ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ ಅವರ 'ವ್ಯಕ್ತಿ ವಿನ್ಯಾಸ, ಕಲ್ಪನಾ ಶಿಲ್ಪ'

By Staff
|
Google Oneindia Kannada News
  • ಮಾನಸ, ಬೆಂಗಳೂರು.
ಹೆಗಡೆ ಅವರ 'ವ್ಯಕ್ತಿ ವಿನ್ಯಾಸ, ಕಲ್ಪನಾ ಶಿಲ್ಪ'ಬಹುಮುಖಿ ಪ್ರತಿಭೆಯ ಕಲಾವಿದ ನರಸಿಂಹ ಹೆಗಡೆ ( 48) ಅವರ ಶಿಲ್ಪಕಲಾಕೃತಿಗಳ ಬೃಹತ್ ಪ್ರದರ್ಶನ ಬೆಂಗಳೂರಿನಲ್ಲಿ ಏರ್ಪಾಟಾಗಿದೆ. "ವ್ಯಕ್ತಿ ವಿನ್ಯಾಸ, ಕಲ್ಪನಾ ಶಿಲ್ಪ" ಎಂದು ಹೆಸರಿಸಲಾದ ಪ್ರದರ್ಶನದ ಉದ್ಘಾಟನೆ ಬರುವ ಗುರುವಾರ ಜ. 24 ರಂದು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ( ಬೆಳಗ್ಗೆ 11 ಗಂಟೆಗೆ) ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪಸ್ಥಿತಿ :ವೆಂಕಟಾಚಲಪತಿ ಅಧ್ಯಕ್ಷರು ಶಿಲ್ಪ ಕಲಾ ಅಕಾಡೆಮಿ,ರಾಮಕೃಷ್ಣ ಚಲನಚಿತ್ರ ನಟ ಮತ್ತು ಬಿ. ಶ್ರೀಪತಿ ರಾವ್, ಕಾರ್ಮಿಕ ಮುಖಂಡರು.

ಸಿರ್ಸಿ ತಾಲೂಕಿನ ಇಟಗುಳಿ ಮೂಲದವವರಾದ ನರಸಿಂಹ ಹೆಗಡೆ ಶಿಲ್ಪಕಲಾ ಕೃತಿ ವಿನ್ಯಾಸದಲ್ಲಿ ಸಿದ್ಧಹಸ್ತರು. ದೇವಲಕುಂಡ ವಾದಿರಾಜ್, ವೆಂಕಟಾಚಲಪತಿ ಮತ್ತು ಎಂಟಿವಿ ಆಚಾರ್ಯ ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ಗೆರೆಗಳ ಅಭ್ಯಾಸ ಮಾಡಿದವರು ಹೆಗಡೆ. ಅಲ್ಲದೆ, ಕಮಲೇಶ್ ಮತ್ತು ಯೂಸುಫ್ ಅರಕ್ಕಲ್ ಅವರಿಂದ ಶಿಲ್ಪಕಲೆ ಸೂಕ್ಷ್ಮಗಳನ್ನು ಕಲಿತವರು. ಪುಂಡಲೀಕ ಶೆಣೈ ಅವರಿಂದ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಹೆಗಡೆ ಆಕಾಶವಾಣಿಯಲ್ಲಿ ಕೊಳಲು ಕಾರ್ಯಕ್ರಮಗಳನ್ನೂ ನೀಡಿದ್ದಾರೆ.

ಹೆಗಡೆ ಅವರ ಕಲಾ ನೈಪುಣ್ಯ ಸಾಕಾರವಾಗಿರುವುದು ಮುಖ್ಯವಾಗಿ ಗೆರೆಗಳಲ್ಲಿ. ಸುಮಾರು 5000 ಕ್ಕೂ ಹೆಚ್ಚು ಗೆರೆಚಿತ್ರಗಳನ್ನು ಬಿಡಿಸಿದ ಹೆಗ್ಗಳಿಕೆ ಅವರದು. ಈ ಚಿತ್ರಗಳ ಅನೇಕಾರು ಪ್ರದರ್ಶನಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿವೆ. ಕಲ್ಲು, ಮರ, ಮಣ್ಣು ಮತ್ತು ಲೋಹದಲ್ಲಿ ಅನಾವರಣಗೊಳ್ಳುವ ಅವರ ಶಿಲ್ಪಕಲಾಕೃತಿಗಳು ಸ್ವರ್ಣವಲ್ಲಿ ಮಠ, ಶೃಂಗೇರಿ ಮಠ, ಎಎನ್ ಜೆಡ್ ಟೆಕ್ನಾಲಜೀಸ್, ಚೆನ್ನೈನ ಸಿಲ್ವರ್ ಲೈನ್ ಟೆಕ್ನಾಲಜೀಸ್ ಮುಂತಾದೆಡೆ ನೋಡಸಿಗುತ್ತವೆ.

ಹೆಗಡೆಯವರ ಪ್ರಸಕ್ತ ಪ್ರದರ್ಶನದಲ್ಲಿ ಮರ, ಹಿತ್ತಾಳೆ, ಫೈಬರ್ ಮತ್ತು ಸಿಂಥಟಿಕ್ ನಲ್ಲಿ ಚಿತ್ರಿಸಲಾದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಬಗೆಯ ಪ್ರದರ್ಶನವನ್ನು ಹೆಗಡೆಯವರು ಇದೇ ಪ್ರಥಮವಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಚಿತ್ರಕಲಾಪರಿಷತ್ ಆವರಣದಲ್ಲಿ ಜ. 25 ರಿಂದ 31ರ ವರೆಗೆ ಪ್ರದರ್ಶನ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಸಮಯ ಬೆಳಗ್ಗೆ 11 ರಿಂದ ಸಂಜೆ 7 ರತನಕ. ನರಸಿಂಹ ಹೆಗಡೆಯವರ ಸಂಪರ್ಕ : 94490 60077

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X