ಗೌರಿ ಲಂಕೇಶ್‌ಗೆ ಚಂಪಾ ಕೋಟೆ : ಯಡಿಯೂರಪ್ಪ ಕಿಡಿ


ಶಿವಮೊಗ್ಗ : ಚಂಪಾರ ರಂಪ, ಸಮ್ಮೇಳನದಲ್ಲಿ ಮುಂದುವರೆದಿದೆ. ಈಗ ಅವರ ಮೊಣಚು ಮಾತಿಗೆ ಗುರಿಯಾದವರು; ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.

ನಕ್ಸಲ್‌ಪರರಿಗೆ ಗೋಷ್ಠಿಯಲ್ಲಿ ಶನಿವಾರ ಅವಕಾಶ ಕಲ್ಪಿಸಿರುವುದರಿಂದ, ಗಲಾಟೆಗಳಾಗುವ ಸಾಧ್ಯತೆಗಳಿವೆ. ಗೋಷ್ಠಿ ರದ್ದು ಮಾಡಿ ಎಂದು ಯಡಿಯೂರಪ್ಪ ನೀಡಿರುವ ಸಲಹೆಗೆ, ಚಂಪಾ ಸೊಪ್ಪು ಹಾಕಿಲ್ಲ.

ಈ ಬಗ್ಗೆ ಚಂಪಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕ.ಸಾ.ಪ ಸರ್ಕಾರದ ಅಂಗಸಂಸ್ಥೆಯಲ್ಲ. ಸರ್ಕಾರದ ಅನವಶ್ಯಕ ಅಜೆಂಡಾಗಳಿಗೆ ಇಲ್ಲಿ ಆಸ್ಪದವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ. ಹೀಗಾಗಿ ಎಷ್ಟೇ ಒತ್ತಡ ಬಂದರೂ ಶನಿವಾರದ ಗೋಷ್ಠಿ ನಡೆದೇ ತೀರುತ್ತದೆ. ಈ ಗೋಷ್ಠಿಯಲ್ಲಿ ಗೌರಿ ಲಂಕೇಶ್‌ ಪಾಲ್ಗೊಳ್ಳುತ್ತಾರೆ ಎಂದಿದ್ದಾರೆ.

ಗೋಷ್ಠಿಗೆ ಅಡ್ಡಿ ಪಡಿಸುವ ಮತ್ತು ಪುಂಟಾಟಿಕೆ ನಡೆಸುವವರನ್ನು ಪೊಲೀಸರು ವಿಚಾರಿಸಿಕೊಳ್ಳುತ್ತಾರೆ. ಪರಿಷತ್‌ ಈವರೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ ಎಂದು ಚಂಪಾ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಗದ್ದಲ? : ಸಮ್ಮೇಳನದ ಗೋಷ್ಠಿಗಳಲ್ಲಿ ನಕ್ಸಲ್‌ ಪರ ಮೆದು ಧೋರಣೆ ಹೊಂದಿರುವ ಪತ್ರಕರ್ತೆ ಗೌರಿ ಲಂಕೇಶ್‌, ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ ಅವರಿಗೆ ಅವಕಾಶ ನೀಡಿರುವುದು ವಿವಾದ ಹುಟ್ಟಿಸಿದೆ. ಈ ಬಗ್ಗೆ ಸಂಘ ಪರಿವಾರ ಮತ್ತು ಬಿಜೆಪಿ ಅಸಮಾಧಾನಗೊಂಡಿದೆ.

ಗುರುವಾರ ವಿಠಲ ಹೆಗಡೆ ಪಾಲ್ಗೊಂಡಿದ್ದ ಗೋಷ್ಠಿಗೆ ಅಡ್ಡಿಪಡಿಸಿದ ಸಂಘ ಪರಿವಾರ ಮತ್ತು ಎಬಿವಿಪಿ ಕಾರ್ಯಕರ್ತರು, ವೇದಿಕೆ ಮೇಲೆ ಗದ್ದಲ ಸೃಷ್ಟಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಶನಿವಾರದ ಗೋಷ್ಠಿಯಲ್ಲಿ ಗೌರಿ ಲಂಕೇಶ್‌ ಪಾಲ್ಗೊಳ್ಳುತ್ತಿರುವುದು, ವಿವಾದದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೀಗ ಬಂದ ಸುದ್ದಿ : ಗೌರಿ ಲಂಕೇಶ್‌ರ ಗೋಷ್ಠಿ ನಡೆಯಲಿರುವ ಕುವೆಂಪು ವೇದಿಕೆಯ ಬಳಿ ಶನಿವಾರ ಮಧ್ಯಾಹ್ನ ಎಬಿವಿಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಚಂಪಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಗೋಷ್ಠಿ ಮುಂದುವರೆದಿದೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+