ಯುಗಯುಗಗಳೆ ಸಾಗಲಿ ನಿಮ್ಮ ಪ್ರೀತಿ ಶಾಶ್ವತ ಇರಲಿ

ಸರಿಯಾಗಿ 9 ವರ್ಷಗಳ ಹಿಂದೆ, 2000ನೇ ಇಸ್ವಿಯ ಯುಗಾದಿಯ ಹಿಂದಿನ ದಿನ ದಟ್ಸ್ ಕನ್ನಡವೆಂಬ ಪುಟ್ಟಪುಟಾಣಿ ಸಸಿಯನ್ನ ಇಂಟರ್ನೆಟ್ಟಿನಲ್ಲಿ ನೆಟ್ಟಾಗ ಏನೋ ತವಕ, ತಲ್ಲಣ. ಹಿಂದಿನ ದಿನ ರಾತ್ರಿ ಆಫೀಸಿನಲ್ಲಿ ಊಟ ಮಾಡೋಣವೆಂದು ಹೋದರೆ, ಪಾತ್ರೆ ಪಗಡಗಳೆಲ್ಲ ಖಾಲಿಖಾಲಿ. ಹಾಗೇ ಖಾಲಿ ಹೊಟ್ಟೆಯಲ್ಲಿ ಸೋಫಾದ ಮೇಲೆ ಮಲಗಿ ಬೆಳಗಿನ ಜಾವ ನಾಲ್ಕು ಗಂಟೆಗೆದ್ದು ಮನೆ ತಲುಪಿದಾಗ, ಮನೆಯಲ್ಲೆಲ್ಲ ಯುಗಾದಿಯ ಸಂಭ್ರಮ.
'ಇವತ್ತು ಸೂಟಿ ಹೌದಲ್ಲೋ?' ಅಂತ ಮನೆಯಲ್ಲಿ ಕೇಳಿದ್ದಕ್ಕೆ, 'ಎಲ್ಲಿ ಸೂಟಿ, ಆಫೀಸಿನ್ಯಾಗನ ಹಬ್ಬ' ಅಂತ ದಡಬಡಾಯಿಸಿ ಸ್ನಾನ ಮಾಡಿ ತಿಂಡಿ ಶಾಸ್ತ್ರ ಮಾಡಿ ಆಫೀಸಿಗೆ ಮರಳಿದಾಗ ಬೆಳಗಿನ 9 ಗಂಟೆ. ಹಿಂದಿನ ರಾತ್ರಿ ನೆಟ್ಟ ಸಸಿಯಲ್ಲಿ ಚೈತ್ರದ ಚಿಗುರು ಕಂಡಾಗ ಹರ್ಷಿಸಿದ್ದು ನಮ್ಮ ದಟ್ಸ್ ಕನ್ನಡ ತಂಡದವರಷ್ಟೇ ಅಲ್ಲ, ಇಡೀ ವಿಶ್ವದ ಕನ್ನಡಿಗರು. ಸಸಿ ನೆಟ್ಟಿದ್ದು ನಾವಾದರೂ ಅದಕ್ಕೆ ಪಾತಿ ಮಾಡಿ, ಕಾಲಕಾಲಕ್ಕೆ ನೀರುಣಿಸಿ, ಗೊಬ್ಬರ ಹಾಕಿ ಗಿಡವಾಗಿ ಬೆಳೆಸಿದವರು ನಮ್ಮ ಓದುಗರು, ಬರಹಗಾರರು. ಒಂಬತ್ತು ವಸಂತಗಳನ್ನು ದಾಟಿಬಂದಾಗಿದೆ, ಆದರೂ ಜಾಗತಿಕ ಕನ್ನಡಿಗರು ನಮ್ಮ ಮೇಲಿಟ್ಟಿರುವ ಪ್ರೀತಿ ತೃಣಮಾತ್ರವೂ ಕಡಿಮೆಯಾಗಿಲ್ಲ.
ಕನ್ನಡ ಬಾಂಧವರ ಪ್ರೀತಿಯ ಆರೈಕೆಯಿಂದ ಇಂದು ಅದೇ ಸಸಿ ಮರವಾಗಿ ಬೆಳೆದಿದೆ. ಶಿಶಿರದಲ್ಲಿ ಎಲೆಗಳನ್ನುದುರಿಸಿಕೊಂಡಿದ್ದನ್ನು ಮರೆಮಾಚುವಂತೆ ಹೊಸ ಎಲೆಗಳು ಚಿಗುರಿಕೊಂಡಿವೆ. ಭಾರೀ ಬಿರುಗಾಳಿಗಳಿಗೂ ಜಗ್ಗದೆ ಬಲವಾದ ಬುನಾದಿಯಿಂದಾಗಿ ನೆಲವನ್ನು ಗಟ್ಟಿಯಾಗಿ ಹಿಡಿದು ನಿಂತಿದೆ. ಈಗ ಬೀಸಿರುವ ಬಿರುಗಾಳಿಯನ್ನೂ ತಡೆದುಕೊಳ್ಳುವುದೆಂಬ ಆತ್ಮವಿಶ್ವಾಸ ದಟ್ಸ್ ಕನ್ನಡದ್ದು. ಹೊಸ ಗಾಳಿ ಬೀಸಿದಂತೆ ಗೊಡ್ಡು ಮೈಯಂತಾಗದೇ ಬದಲಾವಣೆಯ ಗಾಳಿಗೆ ಮೈಯೊಡ್ಡುತ್ತಾ ಸಾಗಿದೆ. ನವೀನ ವಿನ್ಯಾಸ, ತಂತ್ರಜ್ಞಾನಗಳಿಂದ ಆಧುನಿಕತೆಯ ರೂಪು ಪಡೆಯುತ್ತ ಸಾಗಿದೆ. ಕನ್ನಡ ಎಸ್ಸೆಮ್ಮೆಸ್ಸುಗಳ ಕಲರವ, ಗೂಗಲ್ ಗ್ಯಾಡ್ಜೆಟ್ಟಿನ ಸಡಗರ, ಟ್ವಿಟ್ಟರುಗಳ ಟೂವ್ವಿ ಟೂವ್ವಿ ಸಂಭ್ರಮ ನಮ್ಮ ಮತ್ತು ಓದುಗರ ಹುರುಪು ಇಮ್ಮಡಿಸಿದೆ.
ಚಿಗುರಿನಿಂತ ಹಸಿರೆಲೆ, ಅರಳಿನಿಂತ ಹೂಗಳಿಂದಾಗಿ ಸೊಬಗು ಮತ್ತಷ್ಟು ಹೆಚ್ಚಿದೆ. ಆಗಷ್ಟೇ ಬಿಟ್ಟ ಹಣ್ಣ ತಿನ್ನಲು ಬಂದ ಹೊಸಹೊಸ ಹಕ್ಕಿಗಳ ಕಲರವ ಕೇಳಲು ಏನೋ ಆನಂದ. ಗೂಡು ಕಟ್ಟಿ ಹಾಗೆಯೇ ಬಿಟ್ಟು ಹೋಗಿರುವ ಹಳೆಯ ಹಕ್ಕಿಗಳು ಮತ್ತೆ ಮನೆ ಹುಡುಕಿಕೊಂಡು ಬರಲಿ. ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ದಟ್ಸ್ ಕನ್ನಡದ ಹೊಸಹಳೆಯ ಓದುಗರಿಗೆ, ಬರಹಗಾರರಿಗೆಲ್ಲ ಹರುಷ ತರಲಿ.
ನಮ್ಮೆಲ್ಲ ಹಿತೈಷಿಗಳಿಗೆ, ಓದುಗರಿಗೆ, ಬರಹಗಾರರಿಗೆ ಬೇವು-ಬೆಲ್ಲದ ಜೊತೆ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications