ಧಾರವಾಡ ಅಸಲಿ ಕನ್ನಡ ಭಾಷೆಯ ಕಗ್ಗೊಲೆ

ನಾನು ದಟ್ಸ್ ಕನ್ನಡದ ಅಭಿಮಾನಿ ಬಳಗದ ಖಾಯಂ ಸದಸ್ಯ. ನಿಮ್ಮ ಈ ವೆಬ್ ಸೈಟನ್ನು ಕಳೆದ ಮೂರು ವರ್ಷಗಳಿಂದ ಓದುತ್ತಿದ್ದೇನೆ. ಓದುಗ ವೃಂದದವರೂ ಕೂಡ ವರದಿಗಾರರಾಗಬಹುದು ಎಂದು ಅವರಿಗೆ ನೀವು ವೇದಿಕೆ ಕಲ್ಪಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.
ನಾನು ಬೆಳಗಾವಿ ಜಿಲ್ಲೆಯವನು. ಅಂದ್ರೆ ಉತ್ತರ ಕರ್ನಾಟಕದವನು. ಸಂಪೂರ್ಣ ನೂರಕ್ಕೆ ನೂರು ಶೇಕಡ ಮರಾಠಿ ಮಾತಾಡೋ ಊರು ನನ್ನದು. ಆದ್ರು ಕನ್ನಡ ನನ್ನ ಕಲಿಕಾ ಭಾಷೆ ಮತ್ತು ಹೃದಯದ ಭಾಷೆ. ನನ್ನ ಉತ್ತರ ಕರ್ನಾಟಕ ಭಾಷಾ ಸೊಗಡಿಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ಕನ್ನಡ ದೃಶ್ಯ ಮಾಧ್ಯಮಗಳಿಂದ ನಡೀತಾನೆ ಇದೆ.
ಇದನ್ನ ಪ್ರತಿಭಟಿಸುವುದಕ್ಕೆ ನನಗೆ ಒಂದು ವೇದಿಕೆ ಬೇಕು. ಅದನ್ನ ನೀವು ಕಲ್ಪಿಸುತ್ತೀರಿ ಎಂಬ ನಂಬಿಕೆಯಿದೆ. ನನ್ನ ಲೇಖನದಲ್ಲಿ ನಾನು ಬೆಳಗಾವಿ-ಧಾರವಾಡ ಜಿಲ್ಲೆಗಳಲ್ಲಿ ಬಳಸೋ ಕನ್ನಡ ಶಬ್ದಗಳ ಸಂಗ್ರಹವನ್ನು ಸಂಪಾದಿಸಿದ್ದೇನೆ. ಅದನ್ನು ನೀವು ಕಂತು ಕಂತುಗಳಲ್ಲಿ ಪ್ರಕಟಿಸಿ ಇಲ್ಲಿನ ಭಾಷಾ ಶೈಲಿಯನ್ನು ಬೇರೆಯವರು ತಿಳಿದುಕೊಳ್ಳುವುದಕ್ಕೆ ಮತ್ತು ದೃಶ್ಯ ಮಾಧ್ಯಮದ ನಕಲಿ ಅಪಹಾಸ್ಯವನ್ನು ಅಳಿಸಿ, ಬದಲಿಗೆ ಉತ್ತರ ಕರ್ನಾಟಕ ಕನ್ನಡದ ನಿಜವಾದ ಸೊಗಡನ್ನು ಜನರ ಮುಂದೆ ಇಡಬೇಕೆಂದು ಕೋರುತ್ತೇನೆ.
ಉತ್ತರ ಕರ್ನಾಟಕದಲ್ಲೂ ಕೂಡ ಒಂದೇ ತರಹದ ಶೈಲಿ ಇಲ್ಲ. ಅದನ್ನ ನನಗೆ ಬೇರೆ ಜನರಿಗೆ ಸಾರಿ ಹೇಳಬೇಕಾಗಿದೆ. ಸರ್, ದಯವಿಟ್ಟು ತಾವು ನನ್ನ ಶಬ್ದ ಸಂಗ್ರಹವನ್ನು ಅವಶ್ಯವಿದ್ದರೆ ಬದಲಾವಣೆ ಮಾಡಿ ಕಂತುಗಳಲ್ಲಿ ಪ್ರಕಟಿಸಿ ಅಂತಾ ಕೋರುತ್ತೇನೆ. ಪ್ರಕಟಿಸಿದರೆ ಇಡೀ ಉತ್ತರ ಕರ್ನಾಟಕದ ಪರವಾಗಿ ನಾನು ನಿಮಗೆ ಚಿರಋಣಿ.
ಧನ್ಯವಾದಗಳೊಂದಿಗೆ
ಮಹೇಶ ಗಜಬರ B.E,M.Tech
ನಂ.36, ಚಿಕ್ಕಲವಾಳ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರ
ತಾ:ಚಿಕ್ಕೋಡಿ, ಜಿ:ಬೆಳಗಾವಿ-591237 ಕರ್ನಾಟಕ
ಮಿಂಚೆ ವಿಳಾಸ : [email protected]
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications