ರಂಗೋಲಿ, ಚಳಿ ಮತ್ತು ಯೋಗ್ಯ ವರ

* ಪಾರ್ವತಿದೇವಿ ಶಿವನನ್ನು ಆರಾಧಿಸಿ ಒಲಿಸಿಕೊಂಡಿದ್ದು ಈ ತಿಂಗಳಿನಲ್ಲೇ ಅಂತೆ. ಆಕೆಯ ಪ್ರೀತಿಗೆ ಮೆಚ್ಚಿ ಪರಶಿವ ಮದುವೆ ಆದ ಅಂತ ಪುರಾಣಗಳು ಹೇಳುತ್ತವೆ. ಅದೇ ರೀತಿ ಗೋದಾದೇವಿ ರಂಗನಾಥನಿಗಾಗಿ ವ್ರತ ಕೈಗೊಂಡು ಆತನನ್ನು ಪಡೆದದ್ದು ಇದೆ ತಿಂಗಳು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ತಾವು ಬಯಸುವ ಪತಿ ದೊರಕಲೆಂದು ಹೆಣ್ಣುಮಕ್ಕಳು ಭಯಭಕ್ತಿಯಿಂದ ಕಾತ್ಯಾಯಿನಿ ದೇವಿಯ ವ್ರತ ಮಾಡುತ್ತಾರೆ.
* ಧನುರ್ ಮಾಸದಲ್ಲಿ ಇಡೀ ತಿಂಗಳು ಹೆಣ್ಣುಮಕ್ಕಳು ಕೋಳಿ ಕೂಗುವುದಕ್ಕೆ ಮುನ್ನವೇ ಎದ್ದು ಮನೆಮುಂದೆ ಗುಡಿಸಿ ಸಾರಿಸಿ ರಂಗೋಲಿ ಇಡ್ತಾರೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುವ ದೃಶ್ಯವಲ್ಲ, ನೆರೆಯ ರಾಜ್ಯಗಳಲ್ಲೂ ಇದು ಕಾಣಸಿಗುತ್ತದೆ. ರಂಗೋಲಿ ಎಂದೊಡನೆ ನೆನಪಿಗೆ ಬರುವುದು ಸೇರಿದ ಎರಡು ತ್ರಿಭುಜಗಳು, ಸಾಮಾನ್ಯ ಪದ್ಮ...! ಹೀಗೆ ಹಲವಾರು ರೀತಿಯದ್ದು. ಇವೆಲ್ಲವೂ ರಂಗೋಲಿಯನ್ನು ಕಲಿಯುವ ಆಸೆ ಹೊಂದಿರುವ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಅಜ್ಜಿ, ಅಮ್ಮ ಸೇರಿದಂತೆ ಮನೆಯ ಹಿರಿಯ ಹೆಣ್ಣುಮಕ್ಕಳು ಕಲಿಸಿ ಕೊಡುವ ಸರಳ ಹಾಗೂ ಸುಲಭದ ಡಿಜೈನುಗಳು.
ರಂಗೋಲಿ ಹಾಕುವ ಖುಷಿ ಕೇವಲ ಧನುರ್ಮಾಸಕ್ಕೆ ಸೀಮಿತ ಅಲ್ಲ. ಆ ತಿಂಗಳು ಸ್ವಲ್ಪ ಹೆಚ್ಚೇ ವಿಶೇಷತೆ ಪಡೆದುಕೊಳ್ಳುತ್ತದೆ. ಕಣ್ಮನ ಸೆಳೆಯುವ ರಂಗೋಲಿಗೆ ಬಣ್ಣ, ಕೆಮ್ಮಣ್ಣು, ಹೂವುಗಳನ್ನು ತುಂಬಿಸಿ ಅಲಂಕರಿಸಿ ಖುಷಿ ಪಡುತ್ತಾರೆ ಹೆಣ್ಣುಮಕ್ಕಳು. ಗ್ರಾಮೀಣ ಪ್ರದೇಶಗಳಲ್ಲಿ ಸೆಗಣಿಯಿಂದ ನೆಲ ಸಾರಿಸಿ ಸುಣ್ಣದಿಂದ ರಂಗೋಲಿ ಹಾಕುತ್ತಾರೆ. ಇವೆರಡು ಕ್ರಿಮಿ ಕೀಟಗಳು ಹಾಗೂ ದುಷ್ಟ ಶಕ್ತಿ ಮನೆಯೊಳಗೇ ಬರದಂತೆ ತಡೆಯುತ್ತವೆ.
ಒಟ್ಟಾರೆ, ರಂಗೋಲಿ ನಮ್ಮತನದ ಸಂಕೇತ. ಅತ್ಯಂತ ಖುಷಿ ಕೊಡುವ ಈ ಕೆಲಸವೂ ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಭಾರತೀಯ ಗಂಡು ಮಕ್ಕಳಿಗೂ ಅಪ್ಯಾಯ!
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications