ಮಾರ್ಚ್ 23 ಭಗತ್ ಸಿಂಗ್ ಹುತಾತ್ಮರಾದ ದಿನ
ಇಂದು ಭಾರತದ ಮಹಾನ್ ಕ್ರಾಂತಿಕಾರರು ಹುತಾತ್ಮರಾದ ದಿನ. ಮಾರ್ಚ್ 23, 1931ರಂದು ಭಗತ್ ಸಿಂಗ್ ರನ್ನು ಗಲ್ಲಿಗೇರಿಸಿದಾಗ ಆತನಿಗಿನ್ನೂ 23ರ ಹರೆಯ. ಆತನ ಜೊತೆಗೆ ಸಹಚರರಾದ ರಾಜಗುರು ಮತ್ತು ಸುಖದೇವ್ ಕೂಡ ತಮ್ಮ ಪ್ರಾಣ ದೇಶಕ್ಕೆ ಅರ್ಪಿಸಿದರು. ಇವರ ಮರಣ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸಂಚಲನವನ್ನು ಉಂಟು ಮಾಡಿತು. ಆದರೆ ಇಂದಿಗೂ ಕೂಡ ಭಗತ್ ಹಾಗೂ ಸಹಚರರಿಗೆ ಬ್ರಿಟಿಷ್ ಸರ್ಕಾರ ಶಿಕ್ಷೆ ನೀಡಿದ ರೀತಿಯ ಬಗ್ಗೆ ಅನುಮಾನ ಕಾಡುತ್ತಲೇ ಇವೆ.
ಕುತೂಹಲದ ವಿಷಯವೆಂದರೆ, ಭಗತ್ ಸಿಂಗ್ ಅವರನ್ನು ಮಾರ್ಚ್ 24ರಂದು ಗಲ್ಲಿಗೇರಿಸಬೇಕಾಗಿತ್ತು. ಆದರೆ ಜನವಿರೋಧಿ ಬ್ರಿಟಿಷ್ ಸರ್ಕಾರ, ಜನರ ಪ್ರತಿಭಟನೆಯ ಮುನ್ಸೂಚನೆ ಅರಿತು ಒಂದು ದಿನ ಮುಂಚಿತವಾಗಿ ತರಾತುರಿಯಲ್ಲಿ ಗಲ್ಲಿಗೇರಿಸುವ ನಿರ್ಧಾರ ಕೈಗೊಂಡಿತು. ಈ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಬ್ರಿಟಿಷ್ ಸರ್ಕಾರ ಮುರಿಯಿತು. ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಗಲ್ಲಿಗೇರಿಸಬೇಕಾದರೆ ಭಗತ್ ಸಿಂಗ್ ಅವರ ಬಗ್ಗೆ ಸರ್ಕಾರಕ್ಕೆ ಇನ್ನೆಷ್ಟು ಭಯವಿತ್ತು ಎಂಬುದನ್ನು ಕಾಣಬಹುದು. ಆದರೆ ಈ ರೀತಿ ಕಾನೂನು ಉಲ್ಲಂಘನೆ ಇತಿಹಾಸದಲ್ಲಿ ಹಿಂದೆ ನಡೆದಿರಲಿಲ್ಲ ಎಂದು ಇತಿಹಾಸಕಾರ ಸುಧೀರ್ ಹೇಳುತ್ತಾರೆ.

ಲಾಹೋರ್ ಷಡ್ಯಂತ್ರದ ಕೇಸ್ ನಲ್ಲಿ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖದೇವ್ ಅವರಿಗೆ ಸರ್ಕಾರ ಶಿಕ್ಷೆ ಘೋಷಿಸಿದ ಮೇಲೆ ಎಲ್ಲೆಡೆ ಬಹು ಚರ್ಚೆಯ ವಿಷಯವಾಯಿತು. 23 ವರ್ಷದ ಭಗತ್ ಕೋರ್ಟಿನಲ್ಲಿ ನಡೆದುಕೊಂಡ ರೀತಿ, ಸರ್ಕಾರ ನೀಡಿದ ಶಿಕ್ಷೆ ಎಲ್ಲವೂ ಮರುದಿನ ಪ್ರಮುಖ ಪತ್ರಿಕೆಯ ಮುಖಪುಟವನ್ನು ಅಲಂಕರಿಸಿದವು. ವಿಶ್ವದ ಅನೇಕ ದಿನಪತ್ರಿಕೆಗಳು ಈ ಬಗ್ಗೆ ಸುದ್ದಿ ಪ್ರಕಟಿಸಿದವು. ಮಾ.24ರಂದು ಮೂವರಿಗೆ ಗಲ್ಲು ಎಂದು ಪ್ರಕಟಿಸಲಾಗಿತ್ತು. ಆದರೆ ಆದದ್ದೇ ಬೇರೆ ಒಂದು ದಿನ ಮೊದಲೇ ಭಗತ್ ಹುತಾತ್ಮರಾದರು.
ಭಗತ್ ಸಿಂಗ್ ಅವರ ಆತ್ಮಕತೆ ಬರೆದ ಬಿಪಿನ್ ಚಂದ್ರ, ಗಾಂಧೀಜಿ ದೃಷ್ಟಿಯಲ್ಲಿ ಭಗತ್ ಹಾಗೂ ಸಹಚರರ ಬಗ್ಗೆ ಯಾವ ನಿಲುವಿತ್ತು ಎಂದು ಒಂದು ಮಹತ್ವದ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. "ನಾನು ಲಾಹೋರ್ ನಲ್ಲಿ ಭಗತ್ ನನ್ನು ವಿದ್ಯಾರ್ಥಿ ರೂಪದಲ್ಲಿ ನೋಡಿದ್ದೇನೆ. ದೇಶದ ಬಗ್ಗೆ ಅವನಿಗಿರುವ ಭಕ್ತಿ, ಅಭಿಮಾನವನ್ನು ಶಬ್ದಗಳಿಂದ ವರ್ಣಸಲು ಸಾಧ್ಯವಿಲ್ಲ. ಆದರೆ, ಆ ಯುವಕ ತನ್ನ ಅಸಾಧಾರಣ ಶಕ್ತಿಯನ್ನು ದುರುಪಯೋಗ ಮಾಡಿದ ಎನ್ನಿಸುತ್ತದೆ. ದೇಶದ ಬಗ್ಗೆ ಭಗತ್ ಹಾಗೂ ಅತನ ಸಹಚರರು ದೇಶದ ಬಗ್ಗೆ ಹೊಂದಿರುವ ಕಾಳಜಿಯನ್ನು ಒಪ್ಪಿದರೂ, ಯುವ ಪೀಳಿಗೆ ಅವರ ಹಾದಿ ಹಿಡಿಯುವುದು ಉಚಿತವಲ್ಲ ಎಂಬ ಮಾತನ್ನು ಹೇಳುತ್ತೇನೆ" ಎಂದು ಗಾಂಧೀಜಿ ನುಡಿದಿದ್ದರಂತೆ.
ರಾಷ್ಟ್ರಪಿತ ಈ ಹೇಳಿಕೆ ಅನಗತ್ಯವಾಗಿತ್ತು. ಈ ರೀತಿಯ ಉಲ್ಲೇಖದಿಂದ ರಾಷ್ಟ್ರದ ಕಾಂತ್ರಿಕಾರಿ ಹೋರಾಟಗಾರ ಕೀರ್ತಿಗೆ ಕುಂದುಂಟಾದಂತೆ ಎನ್ನುತ್ತಾರೆ ಭಗತ್ ಅವರ ಸೋದರ ಸಂಬಂಧಿಯ ಮೊಮ್ಮಗ ಬಾಬರ್ ಸಿಂಗ್ ಸಂಧು ಯದ್ವಿಂದರ್ ಸಿಂಗ್.
ಒಟ್ಟಿನಲ್ಲಿ ದೇಶ ಕಂಡ ಅಪ್ರತಿಮ ಕಾಂತ್ರಿಕಾರರಲ್ಲಿ ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತೀರಾ ತಡವಾಗಿಯಾದರೂ ಭಗತ್ ಅವರ ಊರಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಹತ್ತಾರು ಸಿನಿಮಾಗಳು, ನಾಟಕಗಳು ಯಶಸ್ವಿ ಪ್ರದರ್ಶನ ಕಂಡಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಮತ್ತು ಸಹಚರರು ಜೀವದ ಹಂಗು ತೊರೆದು ಮಾಡಿದ ಹೋರಾಟ, ತ್ಯಾಗ, ಬಲಿದಾನ ಚಿರಸ್ಮರಣೀಯ.
ಪೂರಕ ಓದಿಗೆ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications