ಕನ್ನಡ ನಾಡಲ್ಲೇ ಜಾಗೃತವಾಗದ ಕನ್ನಡ ಪ್ರೇಮ

ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ವರ್ಷಕ್ಕೆ ಒಂದು ಕನ್ನಡ ಚಿತ್ರವನ್ನಾದರೂ ಹಾಕಬೇಕೆಂಬ ಸರಕಾರದ ಸುತ್ತೋಲೆ ಧೂಳು ತುಂಬಿ ಕೂತಿದೆ. ಇತರ ರಾಜ್ಯದ ರಾಜಧಾನಿಗೆ ಹೋಗಿ ನೆಲೆಸುವ ನಮ್ಮ ಭಾಷಿಗರು ಆಯಾಯ ರಾಜ್ಯದ ಭಾಷೆಗಳನ್ನು ಕೆಲವೇ ತಿಂಗಳಲ್ಲಿ ಕಲಿಯಬೇಕಾದರೆ, ದಶಕಗಳಿಂದ ಕಾವೇರಿ ನೀರು ಕುಡಿಯುತ್ತಿರುವ ಇವರಿಗೆ ಕನ್ನಡ ಯಾಕೆ ಬರುತ್ತಿಲ್ಲ? ಅದಕ್ಕೆ ವಿಶಾಲ ಹೃದಯದ ಕನ್ನಡಿಗರು ಅವರ ಭಾಷೆಯಲ್ಲೇ ವ್ಯವಹರಿಸುತ್ತಿರುವುದೂ ಒಂದು ಕಾರಣ ಆಗಿರಬಹುದು.
ನಮ್ಮ ಸಂಸ್ಕೃತಿ ಪರಿಚಯಿಸುವ ಗೋಡೆ ಬರಹಗಳು, ಚಿತ್ರಗಳು ನಗರದ ಹೃದಯ ಭಾಗದಲ್ಲಿ ಕಾಣುತ್ತೇವೆ. ಇದು ಒಳ್ಳೆ ಕೆಲಸ, ಆದರೆ ಅಂತಹ ಬರಹ ಚಿತ್ರಗಳ ಮುಂದೆ ಜನರು ಮೂತ್ರ ವಿಸರ್ಜನೆ ಮಾಡುತ್ತಾರಲ್ಲಾ ಸ್ವಾಮಿ, ಅದಕ್ಕೆ ಏನು ಮಾಡೋಣ ಹೇಳಿ? ವರ್ಷಕ್ಕೆ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಬಾವುಟ ಹಾಕಿದರೆ ಸಾಕೆ? ಅಂದು ಮಾತ್ರ ಕನ್ನಡ ಭಾಷೆಗೆ ಮರ್ಯಾದೆ ನೀಡಿದರೆ ಸಾಕೆ? ಇಂತಹ ಅವಮಾನಕಾರಿ ಘಟನೆ ನಡೆಯುತ್ತಲೇ ಇರುತ್ತಿರಬೇಕಾದರೆ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಚ್ಚೆತ್ತುಕೊಳ್ಳದಿದ್ದರೆ ಮುಂದೆನೂ ಇಂಥ ಘಟನೆಗಳು ನಡೆಯೋದು ಖಂಡಿತ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎನ್ನುವ ಪದ ಬರೀ ಬ್ಯಾನರ್ ನಲ್ಲಿ, ಕೈಪಿಡಿಯಲ್ಲಿ ಪ್ರಿಂಟ್ ಆದರೆ ಸಾಲದು. ಈ ಧ್ಯೇಯವಾಕ್ಯ ಎಲ್ಲಾ ಕನ್ನಡಿಗರ ಮನಸಿನಲ್ಲಿ ಛಾಪು ಮೂಡಬೇಕು. ರಾಜ್ಯದ ರಾಜಧಾನಿಯಲ್ಲಿ ಕಾವೇರಿ ನೀರು ಕುಡಿಯುವ ಪರಭಾಷಿಗರ ದರ್ಪ ಇದೇ ರೀತಿ ಮುಂದುವರಿದರೆ ಮತ್ತು ನಮ್ಮವರು ನಮ್ಮ ಭಾಷೆಯ ಮೇಲೆ ಸ್ವಾಭಿಮಾನ ಬೆಳೆಸಿಕೊಳ್ಳದಿದ್ದಲ್ಲಿ, 8 ಜ್ಞಾನಪೀಠ ಪಡೆದು ಇತರ ಭಾಷೆಗಳಿಗಿಂತ ಮುಂಚೂಣಿಯಲ್ಲಿರುವ ನಮ್ಮ ಭಾಷೆ ಅಧೋಗತಿಗೆ ಇಳಿಯಬಹುದು. ಹಾಗಾಗದಿರಲಿ ಎಂದು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಬೇಡೋಣ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications