ಕನ್ನಡ ನಾಡಲ್ಲೇ ಜಾಗೃತವಾಗದ ಕನ್ನಡ ಪ್ರೇಮ

ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ವರ್ಷಕ್ಕೆ ಒಂದು ಕನ್ನಡ ಚಿತ್ರವನ್ನಾದರೂ ಹಾಕಬೇಕೆಂಬ ಸರಕಾರದ ಸುತ್ತೋಲೆ ಧೂಳು ತುಂಬಿ ಕೂತಿದೆ. ಇತರ ರಾಜ್ಯದ ರಾಜಧಾನಿಗೆ ಹೋಗಿ ನೆಲೆಸುವ ನಮ್ಮ ಭಾಷಿಗರು ಆಯಾಯ ರಾಜ್ಯದ ಭಾಷೆಗಳನ್ನು ಕೆಲವೇ ತಿಂಗಳಲ್ಲಿ ಕಲಿಯಬೇಕಾದರೆ, ದಶಕಗಳಿಂದ ಕಾವೇರಿ ನೀರು ಕುಡಿಯುತ್ತಿರುವ ಇವರಿಗೆ ಕನ್ನಡ ಯಾಕೆ ಬರುತ್ತಿಲ್ಲ? ಅದಕ್ಕೆ ವಿಶಾಲ ಹೃದಯದ ಕನ್ನಡಿಗರು ಅವರ ಭಾಷೆಯಲ್ಲೇ ವ್ಯವಹರಿಸುತ್ತಿರುವುದೂ ಒಂದು ಕಾರಣ ಆಗಿರಬಹುದು.
ನಮ್ಮ ಸಂಸ್ಕೃತಿ ಪರಿಚಯಿಸುವ ಗೋಡೆ ಬರಹಗಳು, ಚಿತ್ರಗಳು ನಗರದ ಹೃದಯ ಭಾಗದಲ್ಲಿ ಕಾಣುತ್ತೇವೆ. ಇದು ಒಳ್ಳೆ ಕೆಲಸ, ಆದರೆ ಅಂತಹ ಬರಹ ಚಿತ್ರಗಳ ಮುಂದೆ ಜನರು ಮೂತ್ರ ವಿಸರ್ಜನೆ ಮಾಡುತ್ತಾರಲ್ಲಾ ಸ್ವಾಮಿ, ಅದಕ್ಕೆ ಏನು ಮಾಡೋಣ ಹೇಳಿ? ವರ್ಷಕ್ಕೆ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಬಾವುಟ ಹಾಕಿದರೆ ಸಾಕೆ? ಅಂದು ಮಾತ್ರ ಕನ್ನಡ ಭಾಷೆಗೆ ಮರ್ಯಾದೆ ನೀಡಿದರೆ ಸಾಕೆ? ಇಂತಹ ಅವಮಾನಕಾರಿ ಘಟನೆ ನಡೆಯುತ್ತಲೇ ಇರುತ್ತಿರಬೇಕಾದರೆ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಚ್ಚೆತ್ತುಕೊಳ್ಳದಿದ್ದರೆ ಮುಂದೆನೂ ಇಂಥ ಘಟನೆಗಳು ನಡೆಯೋದು ಖಂಡಿತ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎನ್ನುವ ಪದ ಬರೀ ಬ್ಯಾನರ್ ನಲ್ಲಿ, ಕೈಪಿಡಿಯಲ್ಲಿ ಪ್ರಿಂಟ್ ಆದರೆ ಸಾಲದು. ಈ ಧ್ಯೇಯವಾಕ್ಯ ಎಲ್ಲಾ ಕನ್ನಡಿಗರ ಮನಸಿನಲ್ಲಿ ಛಾಪು ಮೂಡಬೇಕು. ರಾಜ್ಯದ ರಾಜಧಾನಿಯಲ್ಲಿ ಕಾವೇರಿ ನೀರು ಕುಡಿಯುವ ಪರಭಾಷಿಗರ ದರ್ಪ ಇದೇ ರೀತಿ ಮುಂದುವರಿದರೆ ಮತ್ತು ನಮ್ಮವರು ನಮ್ಮ ಭಾಷೆಯ ಮೇಲೆ ಸ್ವಾಭಿಮಾನ ಬೆಳೆಸಿಕೊಳ್ಳದಿದ್ದಲ್ಲಿ, 8 ಜ್ಞಾನಪೀಠ ಪಡೆದು ಇತರ ಭಾಷೆಗಳಿಗಿಂತ ಮುಂಚೂಣಿಯಲ್ಲಿರುವ ನಮ್ಮ ಭಾಷೆ ಅಧೋಗತಿಗೆ ಇಳಿಯಬಹುದು. ಹಾಗಾಗದಿರಲಿ ಎಂದು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಬೇಡೋಣ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications