ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉದಯ್ ಜಾದೂಗಾರ್ ಯಕ್ಷಿಣಿ ಚೀಲದಿಂದ 3 ಪುಸ್ತಕ!
ಶಿವಮೊಗ್ಗ
:
ಯಕ್ಷಿಣಿ
ಮೂಲಕ
ಮೋಡಿ
ಮಾಡುವ
ಉದಯ್
ಜಾದೂಗಾರ್
,
ತಮ್ಮ
ಮೂರು
ಪುಸ್ತಕಗಳನ್ನು
ಬಿಡುಗಡೆ
ಮಾಡಲು
ನಿರ್ಧರಿಸಿದ್ದಾರೆ.
ಸುಡೋಕು ಕಲಿಯಿರಿ, ನಾ ಮೆಚ್ಚಿದ ಜೋಕುಗಳು-2 ಮತ್ತು ಹಣ, ಯಶಸ್ಸು, ಆರೋಗ್ಯ, ಮನಃಶಾಂತಿ ಗಳಿಸುವುದು ಹೇಗೆ?-ಈ ಮೂರು ಪುಸ್ತಕಗಳು, ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಡಿ.20ರಂದು ಬಿಡುಗಡೆಯಾಗಲಿವೆ. ನವಕರ್ನಾಟಕ ಪ್ರಕಾಶನ ಪುಸ್ತಕಗಳನ್ನು ಪ್ರಕಟಿಸಿದ್ದು, ಕವಿ ಕೆ.ಎಸ್. ನಿಸಾರ್ ಅಹಮದ್ ಬಿಡುಗಡೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಾರಸ್ವತ ಲೋಕದ ನವರತ್ನಗಳು ಶೀರ್ಷಿಕೆಯಡಿಯಲ್ಲಿ ಒಂಭತ್ತು ಬರಹಗಾರರ ಭಾವಚಿತ್ರಗಳು ಲೋಕಾರ್ಪಣೆಗೊಳ್ಳಲಿವೆ. ಉದಯ್ ಜಾದೂಗಾರ್ ಕ್ಯಾಮೆರಾ ಕ್ಲಿಕ್ಕಿಸಿದ ಈ ಭಾವಚಿತ್ರಗಳು, ಸಾಹಿತ್ಯಾಭಿಮಾನಿಗಳ ಸಂಗ್ರಹಕ್ಕೆ ಹೇಳಿಮಾಡಿಸಿದಂತಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, May 23, 2003, 5:30 [IST]