ತದೆ.
English summary
Kuvempus controvercial verse is Grammatically perfect. A demonstration by Dr. L. Basavaraju, in Mysore