‘ನಾನಿದ್ದೀನಿ ಎಚ್ಚರಿಕೆ’ : ಟಿ.ಎಸ್.ನಾಗಾಭರಣ
- ಶಾಲಿನಿ ಹೂಲಿ
[email protected]
ಎಪ್ಪತ್ತೆೈದು ವರ್ಷಗಳ ಅಪೂರ್ವ ಇತಿಹಾಸ ಹೊಂದಿದ ಕನ್ನಡ ಚಿತ್ರರಂಗವು ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಗುಣಾತ್ಮಕ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ನಿರ್ಮಾಣ, ನಟನೆ ಹಾಗೂ ನಿರ್ದೇಶನ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆಯಿಂದ ದುಡಿದ ಅನೇಕ ಮಹನೀಯರು ಈ ಕ್ಷೇತ್ರಕ್ಕೆ ಒಂದು ಮಹತ್ವಪೂರ್ಣ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಡುವೆ ಸೃಜನಾತ್ಮಕ ಪ್ರಯೋಗಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ನಿರ್ದೇಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಟಿ.ಎಸ್.ನಾಗಾಭರಣ ಅವರದು.
ಪ್ರಯೋಗಶೀಲತೆಗೆ ನಾಗಾಭರಣ ಸದಾ ಮಿಡಿಯುತ್ತಿರುತ್ತಾರೆ. ಕಲಾತ್ಮಕ ಚಿತ್ರಗಳಿಂದ ಹಿಡಿದು ಮನರಂಜನಾತ್ಮಕ ಚಿತ್ರಗಳವರೆಗೆ ನಾಗಾಭರಣ ಏರಿದ ಎತ್ತರ ಗಮನೀಯ. ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆ ಹಾಗೂ ರಂಗಭೂಮಿಯಲ್ಲೂ ನಾಗಾಭರಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ವಿಜ್ಞಾನ ಮತ್ತು ಕಾನೂನು ಪದವೀಧರರಾದ ನಾಗಾಭರಣ ಶಾಲಾ-ಕಾಲೇಜುಗಳಲ್ಲಿದ್ದಾಗಲೇ ರಂಗಭೂಮಿಯ ನೆಂಟಸ್ತಿಕೆ ಬೆಳೆಸಿ ಕೊಂಡಿದ್ದರು. ಅನಂತರವೂ ಅವರು ಬೆನಕ, ರಂಗಸಂಪದ ಮುಂತಾದ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ರಂಗತಜ್ಞರಾದ ಬಿ.ವಿ.ಕಾರಂತ ಹಾಗೂ ಗಿರೀಶ ಕಾರ್ನಾಡ್ರೊಂದಿಗೆ ಅನೇಕ ಪ್ರಮುಖ ನಾಟಕಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಅವರು ನಟಿಸಿ ನಿರ್ದೇಶಿಸಿದ ಸಂಗ್ಯಾಬಾಳ್ಯ, ಕತ್ತಲೆಬೆಳಕು, ಜೋಕುಮಾರಸ್ವಾಮಿ ನಾಟಕಗಳು ರಂಗಾಸಕ್ತರ ಮನದಲ್ಲಿ ಸಂಚಲನವನ್ನುಂಟು ಮಾಡಿವೆ.
ಮಕ್ಕಳ ಚಿತ್ರಗಳ ಬಗ್ಗೆ ಎಲ್ಲರೂ ಮೂಗು ಮುರಿಯುತ್ತಿದ್ದರೆ, ಮಕ್ಕಳ ನಾಟಕ-ಸಿನಿಮಾ ಎಂದು ಭರಣ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಬೆನಕ ಮಕ್ಕಳ ತಂಡದ ಸಂಸ್ಥಾಪಕರಾಗಿರುವ ಅವರು, ಸೀಫೆಜ್( ಇಂಟರ್ ನ್ಯಾಷನಲ್ ಸೆಂಟರ್ ಆಫ್ಫಿಲ್ಮ್ ಫಾರ್ಚಿಲ್ಡ್ರನ್ ಅಂಡ್ಯುಂಗ್ ಪೀಪಲ್ಸ್)ನ ಸದಸ್ಯರಾಗಿದ್ದಾರೆ.
ಅಭಿನಯ ನಿರ್ದೇಶನ ಇಷ್ಟು ಮಾತ್ರವಲ್ಲದೇ ನಾಗಾಭರಣರಿಗೆ ಸಂಗೀತ, ಅದರಲ್ಲೂ ಶಾಸ್ತ್ರೀಯ ಸಂಗೀತ ಗೊತ್ತು ಅನ್ನೋ ಸಂಗತಿ ಬಹುಮಂದಿಗೆ ಗೊತ್ತಿಲ್ಲ. ಶೇಷಾದ್ರಿ ಗವಾಯಿಗಳಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅವರು ಅಭ್ಯಾಸ ಮಾಡಿದ್ದಾರೆ.
ರಂಗಭೂಮಿಯಿಂದ ಚಿತ್ರರಂಗದತ್ತ ವಾಲಿದ ನಾಗಾಭರಣ, 1978ರಲ್ಲಿ ಮೊದಲು ನಿರ್ದೇಶಿಸಿದ ಚಿತ್ರ-ಗ್ರಹಣ. ಪ್ರಥಮ ಚಿತ್ರವೇ ರಾಷ್ಟ್ರಪ್ರಶಸ್ತಿಯ ರುಚಿ ತೋರಿಸಿತು. ಜೊತೆಗೆ ಪ್ರತಿಭೆಗೆ ಸಾಕ್ಷಿಯಾಯಿತು. ಅನಂತರ ಆಸ್ಫೋಟ, ಮೈಸೂರು ಮಲ್ಲಿಗೆ, ಜನುಮದ ಜೋಡಿ, ನಾಗಮಂಡಲ ಸೇರಿದಂತೆ ನಿರ್ದೇಶಿಸಿದ 25 ಚಿತ್ರಗಳಲ್ಲಿ 11 ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿಗಳು ನಾಗಾಭರಣ ಅವರಿಗೆ ಸಂದಿವೆ.
ಭರಣರವರ ಯಶಸ್ಸಿನ ಹಿಂದಿನ ಕೈ ಅವರ ಪತ್ನಿ ನಾಗಿಣಿಭರಣ ಅವರದು. ಅಲ್ಲದೇ ಮಕ್ಕಳಾದ ಶೃತಾ, ಪನ್ನಗರ ಅಪ್ಪನಿಗೆ ಸಹಕಾರ ನೀಡುತ್ತಿದ್ದಾರಂತೆ. ‘ದಟ್ಸ್ ಕನ್ನಡ’ ದೊಡನೆ ಮುಕ್ತವಾಗಿ ಮಾತನಾಡಿರುವ ನಾಗಾಭರಣ, ಕನ್ನಡ ಚಿತ್ರರಂಗದ ಸ್ಥಿತಿಗತಿ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ನಮ್ಮ ಮಾತುಕತೆಗೆ ನೀವು ಸೇರಿಕೊಳ್ಳಿ...
- ಕನ್ನಡ ಚಿತ್ರರಂಗ ಸೊರಗಲು ಕಾರಣವೇನು ?
ಮೊದಲು ಕನ್ನಡಚಿತ್ರ ಬಿಡುಗಡೆಯಾದಾಗ ಚಿತ್ರವನ್ನು ಪ್ರತಿಜಿಲ್ಲೆ ಹಾಗೂ ತಾಲೂಕಿನ ಮೂಲೆಮೂಲೆಗೆ ಮುಟ್ಟಿಸುವ ಕೆಲಸವನ್ನು ಚಿತ್ರವಿತರಕ ಮಾಡುತ್ತಿದ್ದ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸಿದ್ಧಗೊಂಡ ಹೊಸ ಚಿತ್ರವನ್ನು ನಿರ್ಮಾಪಕ ನೇರವಾಗಿ ಮಾರುಕಟ್ಟೆಗೆ ತಲುಪಿಸುತ್ತಾನೆ. ಈ ರೀತಿ ಮಾಡುವುದರಿಂದ ತನಗೆ ಪರಿಚಯವಿರುವ ನಾಲ್ಕೈದು ಚಿತ್ರಮಂದಿರಕ್ಕೆ ಮಾತ್ರ ಆತ ಮುಟ್ಟಿಸಬಹುದೇ ವಿನಃ ರಾಜ್ಯದ ಎಲ್ಲಾ ಮೂಲೆಗಳಿಗೆ ತಲುಪಿಸಲು ಸಾಧ್ಯವಿಲ್ಲ. ಚಿತ್ರಮಂದಿರಗಳ ಮೇಲೆ ಒತ್ತಡ ಹಾಕುವ ವಾತಾವರಣ ಸಹಾ ನಿರ್ಮಾಣಗೊಂಡಿದೆ.
- ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಕೂಡಾ, ಈ ಕ್ಷೇತ್ರದಲ್ಲಿರುವವರು ಪ್ರತಿಸ್ಪಂದಿಸುತ್ತಿಲ್ಲ ಏಕೆ?
- ಹಿಂದಿಯಲ್ಲಿ ಬಂದ ‘ಸ್ವದೇಶ್’, ನಿಮ್ಮ ‘ಚಿಗುರಿದ ಕನಸು’ ಚಿತ್ರದ ರಿಮೇಕ್ ಎಂಬ ಸುದ್ದಿಯಿದೆ. ನಿಜವಾಗಿದ್ರೆ ನೀವು ಸುಮ್ಮನಿದ್ದದ್ದು ಏಕೆ?
ನಾನು ಈ ವಿಚಾರದಲ್ಲಿ ಅಸಹಾಯಕನಾದೆ. ಈ ಪ್ರಶ್ನೆ ಕೇವಲ ಒಬ್ಬ ನಿರ್ದೇಶಕನಿಂದ ಬಂದರೆ ಸಾಲದು, ಅದಕ್ಕೆ ಚಿತ್ರರಂಗದ ಬೆಂಬಲ ಅತ್ಯಗತ್ಯ. ಆ ಸಹಕಾರ ದಕ್ಕದ ಕಾರಣ ನಾನು ಸುಮ್ಮನಾದೆ...
- ಕನ್ನಡ ಚಿತ್ರರಂಗದಲ್ಲಿ ರಿಮೇಕ್ ಹಾವಳಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
- ಹೊಸ ಪ್ರತಿಭೆಗಳ ಅನ್ವೇಷಣೆಯ ನೆಪದಲ್ಲಿ ನಿರ್ದೇಶಕರು ಹಳೇ ಕಲಾವಿದರನ್ನು ಮರೆಯೋದು ಸರಿಯೇ?
- ‘ಚಿನ್ನಾರಿ ಮುತ್ತಾ ’ ಮಕ್ಕಳ ಚಿತ್ರ ಬಿಡುಗಡೆಯಾದಾಗ, ವರ್ಷಕ್ಕೆ ಒಂದಾದರೂ ಮಕ್ಕಳ ಚಿತ್ರ ನಿರ್ದೇಶಿಸುವುದಾಗಿ ಹೇಳಿದ್ರಿ...ಇದು ಕೇವಲ ಹೇಳಿಕೆಯಲ್ಲಿಯೇ ಉಳಿದಿದೆ ಏಕೆ ?
- ನಿಮ್ಮ ‘ಮಹಾಮಾಯಿ’ ಧಾರಾವಾಹಿ ವಾಸ್ತವಕ್ಕೆ ದೂರವಾಗಿದೆ. ಇಂತಹ ಧಾರಾವಾಹಿಗಳು ಬೇಕೆ?
- ನಿಮ್ಮ ಮಕ್ಕಳನ್ನು ಏಕೆ ಚಿತ್ರರಂಗಕ್ಕೆ ಪರಿಚಯಿಸಲಿಲ್ಲ ?
- ನಿಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರಿ?











Click it and Unblock the Notifications