ರಂಗೋಲಿ, ಚಳಿ ಮತ್ತು ಯೋಗ್ಯ ವರ

* ಪಾರ್ವತಿದೇವಿ ಶಿವನನ್ನು ಆರಾಧಿಸಿ ಒಲಿಸಿಕೊಂಡಿದ್ದು ಈ ತಿಂಗಳಿನಲ್ಲೇ ಅಂತೆ. ಆಕೆಯ ಪ್ರೀತಿಗೆ ಮೆಚ್ಚಿ ಪರಶಿವ ಮದುವೆ ಆದ ಅಂತ ಪುರಾಣಗಳು ಹೇಳುತ್ತವೆ. ಅದೇ ರೀತಿ ಗೋದಾದೇವಿ ರಂಗನಾಥನಿಗಾಗಿ ವ್ರತ ಕೈಗೊಂಡು ಆತನನ್ನು ಪಡೆದದ್ದು ಇದೆ ತಿಂಗಳು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ತಾವು ಬಯಸುವ ಪತಿ ದೊರಕಲೆಂದು ಹೆಣ್ಣುಮಕ್ಕಳು ಭಯಭಕ್ತಿಯಿಂದ ಕಾತ್ಯಾಯಿನಿ ದೇವಿಯ ವ್ರತ ಮಾಡುತ್ತಾರೆ.
* ಧನುರ್ ಮಾಸದಲ್ಲಿ ಇಡೀ ತಿಂಗಳು ಹೆಣ್ಣುಮಕ್ಕಳು ಕೋಳಿ ಕೂಗುವುದಕ್ಕೆ ಮುನ್ನವೇ ಎದ್ದು ಮನೆಮುಂದೆ ಗುಡಿಸಿ ಸಾರಿಸಿ ರಂಗೋಲಿ ಇಡ್ತಾರೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುವ ದೃಶ್ಯವಲ್ಲ, ನೆರೆಯ ರಾಜ್ಯಗಳಲ್ಲೂ ಇದು ಕಾಣಸಿಗುತ್ತದೆ. ರಂಗೋಲಿ ಎಂದೊಡನೆ ನೆನಪಿಗೆ ಬರುವುದು ಸೇರಿದ ಎರಡು ತ್ರಿಭುಜಗಳು, ಸಾಮಾನ್ಯ ಪದ್ಮ...! ಹೀಗೆ ಹಲವಾರು ರೀತಿಯದ್ದು. ಇವೆಲ್ಲವೂ ರಂಗೋಲಿಯನ್ನು ಕಲಿಯುವ ಆಸೆ ಹೊಂದಿರುವ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಅಜ್ಜಿ, ಅಮ್ಮ ಸೇರಿದಂತೆ ಮನೆಯ ಹಿರಿಯ ಹೆಣ್ಣುಮಕ್ಕಳು ಕಲಿಸಿ ಕೊಡುವ ಸರಳ ಹಾಗೂ ಸುಲಭದ ಡಿಜೈನುಗಳು.
ರಂಗೋಲಿ ಹಾಕುವ ಖುಷಿ ಕೇವಲ ಧನುರ್ಮಾಸಕ್ಕೆ ಸೀಮಿತ ಅಲ್ಲ. ಆ ತಿಂಗಳು ಸ್ವಲ್ಪ ಹೆಚ್ಚೇ ವಿಶೇಷತೆ ಪಡೆದುಕೊಳ್ಳುತ್ತದೆ. ಕಣ್ಮನ ಸೆಳೆಯುವ ರಂಗೋಲಿಗೆ ಬಣ್ಣ, ಕೆಮ್ಮಣ್ಣು, ಹೂವುಗಳನ್ನು ತುಂಬಿಸಿ ಅಲಂಕರಿಸಿ ಖುಷಿ ಪಡುತ್ತಾರೆ ಹೆಣ್ಣುಮಕ್ಕಳು. ಗ್ರಾಮೀಣ ಪ್ರದೇಶಗಳಲ್ಲಿ ಸೆಗಣಿಯಿಂದ ನೆಲ ಸಾರಿಸಿ ಸುಣ್ಣದಿಂದ ರಂಗೋಲಿ ಹಾಕುತ್ತಾರೆ. ಇವೆರಡು ಕ್ರಿಮಿ ಕೀಟಗಳು ಹಾಗೂ ದುಷ್ಟ ಶಕ್ತಿ ಮನೆಯೊಳಗೇ ಬರದಂತೆ ತಡೆಯುತ್ತವೆ.
ಒಟ್ಟಾರೆ, ರಂಗೋಲಿ ನಮ್ಮತನದ ಸಂಕೇತ. ಅತ್ಯಂತ ಖುಷಿ ಕೊಡುವ ಈ ಕೆಲಸವೂ ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಭಾರತೀಯ ಗಂಡು ಮಕ್ಕಳಿಗೂ ಅಪ್ಯಾಯ!
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications