ಕವಿಗೋಷ್ಠಿಯು ರಾಮಾಯಣ, ಹನಿಗವನಗೋಷ್ಠಿ ಮಹಾಭಾರತ
'ಕಾವ್ಯ ಕಾಲ ವಶಂ' ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಅಮರ್ತ್ಯಸೇನ್ ಯಾವಾಗಲೊ ಹೇಳಿದ್ದ ನೆನಪು. ಅಮರ್ತ್ಯಸೇನ್ರ ಮಾತನ್ನು ಒಪ್ಪುವುದು ಬಿಡುವುದು ಬೇರೆಯ ವಿಷಯ ; ಶುಕ್ರವಾರ (ಡಿ.19) ಮೂಡಬಿದಿರೆ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಹನಿಗವನ ಗೋಷ್ಠಿಯಲ್ಲಿ ವಾಚನಗೊಂಡ ಬಹುತೇಕ ಕವಿತೆಗಳು ಮಾತ್ರ ಕಾವ್ಯ ಕಾಲವಶವಾದ ಕುರಿತ ಸೂಚನೆಯಂತಿದ್ದುದು ಸುಳ್ಳಲ್ಲ .
ಡಾ.ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅರ್ಥಕ್ಕಿಂತ ಅಪದ್ಧಗಳೇ ಹೆಚ್ಚಾಗಿದ್ದುದೊಂದು ವಿಶೇಷ. ಅನೇಕ ಕವಿಗಳಲ್ಲಿ ಕವಿತೆ ಓದುವ ಉತ್ಸಾಹವೇ ಇದ್ದಂತೆ ಕಾಣಲಿಲ್ಲ . ಇದ್ದುದರಲ್ಲಿ ಖುಷಿ ಕೊಟ್ಟವರೆಂದರೆ- ಸವಿತಾ ನಾಗಭೂಷಣ, ಪ್ರತಿಭಾ ನಂದಕುಮಾರ್, ಬಷೀರ್, ಶಂಕರ ಕಟಗಿ, ಸುಬ್ಬು, ಎಂ.ಆರ್.ಕಮಲ ಹಾಗೂ ಪ್ರಹ್ಲಾದ ಅಗಸನಕಟ್ಟೆ .
ಕವಿಗೋಷ್ಠಿಯದು ರಾಮಾಯಣವಾದರೆ, ಹನಿಗವನ ಗೋಷ್ಠಿಯದು ಮಹಾಭಾರತ. ಚುಟುಕುಬ್ರಹ್ಮ ದುಂಡಿರಾಜರ ಅಧ್ಯಕ್ಷತೆಯಲ್ಲಿ ನಡೆದ ಹನಿಗವನ ಗೋಷ್ಠಿಯ ಬಹುತೇಕ ಕವಿತೆಗಳಲ್ಲಿ ಪಂಚೂ ಇರಲಿಲ್ಲ ಪನ್ನೂ ಇರಲಿಲ್ಲ . ದುಂಡಿರಾಜರು- 'ಪಂ ಚೆ ಇಲ್ಲದಿದ್ದರ ಖಂಡಿತಾ ಅವಮಾನ!' ಎನ್ನುವ ತಮ್ಮ ಕವಿತೆಯನ್ನು ಯಾಕೋ ಓದಲೇ ಇಲ್ಲ .
ಚುಟುಕುಗಳ ಗುಣಮಟ್ಟವನ್ನು ಪಕ್ಕಕ್ಕಿಟ್ಟು ಒಂದಿಷ್ಟು ನಗೋಣ ಅಂದರೆ, ಗೋಷ್ಠಿಯುದ್ದಕ್ಕೂ ಕಿರಿಕಿರಿ. ಮುಖ್ಯವೇದಿಕೆಯಿಂದ ಬೇರೆಡೆ ಹನಿಗವನ ಗೋಷ್ಠಿ ನಡೆಸುತ್ತಿರುವುದಕ್ಕೆ ಕವಿಗಳಿಗೆ ಸಿಟ್ಟು . ಚುಟುಕು ಕವಿಗಳಿಗೆ ಚುಟುಕು ಸಭಾಂಗಣ ಎಂದು ಸಂಘಟಕರು ತೀರ್ಮಾನಿಸಿದ್ದರೋ ಏನೋ? ಶಂಕರ ಬೈಚನಾಳ ಎನ್ನುವ ಕವಿಯಂತೂ ಕವಿತೆ ಓದುವುದಿಲ್ಲ ಎಂದು ಪಟ್ಟುಹಿಡಿದು ಕೂತರು. ಚುಟುಕು ಗೋಷ್ಠಿ ಮುಗಿದ ಮೇಲೂ ಸಂಘಟಕರನ್ನು ಬೈಚನಾಳ ಬಯ್ಯುತ್ತಲೇ ಇದ್ದರು.
***
ಕವಿಗೋಷ್ಠಿ ಹಾಗೂ ಹನಿಗವನ ಗೋಷ್ಠಿಯ ಕೆಲವು ಸ್ಯಾಂಪಲ್ಗಳನ್ನು ಇಲ್ಲಿ ಗುಡ್ಡೆ ಹಾಕಲಾಗಿದೆ. ಆಯ್ಕೆಯ ಪ್ರಶ್ನೆಯೇ ಇಲ್ಲ ; ಕಿವಿಗೆ ಬಿದ್ದ ಕವಿತೆಗಳಿಗೆ ಮಾತ್ರ ಇಲ್ಲಿ ಜಾಗ ಸಿಕ್ಕಿದೆ. ಓದಿ, ಇಷ್ಟವಾದರೆ ಸಂತೋಷ. ಕಷ್ಟವಾದರೆ... ಸಾರಿ !
ಹಿಂದು
ಹುಡುಗ
ಮುಸ್ಲಿಂ
ಹುಡುಗಿಯನ್ನು
ಮದುವೆಯಾದರೆ
ಏನಾಗುತ್ತೆ
?
ಎರಡು
ಮುದ್ದಾದ
ಮಗು
ಹುಟ್ಟುತ್ತೆ
!
ಹಿಂದೂಸ್ತಾನ್
ಪಾಕಿಸ್ತಾನ್
ಒಂದಾದರೆ
ಏನಾಗುತ್ತೆ
?
ಎರಡೂ
ದೇಶಗಳಲ್ಲಿ
ಆತಂಕ
ಆಶಾಂತಿ
ಕಡಿಮೆಯಾಗುತ್ತೆ
ಒಂದು
ಹಳೆಯ
ಗಾಯ
ವಾಸಿಯಾಗುತ್ತೆ
.
ರಾಮನನ್ನು
ಅಲ್ಲಾಹುವಿನ
ಪಕ್ಕದಲ್ಲಿ
ಇಟ್ಟರೆ
ಏನಾಗುತ್ತೆ
?
ಶಕ್ತಿ
ಭಕ್ತಿ
ಎರಡೂ
ಹೆಚ್ಚಾಗುತ್ತೆ
!
(ಸವಿತಾ
ನಾಗಭೂಷಣ).
*
ಕವಿತೆಗೇನು
ಬೆಲೆಯಿದೆ
ಈ
ಲೋಕದಲ್ಲಿ
ಒಂದು
ಒಳ್ಳೆಯ
ಕವಿತೆಗೆ
ಒಂದು
ಕಪ್
ಚಹಾ
ಕೂಡ
ಸಿಗುವುದಿಲ್ಲ
ಇಲ್ಲಿ
.
(ಪ್ರಹ್ಲಾದ
ಅಗಸನಕಟ್ಟೆ
)
*
ಹೋದಲ್ಲೆಲ್ಲಾ
ತೊಗಾಡಿಯಾ
ಚೆಲ್ಲುತ್ತಾನೆ
ಕೋಮುವಾದದ
ರಾಡಿಯ
ಬಡಿದಾಟ
ಹಚ್ಚಿ
ಬಿಡುತ್ತಾನೆ
ಗಾಡಿಯ
(ಗೋರಂಟ್ಲಿ)
*
ಮಲೆಯ
ನೆಲದಲ್ಲಿ
ನೆಲೆಯಿಲ್ಲದವ
ಕಣ್ಣ
ಕೆಂಡವಾಗಿದ್ದ
ನಮ್ಮ
ಹೂ
ಪಾರ್ವತಿ
(ಲಿಂಗರಾಜ
ಕಮ್ಮಾರ)
*
ಹಾಸ್ಯ
ಕವನ
ಓದುವಾಗ
ನಗಿಸಿದ್ದಕ್ಕಾಗಿ
ಚಪ್ಪಾಳೆ
ಗಂಭೀರ
ಕವನ
ಓದುವಾಗ
ಮುಗಿಸಿದ್ದಕ್ಕಾಗಿ
ಚಪ್ಪಾಳೆ.
(ಡುಂಡಿರಾಜ್)
*
ನಾನು
ಮಣ್ಣಿನ
ಗೆಜ್ಜೆ
ಹಾಕಿಕೊಂಡ
ಮೌಖಿಕ
ಮಹಾದೇವ
ನಾನು
ಗೊತ್ತಲ್ಲಾ
,
ಮೀಸಲಾತಿ
ಕೂಸು
ಹುಟ್ಟಿದ್ದು
ಹೊಲಗೇರಿಯಲ್ಲಿ
,
ಅಸ್ಪೃಶ್ಯತೆಯ
ಅಮೇಧ್ಯವಿದೆ
ನನ್ನಲ್ಲಿ
ಬೆಳಗಾಗುವುದೆಂದು
ಕಾಯುವವನಿಗೆ
ಕಸಗುಡಿಸುವುದಕ್ಕಿಂತ
ಮಹಾಪುಣ್ಯ
ಏನಿದೆ
?
(ಸುಬ್ಬು
ಹೊಲೆಯಾರ್)
*
ನಾನು
ಸರ್ವಾಧಿಕಾರಿಯಾದರೆ
ಶಾಸಕಾಂಗ
ಭವನವನ್ನು
ಸುಂದರಿಯರ
ಸಜ್ಜೆಮನೆ
ಮಾಡುತ್ತೇನೆ.
ಖೋ
ಜಾಗಳ
ಕೈಗೆ
ಬಂದೂಕು
ಕೊಟ್ಟು
ಕೂರಿಸುತ್ತೇನೆ.
ಇಲ್ಲಿ
ಹೇಲು
ಉಚ್ಚೆ
ಬಳಿಯುವವರು
ಕನಿಷ್ಠ
ಐಎಎಸ್
ಪಾಸಾಗಿರಬೇಕು!
(ಎಲ್.ಎನ್.ಮುಕುಂದರಾಜ್)
*
ಬೇಕಾದಷ್ಟು
ಟೀವಿಗಳನ್ನು
ಜಪಾನ್
ಸೃಷ್ಟಿಸುತ್ತದೆ
ಅದಕ್ಕೆ
ಬೇಕಾದ
ಪ್ರೇಕ್ಷಕರನ್ನು
ಭಾರತ
ಸೃಷ್ಟಿಸುತ್ತದೆ.
(ಎನ್.ಜಿ.ಪಟವರ್ಧನ)
*
ಆ
ಹಕ್ಕಿ
ಬಾಯಲ್ಲಿ
ಕಚ್ಚಿಕೊಂಡ
ಕಡ್ಡಿ
ನನ್ನ
ಗಿಡದ್ದೇ,
ಅದು
ಗೂಡು
ಕಟ್ಟಿದ
ಮರ
ಕೂಡ
ನನ್ನದೇ,
ಗೂಡಿನಲ್ಲಿ
ತುಂಬಿದ್ದ
ಖುಷಿ
ಮಾತ್ರ
ನನ್ನದಲ್ಲ
.
(ಮೀನಾ
ಸದಾಶಿವ)