ಭೂಮಿ ಭಯದ ಆರು ಕೃತಿಗಳು ಅನಾವರಣ

ಕೃತಿಗಳನ್ನು ಸ್ವೀಕರಿಸಿದವರು ಚಿರಂಜೀವಿ ಸಿಂಗ್, ವಿಜಯ್ ಗೋರೆ ಮತ್ತು ಈಶ್ವರ ಚಂದ್ರ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆ ವಿರಚಿತ ಹೊಸ ಪುಸ್ತಕಗಳಾದ'ಅಭಿವೃದ್ಧಿಯ ಅಂಧಯುಗ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್', 'ಕೊಪೆನ್ ಹೇಗನ್ ಋತು ಸಂಹಾರ' ಭೂಮಿ ಬುಕ್ಸ್ ವತಿಯಿಂದ ಬಿಡುಗಡೆ ಆದವು. ಇದೇ ವೇಳೆ ಅಂಕಿತ ಪ್ರಕಾಶನದ ವತಿಯಿಂದ ಮರುಮುದ್ರಣಗೊಂಡ ಹೆಗಡೆ ಅವರ ಇತರ ಮೂರು ಪುಸ್ತಕಗಳಾದ 'ಇರುವುದೊಂದೇ ಭೂಮಿ', 'ಪ್ರತಿದಿನ ಪರಿಸರ ದಿನ' ಮತ್ತು 'ಸುರಿಹೊಂಡ - ಭರತಖಂಡ' ಬಿಡುಗಡೆಗೊಂಡವು.
ಕೃತಿ ಬಿಡುಗಡೆ ಮಾಡಿದವರು ತಿರುಗಾಟದ ಕೆವಿ ಅಕ್ಷರ, ವಿಜ್ಞಾನ ಲೇಖಕಿ ನೇಮಿಚಂದ್ರ ಮತ್ತು ಅರೆಕಾಲಿಕ ರಾಜಕಾರಣಿ ಪ್ರೊ.ಬಿ.ಕೆ.ಚಂದ್ರಶೇಖರ್. ಪುಸ್ತಕ ಬಿಡುಗಡೆ ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನ ಸಭಾಂಗಣದಲ್ಲಿ ಭೂಮ್ತಾಯಿ ಬಳಗದ ಹಾಡುಗಾರರು ಹಸುರು ಗೀತೆಗಳ ಸಮೂಹಗಾನವನ್ನು ಸುಶ್ರಾವ್ಯವಾಗಿ ಹಾಡಿದರು. ಪರಿಸರ ಕಾಳಜಿಗೆ ಮುಡಿಪಾದ ಗೀತೆಗಳ ಸಾಹಿತ್ಯದಲ್ಲಿ ಪ್ರಮುಖವಾಗಿ ಕರ್ನಾಟಕದ ರೈತ ಮತ್ತು ಭೂಮಿಯ ನಡುವೆ ನಡೆಯುತ್ತಿರುವ ಜಗಳ ಮಾರ್ದನಿಸಿತು.
ಇದಲ್ಲದೆ, ಬಹುರಾಷ್ಟೀಯ ಕಂಪನಿಗಳ ಹಾವಳಿಯನ್ನು ಗೇಲಿ ಮಾಡುವ ಹಾಡೂ ಇತ್ತು. ಕೋಕಾಕೋಲ ಮತ್ತು ಪೆಪ್ಸಿಗೆ ಅರ್ಪಿಸಲಾಗಿದ್ದ ಒಂದು ಕನ್ನಡಗೀತೆಯ ಸಾಹಿತ್ಯದಲ್ಲಿ 'ವಿಟಮಿನ್ ಎಬಿಸಿಡಿ' ಇಲ್ಲದ ಪಾನೀಯಗಳನ್ನು ಕೇವಲ ಒಂದು ತೈಲ ಎಂದು ಬಣ್ಣಿಸಲಾಗಿತ್ತು. ಕಡೆಪಕ್ಷ ಆ ಪಾನೀಯಗಳಲ್ಲಿ ಕಾರ್ಬೋಹೈಡ್ರೇಟ್ ಕೂಡ ಇಲ್ಲ ಎಂದು ಗೀತೆ ಸಾರಿತು. ಬೆಂದಕಾಳೂರು ಬೆಂಗಲೋರ್ ಆದ ಬಗೆಯನ್ನು ಹಾಡಿನಲ್ಲಿ ಚಿತ್ರಿಸುವ ಗೀತೆಯನ್ನು ಕಾರ್ಯಕ್ರಮದ ಆಶಯ ಗೀತೆಯನ್ನಾಗಿ ಪ್ರಸ್ತುತಪಡಿಸಲಾಯಿತು.
ಪತ್ರಕರ್ತ ಪರಿಸರ ವಿಜ್ಞಾನಿ ಮತ್ತು ಲೇಖಕ ನಾಗೇಶ್ ಹೆಗಡೆ ದಂಪತಿಗಳನ್ನು ಪ್ರೊ ಬಿಕೆ ಚಂದ್ರಶೇಖರ್ ಶಾಲು ಹೊದಿಸಿ ಸನ್ಮಾನಿಸಿದರು. ವಿರೋಧಿನಾಮ ಸಂವತ್ಸರದ ಕರ್ನಾಟಕ ಚಳಿಗಾಲದ ಈ ಕೊನೆಯ ದಿನಗಳಲ್ಲಿ ಕನ್ನಡ ಲೇಖಕರಿಗೆ ಕಾಶ್ಮೀರಿ ಶಾಲು ಹೊದಿಸಿ ಗೌರವಿಸಿದ್ದು ಸಮಯೋಚಿತವಾಗಿತ್ತು.
ಭೂಮಿ ಬುಕ್ಸ್ ಸಂಸ್ಥೆಯ ಒಡತಿ ದಿವ್ಯಾ ಉಪಸ್ಥಿತರಿದ್ದರು. ಕರ್ನಾಟಕದ ಹೆಸರಾಂತ ಕನ್ನಡ ಪ್ರಕಟಣಾ ಸಂಸ್ಥೆಗಳಾದ ಗಾಂಧೀಬಜಾರಿನ ಅಂಕಿತ, ಹೆಗ್ಗೋಡಿನ ಅಕ್ಷರ ಮತ್ತು ನೂತನ ಭೂಮಿ ಬುಕ್ಸ್ ಸಂಸ್ಥೆಯ ರೂವಾರಿಗಳು ಒಂದೇ ವೇದಿಕೆಯಲ್ಲಿ ಇದ್ದುದು ಕಾರ್ಯಕ್ರಮದ ವಿಶೇಷ ಅಂಶವಾಗಿತ್ತು. ಅಂಕಿತದ ಪ್ರಕಾಶ್ ಕಂಬತ್ತಳ್ಳಿ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ಪುಸ್ತಕ ಖರೀದಿಸ ಬಯಸುವವರು ಅಂಕಿತ ಪ್ರಕಾಶನಕ್ಕೆ ದೂರವಾಣಿ ಕರೆಮಾಡಿ ವಿವರ ಪಡೆದುಕೊಳ್ಳಬಹುದು : 080- 2661 7100 ಅಥವಾ 080-2661 7755.
ಭೂಮಿ ಬುಕ್ಸ್ ವಿಳಾಸ : 150, ಮೊದಲನೇ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು, 560 020 ಇಮೇಲ್ : [email protected]
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications