ಭಾನುವಾರ ನಗರದ ವಿವಿಧೆಡೆ 7ಪುಸ್ತಕ ಪ್ರಸವಗಳು

ಬೆಂಗಳೂರು : ಪುಸ್ತಕ ಪ್ರಿಯರ ಓದುವ ದಾಹಕ್ಕೆ ಮುಂದಿನ ವಾರ ಕೊರತೆಯಾಗುವುದಿಲ್ಲ! ವಾರಾಂತ್ಯದ ಭಾನುವಾರ ನಗರದ ವಿವಿಧೆಡೆ ಏಳು ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿವೆ.

ಸುಮುಖ ಪ್ರಕಾಶನ ಹಾಗೂ ಅಂಕಿತ ಪ್ರಕಾಶನದ ಏಳು ಪುಸ್ತಕಗಳ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಅವುಗಳ ವಿವರ ಇಲ್ಲಿದೆ ;

ಪುಸ್ತಕ ಪ್ರಸವ ಒಂದು : ಸುಮುಖ ಪ್ರಕಾಶನ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಹಾಗೂ ಆರು ಪುಸ್ತಕಗಳು ಬಿಡುಗಡೆ ಸಮಾರಂಭದಲ್ಲಿ ಹಂ.ಪ. ನಾಗರಾಜಯ್ಯ ಹಾಗೂ ಡಾ। ಸಾ.ಶಿ. ಮರುಳಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸ್ಥಳ : ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಪಂಪ ಸಭಾಂಗಣ

ಸಮಯ : ಸಂಜೆ 5.30

ಬಿಡುಗಡೆಯಾಗಲಿರುವ ಪುಸ್ತಕಗಳು :

  • ಹೂದಂಡಿ-ಆಯ್ದ ಭಾವಗೀತೆಗಳು (ಪ್ರೊ। ಮಾಲತಿ ಪಟ್ಟಣಶೆಟ್ಟಿ)

  • ಅಪ್ಪಾಜಿ ಬರೆದ ಪಾಪೂ ಡೈರಿ (ಡಾ। ಎಸ್‌.ಪಿ. ಪದ್ಮಪ್ರಸಾದ್‌)

  • ಬಂಗಾರದ ಬೇರುಗಳು-ಮಕ್ಕಳ ಕಥೆಗಳು (ಕೆ.ಎಂ. ವಿಜಯಲಕ್ಷ್ಮಿ)

  • ಕತ್ತಲ ಗರ್ಭ-ಕಥಾ ಸಂಕಲನ ( ಈಶ್ವರ ಚಂದ್ರ)

  • ಚಿರಸ್ಮರಣೀಯರು (ಬಿ. ಎಂ. ಚಂದ್ರಶೇಖರಯ್ಯ)

  • ಮನಸ್ಸಿನ ಅದ್ಭುತ ಶಕ್ತಿ (ಚಿ. ಧೃ.ಹರೀಶ್‌ )
  • ಪುಸ್ತಕ ಪ್ರಸವ ಎರಡು : ವಿಜಯಕರ್ನಾಟಕ ಪತ್ರಿಕೆಯ ಎಚ್‌.ಡುಂಡಿರಾಜ್‌ ಅವರ ಅಂಕಣ ಬರಹ ‘ಮಾತು ಕ(ವಿ)ತೆ’ ಅದೇ ಹೆಸರಲ್ಲಿ ಪುಸ್ತಕ ರೂಪದಲ್ಲಿ ಅನಾವರಣಗೊಳ್ಳುತ್ತಿದೆ.

    ಸ್ಥಳ : ಬಸವನಗುಡಿಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣ
    ಸಮಯ : ಬೆಳಗ್ಗೆ 10.30ಕ್ಕೆ
    ಮುಖ್ಯ ಆಹ್ವಾನಿತರು : ಎಸ್‌. ಷಡಕ್ಷರಿ, ರಮಣಶ್ರೀ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕರು .,
    ವಿಶ್ವೇಶ್ವರ ಭಟ್‌, ಪತ್ರಕರ್ತ., ಪ್ರೊ। ಅ.ರಾ. ಮಿತ್ರ, ಹಾಸ್ಯ ಸಾಹಿತಿ.

    (ಇನ್ಫೋ ವಾರ್ತೆ)

    ಮುಖಪುಟ / ಸಾಹಿತ್ಯ-ಸಂಸ್ಕೃತಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+