ಕಾದಂಬರಿಕಾರ ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮ

ಸಣ್ಣಕಥೆ ಮತ್ತು ಹಾಸ್ಯ ಬರಹಗಳ ಮುಖಾಂತರವೇ ಜನಜನಿತರಾದ ವೈದ್ಯರ ಬರಹಗಳ ಕುರಿತ ಮಾತುಕತೆ, ಚರ್ಚೆಗಳಿಗೆ ಪುಸ್ತಕ ಬಿಡುಗಡೆಗಳಿಗೆ ಇರುವ ಕೇಂದ್ರ ಸ್ಥಾನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ವೇದಿಕೆ ಕಲ್ಪಿಸಲಿದೆ.
ಹೊಸ ಪೀಳಿಗೆಯ ಚಿಂತಕ, ವಿಮರ್ಶಕ ರಹಮತ್ ತರೀಕೆರೆ ಅವರು ಶ್ರೀನಿವಾಸ ವೈದ್ಯ ಅವರ ಕೃತಿಗಳ ಬಗ್ಗೆ ಮನಬಿಚ್ಚಿ ಮಾತಾಡಲಿದ್ದಾರೆ. ರಂಗಕರ್ಮಿಗಳಾದ ಬಿ ಸುರೇಶ ಮತ್ತು ಇಕ್ಬಾಲ್ ಅಹ್ಮದ್ ಅವರು ವೈದ್ಯ ಅವರ ಬರಹಗಳನ್ನು ಓದಲಿದ್ದಾರೆ.
ಮೇ 1 ಕಾರ್ಮಿಕರ ದಿನಾಚರಣೆಯ ರಜೆಯಂದು ಕನ್ನಡ ಓದುಗರ ಜಾತ್ರೆಗೆ ಬಸವನಗುಡಿ ಸಾಕ್ಷಿಯಾಗಲಿದೆ. ಗಮನದಲ್ಲಿಡಿ, ಮೇ 1ರ ಬೆಳಿಗ್ಗೆ 10.30ಕ್ಕೆ ಸಾಹಿತ್ಯ ಸಂಭ್ರಮ ಶುರುವಾಗಲಿದೆ.
ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಛಂದ ಪುಸ್ತಕ ಪ್ರಕಾಶನ ಮತ್ತು ದೇಶಕಾಲ ಪತ್ರಿಕೆ ಜಂಟಿಯಾಗಿ ಆಯೋಜಿಸಿವೆ.











Click it and Unblock the Notifications