ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯ್‌ ಜಾದೂಗಾರ್‌ ಯಕ್ಷಿಣಿ ಚೀಲದಿಂದ 3 ಪುಸ್ತಕ!

By Staff
|
Google Oneindia Kannada News


ಶಿವಮೊಗ್ಗ : ಯಕ್ಷಿಣಿ ಮೂಲಕ ಮೋಡಿ ಮಾಡುವ ಉದಯ್‌ ಜಾದೂಗಾರ್‌ , ತಮ್ಮ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸುಡೋಕು ಕಲಿಯಿರಿ, ನಾ ಮೆಚ್ಚಿದ ಜೋಕುಗಳು-2 ಮತ್ತು ಹಣ, ಯಶಸ್ಸು, ಆರೋಗ್ಯ, ಮನಃಶಾಂತಿ ಗಳಿಸುವುದು ಹೇಗೆ?-ಈ ಮೂರು ಪುಸ್ತಕಗಳು, ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಡಿ.20ರಂದು ಬಿಡುಗಡೆಯಾಗಲಿವೆ. ನವಕರ್ನಾಟಕ ಪ್ರಕಾಶನ ಪುಸ್ತಕಗಳನ್ನು ಪ್ರಕಟಿಸಿದ್ದು, ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಬಿಡುಗಡೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಸಾರಸ್ವತ ಲೋಕದ ನವರತ್ನಗಳು ಶೀರ್ಷಿಕೆಯಡಿಯಲ್ಲಿ ಒಂಭತ್ತು ಬರಹಗಾರರ ಭಾವಚಿತ್ರಗಳು ಲೋಕಾರ್ಪಣೆಗೊಳ್ಳಲಿವೆ. ಉದಯ್‌ ಜಾದೂಗಾರ್‌ ಕ್ಯಾಮೆರಾ ಕ್ಲಿಕ್ಕಿಸಿದ ಈ ಭಾವಚಿತ್ರಗಳು, ಸಾಹಿತ್ಯಾಭಿಮಾನಿಗಳ ಸಂಗ್ರಹಕ್ಕೆ ಹೇಳಿಮಾಡಿಸಿದಂತಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X