ಗೂಗಲ್ಲಿಗೆ ಕನ್ನಡ ಸುದ್ದಿ ಅಸ್ಪೃಶ್ಯವಾಯಿತೆ?

ಕೆಲ ಉದಾಹರಣೆಗಳನ್ನು ಗಮನಿಸೋಣ. ಕನ್ನಡದಲ್ಲಿ ಮಕ್ಕಳಿಗಾಗಿ ಇರುವ ಪತ್ರಿಕೆಗಳ ಬಗ್ಗೆ ಪ್ರಸ್ತಾಪಿಸಿದಾಗ, ಅಂಥ ಪತ್ರಿಕೆಗಳೆಲ್ಲಿವೆ? ಈಗ ಅವನ್ನು ಯಾರು ಓದ್ತಾರೆ? ಅಂತ ಅಸಡ್ಡೆಯಿಂದ ಕೇಳೋರೆ ಜಾಸ್ತಿ. ಅದನ್ನು ಹುಡುಕಿಕೊಂಡು ಹೋಗಿ ಕೊಳ್ಳುವವರು ಎಷ್ಟು ಜನ? ಇದೇ ಸ್ಥಿತಿ ಕನ್ನಡ ದಿನಪತ್ರಿಕೆಗಳಿಗೂ ಬಂದೊದಗಿದೆ. ಆಂಗ್ಲ ಪತ್ರಿಕೆಗಳಲ್ಲಿ ಕನ್ನಡಿಗರ ಅಸಡ್ಡೆಯಾಗುತ್ತಿದೆ ಎಂದು ತಿಳಿದೂ ಪ್ರಶ್ನಿಸಲು ಯಾರೂ ಮುಂದಾಗುವುದಿಲ್ಲ. ಅಸಲಿಗೆ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಓದುವ, ಕನ್ನಡವನ್ನು ಪ್ರೀತಿಸುವ ಕ್ರಿಯೆಗೆ ಕುಂದುಂಟಾಗುತ್ತಿದೆ.
ಕರ್ನಾಟಕದಲ್ಲಿ ಕನ್ನಡ ಬೆಳೆದಿಲ್ಲ, ಅಸಡ್ಡೆಗೆ ಗುರಿಯಾಗುತ್ತಿದೆ, ತಕ್ಕ ಸ್ಥಾನಮಾನ ಸಿಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ ಇದಕ್ಕೆ ಕಾರಣರು ಕೂಡ ನಾವೇ ಅನ್ನುವುದು ಕೂಡ ಅಷ್ಟೇ ಸತ್ಯ. ಈ ಕಹಿ ಸತ್ಯವನ್ನು ಕನ್ನಡಿಗರು ಒಪ್ಪಿಕೊಳ್ಳಲೇಬೇಕು.
ಈಗ ಜನಪ್ರಿಯ ಹುಡುಕು ತಾಣ ಗೂಗಲ್ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೂ ಮನ್ನಣೆ ದೊರೆತಿದೆ, ಆದರೆ ಕನ್ನಡ ಸುದ್ದಿಗಳು ದುರ್ಬೀನು ಹಾಕಿ ಹುಡುಕಿದರೂ ಸಿಕ್ಕುವುದಿಲ್ಲ. ಇದಕ್ಕೆ ಗೂಗಲ್ ನವರನ್ನು ಬೈದು ಪ್ರಯೋಜನವಿಲ್ಲ. ಕನ್ನಡಕ್ಕೆ ಆ ತಾಣದಲ್ಲಿ ಸ್ಥಾನ ದೊರಕಿಸಿಕೊಡಲು ಬಡಿದಾಡಿಯೂ ಪ್ರಯೋಜನವಿಲ್ಲ. ಆದರೆ, ಆ ಸ್ಥಾನ ದಕ್ಕಿಸಿಕೊಳ್ಳಲು ಕನ್ನಡಿಗರಾದ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಮತ್ತು ಗೂಗಲ್ ಅಗತ್ಯಗಳಿಗೆ ತಕ್ಕಹಾಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಾದಿದೆ.
ಇನ್ನೊಂದು ಮಹತ್ವದ ವಿಷಯವೆಂದರೆ, ಕನ್ನಡ ಬ್ಲಾಗುಗಳೆಲ್ಲ ಕನ್ನಡದ ಎಲ್ಲ ಬ್ಲಾಗುಗಳೊಂದಿಗೆ, ಅಂತರ್ಜಾಲ ತಾಣಗಳೊಂದಿಗೆ, ನೆಟ್ವರ್ಕಿಂಗ್ ವೆಬ್ ಸೈಟ್ ಗಳೊಂದಿಗೆ ಸೇತುವೆ ಕಲ್ಪಿಸಬೇಕಾಗಿದೆ. ಈ ವಿಷಯದಲ್ಲಿ ಸಂಕುಚಿತ ಭಾವನೆ ಬದಿಗಿಟ್ಟು ಮುಕ್ತಮನಸ್ಸಿನಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು.
ಗೂಗಲ್ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಕನ್ನಡಕ್ಕೆ ಸ್ಥಾನವೇಕಿಲ್ಲ ಎಂಬ ಪ್ರಶ್ನೆಗೆ ದಟ್ಸ್ ಕನ್ನಡದ ನಿತ್ಯ ಓದುಗ ಗೌತಮ್ ಎಂಬುವವರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಅದನ್ನು ಇಲ್ಲಿ ಓದಿರಿ.
ಕನ್ನಡದ ಬಳಕೆಗೆ ಏನು ಮಾಡಬೇಕು?
* ಮೂಲಭೂತವಾಗಿ ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
* ಅಂತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿರುವ ಮತ್ತು ಯುನಿಕೋಡ್ ಇರುವ ಎಲ್ಲ ತಾಣಗಳನ್ನು ಕಡ್ಡಾಯವಾಗಿ ಓದುತ್ತ ಪ್ರೋತ್ಸಾಹಿಸಬೇಕು.
* ಸರ್ಚ್ ಇಂಜಿನ್ ಗಳಲ್ಲಿ ಮಾಹಿತಿಯನ್ನು ಹೆಕ್ಕಿ ತೆಗೆಯಲು ಕನ್ನಡ ಪದಗಳನ್ನೇ ಯಥೇಚ್ಛವಾಗಿ ಬಳಸಬೇಕು.
* ಉಳಿದ ಎಲ್ಲ ಕನ್ನಡ ಅಂತರ್ಜಾಲ ತಾಣಗಳಲ್ಲಿ (ಮುದ್ರಣ ಮಾಧ್ಯಮವೂ ಸೇರಿದೆ) ಯುನಿಕೋಡ್ ಬಳಸಲು ಒತ್ತಾಯಿಸಬೇಕು.
ಇದನ್ನೂ ಓದಿ : ಗೂಗಲ್ ಯಂತ್ರವನ್ನು ಓಲೈಸುವುದು ಹೇಗೆ? »
ಗೂಗಲ್ ನಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ದೂರನ್ನು ಇಲ್ಲಿ ದಾಖಲಿಸಿ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications