ವೈದೇಹಿ ಅವರ ‘ಅಮ್ಮಚ್ಚಿಯ ನೆನಪು’ಗೆ ಸತ್ಯಕಾಮ ಪ್ರಶಸ್ತಿ

ಬೆಂಗಳೂರು: ವೈದೇಹಿ ಅವರ ‘ಅಮ್ಮಚ್ಚಿಯ ನೆನಪು’ ಕೃತಿಗೆ ಈ ಸಾಲಿನ ಸತ್ಯಕಾಮ ಪ್ರಶಸ್ತಿ ದೊರೆತಿದೆ. ಸತ್ಯಕಾಮ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ 10 ಸಾವಿರ ರುಪಾಯಿ ನಗದು, ಸ್ಮರಣ ಫಲಕವನ್ನು ಒಳಗೊಂಡಿದೆ. ಅಕ್ಟೋಬರ್‌ 20ರಂದು ಸತ್ಯಕಾಮರ 3ನೇ ವರ್ಷದ ಆರಾಧನೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರತಿವರ್ಷ ಸಾಹಿತ್ಯದ ಒಂದು ಪ್ರಕಾರವನ್ನು ಆಯ್ದು, ಆ ಪ್ರಕಾರದಲ್ಲಿ ಪ್ರಕಟವಾದ ಅತ್ಯುತ್ತಮ ಕೃತಿಗೆ ಪ್ರತಿಷ್ಠಾನವು ಕಳೆದ ಎರಡು ವರ್ಷಗಳಿಂದ ಸತ್ಯಕಾಮ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರೊ. ಸಿ.ಎಸ್‌. ರಾಮಚಂದ್ರನ್‌, ಪ್ರೊ. ಎಚ್‌.ಎಸ್‌. ರಾಘವೇಂದ್ರರಾವ್‌, ಪ್ರೊ. ರಾಜೇಂದ್ರ ಅವರನ್ನೊಳಗೊಂಡ ತೀರ್ಪುಗಾರರ ಮಂಡಳಿ ಈ ಸಾಲಿನ ಪ್ರಶಸ್ತಿಗೆ ಅಮ್ಮಚ್ಚಿಯ ನೆನಪು ಕೃತಿಯನ್ನು ಆಯ್ಕೆ ಮಾಡಿದೆ.

ಅ.20ರಂದು ಸತ್ಯಕಾಮರ ‘ಸುಮ್ಮನೆ’ ತೋಟದ ಮನೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡಮಿಯ ಗುರುಲಿಂಗ ಕಾಪಸೆ ವಹಿಸುವರು. ಮಾಲತಿ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಈ ಸಂದರ್ಭದಲ್ಲಿ ನಡೆಯುವ ಅಲ್ಲಮನ ವಚನ ವ್ಯಾಖ್ಯಾನ ವಿಚಾರಗೋಷ್ಠಿಯಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಪ್ರೊ. ಜಿ.ಎಲ್‌. ನಾಗಭೂಷಣ ಸ್ವಾಮಿ, ಪ್ರೊ. ಸಿ. ಸೋಮಶೇಖರ್‌, ಗಿರಡ್ಡಿ ಗೋವಿಂದರಾಜ್‌ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+