ಕನ್ನಡಪ್ರಭದಲ್ಲಿ ಯುಬಿ ಪವನಜರ e-ಪಾಠಶಾಲೆ

ಆಟವಾಡೋಣವಾ : ಆಟ ಆಡುವುದು ಯಾರಿಗೆ ಇಷ್ಟವಿಲ್ಲ? ಗಣಕಾಧಾರಿತ ಆಟಗಳಲ್ಲಿ ಪ್ರಮುಖವಾಗಿ ಎರಡು ಬಗೆ. ಗಣಕದಲ್ಲೇ ಆಡುವಂತದ್ದು ಮತ್ತು ಅಂತರಜಾಲತಾಣದಲ್ಲಿ ಆಡುವಂತದ್ದು. ಅಂತರಜಾಲದಲ್ಲೇ ಅಂದರೆ ಜಾಲತಾಣದಲ್ಲಿ ಆಡುವಂತಹ ಆಟಗಳನ್ನು ನೀಡುವಂತಹ ಜಾಲತಾಣಗಳು ಹಲವಾರಿವೆ. ಅಂತಹ ಒಂದು ಭಾರತೀಯ ಜಾಲತಾಣ zapak.com. ಈ ಜಾಲತಾಣದಲ್ಲಿ ಉಚಿತವಾಗಿ ಆಡಬಲ್ಲ ಆಟಗಳು ಹಲವಾರಿವೆ. ಸಾಮಾನ್ಯವಾಗಿ ಆಟಗಳ ಕಡತಗಳು ತುಂಬ ದೊಡ್ಡ ಗಾತ್ರದಾಗಿರುತ್ತವೆ. ಅಂದರೆ ಒಳ್ಳೆಯ ಬ್ರಾಡ್ಬ್ಯಾಂಡ್ ಸಂಪರ್ಕ ಇದ್ದರೆ ಈ ಆಟಗಳನ್ನು ಚೆನ್ನಾಗಿ ಆಡಬಹುದು. ಭಾರತದಲ್ಲಿ ಎಲ್ಲರಿಗೂ ಇಂತಹ ಸಂಪರ್ಕ ಇಲ್ಲವೆಂದು ಅರಿತಿರುವ ಈ ಜಾಲತಾಣದವರು ಕಡಿಮೆ ವೇಗದ ಸಂಪರ್ಕ ಇರುವವರಿಗೆಂದೇ ಇನ್ನೊಂದು ಆವೃತ್ತಿಯನ್ನೂ ನೀಡಿದ್ದಾರೆ.
ಈಗ ಡೌನ್ಲೋಡ್ ಮಾಡಿಕೊಂಡು ಆಟ ತಯಾರಿಸೋಣವಾ : ಗಣಕದಲ್ಲಿ ಆಟ ಆಡುವುದೇನೋ ಸರಿ. ಅದರಲ್ಲಿ ನಿಮ್ಮದೇನು ಸಾಧನೆ? ಸಾಧ್ಯವಿದ್ದರೆ ಆಟ ತಯಾರಿಸಿ ನೋಡೋಣ ಎಂದು ಯಾರಾದರು ನಿಮಗೆ ಪಂಥಾಹ್ವಾನ ಮಾಡಿದ್ದಾರೆಯೇ? “ಅಯ್ಯೋ ಅದಕ್ಕೆ ತುಂಬ ವರ್ಷಗಳಿಂದ ಪ್ರೋಗ್ರಾಮ್ಮಿಂಗ್ ಕಲಿತಿರಬೇಕು. ಅದು ಕಲಿಯದವರಿಂದ ಅಸಾಧ್ಯ" ಎಂದು ಕರುಬಬೇಕಿಲ್ಲ. ಯಾವುದೇ ಪ್ರೋಗ್ರಾಮ್ಮಿಂಗ್ ಕಲಿಯದೆಯೇ ಆಟ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ Gamemaker. ಇದರಲ್ಲಿ ಉಚಿತ ಮತ್ತು ಹಣ ನೀಡಬೇಕಾಗಿರುವ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯನ್ನು ಡೌನ್ಲೋಡ್ ಮಾಡಿ ಅದನ್ನು ಕಲಿತ ನಂತರ ಬೇಕಿದ್ದರೆ ಹಣ ನೀಡಿ ಪೂರ್ತಿ ಆವೃತ್ತಿಯನ್ನು ಕೊಂಡುಕೊಳ್ಳಬಹುದು. ಗಣಕ ಆಟ ತಯಾರಿಸಿ ಅದನ್ನು ಮಾರಿ ಹಣ ಸಂಪಾದಿಸಲೂಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/9Sz28S.
ಒಂದು e-ಸುದ್ದಿ : ಚಿತ್ರವ ತಿದ್ದಿದರೆ ಶಿಕ್ಷೆಯ ತಿದ್ದಿದಂತೆಯೇ? ಅಮೇರಿಕದ ಡಾರಿಲ್ ಸೈಮನ್ ಎಂಬಾತನಿಗೆ ಹಲವು ಕಲೆಗಳು ತಿಳಿದಿದ್ದವು. ಅವುಗಳಲ್ಲಿ ಪ್ರಮುಖವಾದವು, ಕ್ರೆಡಿಟ್ ಕಾರ್ಡ್ ನಕಲು ಮಾಡುವುದು, ಕಾರು ಕಳವು ಮಾಡುವುದು, ಜಾದೂ ಮಾಡುವುದು ಹಾಗೂ ಫೋಟೋಶಾಪ್ ಮಾಡುವುದು. ಈತನ ಪಾಂಡಿತ್ಯ ಈ ಕಲೆಗಳಲ್ಲಿ ಚೆನ್ನಾಗಿದ್ದವು, ಒಂದನ್ನು ಹೊರತು ಪಡಿಸಿ. ಅದುವೇ ಫೋಟೋಶಾಪ್ ಬಳಸಿ ಪೋಟೋ ತಿದ್ದುವ ಕಲೆ. ಅದೊಂದರಲ್ಲಿ ಆತನ ಪರಿಣತಿ ಕಡಿಮೆಯಾಗಿತ್ತು. ಆತ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ, ತಾನು ಸಮಾಜ ಸೇವೆ ಕೂಡ ಮಾಡಿದ್ದೇನೆ ಎಂದು ತೋರಿಸಿ ಕಡಿಮೆ ಶಿಕ್ಷೆಗೆ ಪ್ರಯತ್ನಿಸಿದ. ಅದಕ್ಕಾಗಿ ಕೆಲವು ಸಮಾಜ ಸೇವೆಯ ಸಂಸ್ಥೆಗಳಲ್ಲಿ ಅನಾಥ ಮಕ್ಕಳಿಗೆ ತಾನು ಸಹಾಯ ಮಾಡುತ್ತಿರುವಂತೆ ತೋರಿಸುವ ಚಿತ್ರಗಳನ್ನು ಫೋಟೋಶಾಪ್ ಬಳಸಿ ತಯಾರಿಸಿ ಆತ ನ್ಯಾಯಾಧೀಶರಿಗೆ ನೀಡಿದ್ದ. ಆದರೆ ಈ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ತಂತ್ರಜ್ಞರು ಆತನ ಕರಾಮತಿಯನ್ನು ಪತ್ತೆಹಚ್ಚಿದರು. ಈಗ ಆತನಿಗೆ 24 ವರ್ಷ ಶಿಕ್ಷೆಯಾಗಿದೆ.
e- ಪದ : ಫೋಟೋಶಾಪ್ (photoshop) ಗಣಕದಲ್ಲಿ ಚಿತ್ರ (ಗ್ರಾಫಿಕ್ಸ್) ತಯಾರಿಸಲು, ಛಾಯಾಚಿತ್ರಗಳನ್ನು ತಿದ್ದಲು ಅನುವು ಮಾಡಿಕೊಡುವ ಅಡೋಬಿ ಕಂಪೆನಿಯವರ ಜಗತ್ಪ್ರಸಿದ್ಧ ತಂತ್ರಾಂಶ. ಇದು ಎಷ್ಟು ಜನಪ್ರಿಯವೆಂದರೆ ಫೋಟೋಶಾಪ್ ಪದವನ್ನು ಇಂಗ್ಲಿಷ್ ನಿಘಂಟುವಿಗೆ ಸೇರಿಸಲಾಗಿದೆ. ಛಾಯಾಚಿತ್ರಗಳನ್ನು ತಿದ್ದುವುದಕ್ಕೆ ಫೋಟೋಶಾಪ್ ಮಾಡಿದೆ ಎಂದು ಹೇಳುವ ವಾಡಿಕೆಯೇ ಆಗಿಬಿಟ್ಟಿದೆ.
e - ಸಲಹೆ : ಚಿತ್ರದುರ್ಗದ ತಿಪ್ಪೇಸ್ವಾಮಿಯವರ ಪ್ರಶ್ನೆ: ನನಗೆ ಛಾಯಾಚಿತ್ರಗಳನ್ನು ಚಲನಚಿತ್ರವಾಗಿಸಿಕೊಡುವ ತಂತ್ರಾಂಶ ಬೇಕು (ಫೋಟೋ ಸ್ಲೈಡ್ಶೋ ಮೇಕರ್). ನಾನು ಕೆಲವನ್ನು ಡೌನ್ಲೋಡ್ ಮಾಡಿ ನೋಡಿದೆ. ಅವು ಫ್ಲಾಶ್ ಫೈಲ್ ಮಾಡಿಕೊಡುತ್ತವೆ. ನನಗೆ ಡಿ.ವಿ.ಡಿ. ಪ್ಲೇಯರ್ನಲ್ಲಿ ಬಳಸಬಲ್ಲ ಡಿ.ವಿ.ಡಿ.ಯನ್ನಾಗಿಸಿಕೊಡುವ ಉಚಿತ ತಂತ್ರಾಂಶ ಬೇಕು. ಅಂತಹ ತಂತ್ರಾಂಶ ಸಿಗುತ್ತದೆಯೇ?
ಉ: ನೀವು DVD slideshow GUI ಬಳಸಬಹುದು. ಇದು http://bit.ly/bE3pJO ಜಾಲತಾಣದಲ್ಲಿ ಸಿಗುತ್ತದೆ. ಇದು ನಿಮ್ಮ ಫೊಟೋಗಳನ್ನು ಡಿ.ವಿ.ಡಿ. ಸಿನಿಮಾದ ISO ಆಗಿ ಮಾಡಿಕೊಡುತ್ತದೆ. ನಂತರ ಇದನ್ನು ಡಿ.ವಿ.ಡಿ.ಗೆ ನೀವು ಬರೆದರೆ ನಿಮಗೆ ಡಿ.ವಿ.ಡಿ. ಪ್ಲೇಯರ್ನಲ್ಲಿ ಚಲಾಯಿಸಬಲ್ಲ ಚಲನಚಿತ್ರ ಸಿಗುತ್ತದೆ.
ಕಂಪ್ಯೂತರ್ಲೆ : ಒಮ್ಮೆ ಕೈಲಾಸದಲ್ಲಿ ಸುಬ್ರಹ್ಮಣ್ಯನಿಗೂ ಗಣಪನಿಗೂ ಪಂದ್ಯ ಏರ್ಪಟ್ಟಿತ್ತು ; ಯಾರು ಮೊದಲು ಇಡೀ ಪ್ರಪಂಚಕ್ಕೆ ಮೂರು ಸಲ ಸುತ್ತು ಬರುತ್ತಾರೆ ಎಂದು. ಶಿವ ತೀರ್ಪುಗಾರ. ಆತ ಒಂದು ನಿಯಮ ರೂಪಿಸಿದ. ಅದರಂತೆ ಸುಬ್ರಹ್ಮಣ್ಯ ಮತ್ತು ಗಣಪ ಇಬ್ಬರೂ ಪ್ರಪಂಚ ಸುತ್ತಿದ್ದಕ್ಕೆ ದಾಖಲೆಗೆ ಎಲ್ಲ ಪ್ರಮುಖ ಸ್ಥಳಗಳಲ್ಲಿ ತಾನು ಇರುವ ಫೋಟೋ ನೀಡಬೇಕಿತ್ತು. ಸುಬ್ರಹ್ಮಣ್ಯ ನವಿಲು ಹತ್ತಿ ನಿಧಾನವಾಗಿ ಪ್ರಪಂಚ ಸುತ್ತಿ ಎಲ್ಲ ಜಾಗಗಳ ಫೋಟೋ ಸಮೇತ ಹಿಂತಿರುಗಿ ಬಂದ. ಆದರೆ ಗಣಪ ಆಗಲೇ ಪಂದ್ಯ ಗೆದ್ದಿದ್ದಾನೆ ಎಂದು ಘೋಷಿಸಲಾಗಿತ್ತು. ಆತ ಮಾಡಿದ್ದೇನೆಂದರೆ ಗೂಗ್ಲ್ ಮೂಲಕ ಎಲ್ಲ ಖ್ಯಾತ ಸ್ಥಳಗಳ ಚಿತ್ರ ಪಡೆದು ಅದನ್ನು ಫೊಟೋಶಾಪ್ ಮಾಡಿ ಎಲ್ಲ ಸ್ಥಳಗಳಲ್ಲಿ ತಾನಿರುವಂತೆ ಮೂಡಿಸಿ ಶಿವನಿಗೆ ಒಪ್ಪಿಸಿದ್ದ!
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications