ಧಾರವಾಡ ಅಸಲಿ ಕನ್ನಡ ಭಾಷೆಯ ಕಗ್ಗೊಲೆ

ನಾನು ದಟ್ಸ್ ಕನ್ನಡದ ಅಭಿಮಾನಿ ಬಳಗದ ಖಾಯಂ ಸದಸ್ಯ. ನಿಮ್ಮ ಈ ವೆಬ್ ಸೈಟನ್ನು ಕಳೆದ ಮೂರು ವರ್ಷಗಳಿಂದ ಓದುತ್ತಿದ್ದೇನೆ. ಓದುಗ ವೃಂದದವರೂ ಕೂಡ ವರದಿಗಾರರಾಗಬಹುದು ಎಂದು ಅವರಿಗೆ ನೀವು ವೇದಿಕೆ ಕಲ್ಪಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.
ನಾನು ಬೆಳಗಾವಿ ಜಿಲ್ಲೆಯವನು. ಅಂದ್ರೆ ಉತ್ತರ ಕರ್ನಾಟಕದವನು. ಸಂಪೂರ್ಣ ನೂರಕ್ಕೆ ನೂರು ಶೇಕಡ ಮರಾಠಿ ಮಾತಾಡೋ ಊರು ನನ್ನದು. ಆದ್ರು ಕನ್ನಡ ನನ್ನ ಕಲಿಕಾ ಭಾಷೆ ಮತ್ತು ಹೃದಯದ ಭಾಷೆ. ನನ್ನ ಉತ್ತರ ಕರ್ನಾಟಕ ಭಾಷಾ ಸೊಗಡಿಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ಕನ್ನಡ ದೃಶ್ಯ ಮಾಧ್ಯಮಗಳಿಂದ ನಡೀತಾನೆ ಇದೆ.
ಇದನ್ನ ಪ್ರತಿಭಟಿಸುವುದಕ್ಕೆ ನನಗೆ ಒಂದು ವೇದಿಕೆ ಬೇಕು. ಅದನ್ನ ನೀವು ಕಲ್ಪಿಸುತ್ತೀರಿ ಎಂಬ ನಂಬಿಕೆಯಿದೆ. ನನ್ನ ಲೇಖನದಲ್ಲಿ ನಾನು ಬೆಳಗಾವಿ-ಧಾರವಾಡ ಜಿಲ್ಲೆಗಳಲ್ಲಿ ಬಳಸೋ ಕನ್ನಡ ಶಬ್ದಗಳ ಸಂಗ್ರಹವನ್ನು ಸಂಪಾದಿಸಿದ್ದೇನೆ. ಅದನ್ನು ನೀವು ಕಂತು ಕಂತುಗಳಲ್ಲಿ ಪ್ರಕಟಿಸಿ ಇಲ್ಲಿನ ಭಾಷಾ ಶೈಲಿಯನ್ನು ಬೇರೆಯವರು ತಿಳಿದುಕೊಳ್ಳುವುದಕ್ಕೆ ಮತ್ತು ದೃಶ್ಯ ಮಾಧ್ಯಮದ ನಕಲಿ ಅಪಹಾಸ್ಯವನ್ನು ಅಳಿಸಿ, ಬದಲಿಗೆ ಉತ್ತರ ಕರ್ನಾಟಕ ಕನ್ನಡದ ನಿಜವಾದ ಸೊಗಡನ್ನು ಜನರ ಮುಂದೆ ಇಡಬೇಕೆಂದು ಕೋರುತ್ತೇನೆ.
ಉತ್ತರ ಕರ್ನಾಟಕದಲ್ಲೂ ಕೂಡ ಒಂದೇ ತರಹದ ಶೈಲಿ ಇಲ್ಲ. ಅದನ್ನ ನನಗೆ ಬೇರೆ ಜನರಿಗೆ ಸಾರಿ ಹೇಳಬೇಕಾಗಿದೆ. ಸರ್, ದಯವಿಟ್ಟು ತಾವು ನನ್ನ ಶಬ್ದ ಸಂಗ್ರಹವನ್ನು ಅವಶ್ಯವಿದ್ದರೆ ಬದಲಾವಣೆ ಮಾಡಿ ಕಂತುಗಳಲ್ಲಿ ಪ್ರಕಟಿಸಿ ಅಂತಾ ಕೋರುತ್ತೇನೆ. ಪ್ರಕಟಿಸಿದರೆ ಇಡೀ ಉತ್ತರ ಕರ್ನಾಟಕದ ಪರವಾಗಿ ನಾನು ನಿಮಗೆ ಚಿರಋಣಿ.
ಧನ್ಯವಾದಗಳೊಂದಿಗೆ
ಮಹೇಶ ಗಜಬರ B.E,M.Tech
ನಂ.36, ಚಿಕ್ಕಲವಾಳ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರ
ತಾ:ಚಿಕ್ಕೋಡಿ, ಜಿ:ಬೆಳಗಾವಿ-591237 ಕರ್ನಾಟಕ
ಮಿಂಚೆ ವಿಳಾಸ : [email protected]
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications