ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ
ಆಲ್ಫಾ ಮೇಲ್ ಎಂದು ಬಿಂಬಿತವಾಗಿರುವ ಗಂಡಸರು ನಿಜಕ್ಕೂ ಅಸಹಜ ನಡವಳಿಕೆ (ಅಬ್ನಾರ್ಮಲ್) ಹೊಂದಿರುತ್ತಾರೆ. ಆಲ್ಫಾ ಮೇಲ್ ಗಂಡಸರನ್ನು ಹುಡುಕುವ ಹಪಾಹಪಿಯಲ್ಲಿ ಹೆಂಗಸರು ಈ ರೀತಿಯ ಅಬ್ನಾರ್ಮಲ್ ಟಾಕ್ಸಿಕ್ ಹುಡುಗರಿಗೆ ಒಲಿಯುತ್ತಾರೆ.
ಸಜ್ಜನ ಸ್ವಭಾವ, ಒಳ್ಳೆಯತನ ಇರುವುದು ಗಂಡಸರ ದೌರ್ಬಲ್ಯ (ವೀಕ್ನೆಸ್) ಎಂದು ಬಿಂಬಿತವಾಗುತ್ತಿರುವ ಅಪಾಯ ಕಾಣಿಸುತ್ತಿದೆ. 'ಗರ್ಲ್ಫ್ರೆಂಡ್'ನಂಥ ಸಿನಿಮಾ ಕೂಡಾ ಬಂದಾಗಿದೆ. ಆದರೂ ಸಹ ಇನ್ನೂ 'ಅನಿಮಲ್'ನಲ್ಲಿ ಬಂದ ಟಾಕ್ಸಿಕ್ ಹೀರೋಗಳಂಥವರ ಬಲೆಗೇ ಹುಡುಗಿಯರು ಬೀಳುತ್ತಿರುವುದು ವಿಷಾದದ ಸಂಗತಿ.

"ನನಗೆ ಈತ ಇತರರೊಡನೆ ಹೊಡೆದಾಡಬೇಕು, ನನಗಾಗಿ ಜಗಳವಾಡಿ ನನ್ನನ್ನು ಕಾಪಾಡಬೇಕು ಅಂತ ಅನಿಸುತ್ತೆ ಅದು ತಪ್ಪಾ?" ಎಂದು ಓರ್ವ ವಿವಾಹಿತೆ ಹೇಳಿದ್ದರು. ಇನ್ನೊಂದಿಷ್ಟು ಮಹಿಳೆಯರು "ಇಷ್ಟು ವರ್ಷ ನನಗೆ ಗಂಡಸರು ಹೀಗೂ ಇರ್ತಾರೆ ಅಂತಲೇ ಗೊತ್ತಿರಲಿಲ್ಲ, ಮೆಟ್ರೋದಲ್ಲಿ/ಚಾಟ್ನಲ್ಲಿ/ ಆಫೀಸಿನಲ್ಲಿ ಆ ಹುಡುಗ/ ಗಂಡಸು/ ಮ್ಯಾನೇಜರ್/ ಕಲೀಗ್ ಅನ್ನು ಮೀಟ್ ಆಗೋವರೆಗೂ.. I feel more protected with him" ಎಂದು ಹೇಳಿದ್ದರು.
ಹೆಣ್ಣಿಗೆ ಈ ಥರ ಅನ್ನಿಸುವುದು ಸಹಜ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. 'ಇತರರೊಂದಿಗೆ ಗುದ್ದಾಟ ನಡೆಸಿಯೋ, ಹೊಡೆದಾಟ ಮಾಡಿಯೋ, ಇನ್ಯಾರ ಬಗ್ಗೆಯೋ ಕೆಟ್ಟದಾಗಿ ಮಾತಾಡೋ ಆ ಗಂಡಸು ನಿಮ್ಮನ್ನು ಯಾವ ರೀತಿ ನಡೆಸಿಕೊಳ್ಳಬಲ್ಲ ಎಂದು ಯೋಚಿಸಿದ್ದೀರಾ' ಎಂದು ನನಗೆ ಪ್ರಶ್ನಿಸಬೇಕು ಎನಿಸುತ್ತದೆ. ಅದಕ್ಕೆ ಉದಾಹರಣೆಗಳು ನನ್ನ ಕಣ್ಣಿಗೇ ರಾಚುವಂತೆ ಹತ್ತಾರು ಇವೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಹಲವಾರು ಹೆಣ್ಣುಮಕ್ಕಳಿದ್ದಾರೆ.
ನಿಮ್ಮ ಜೊತೆ ಇರುವ, ನಿಮ್ಮ ಪ್ರಕಾರ 'ಕೈಲಾಗದ ಒಳ್ಳೆಯತನ' ಇರುವವನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯತ್ತ ವಾಲುವ ಮೊದಲು ನೀವು ಯೋಚಿಸಿಕೊಳ್ಳಬೇಕು. ಈಗಾಗಲೇ ಕಟ್ಟಿಕೊಂಡು ಜೊತೆಯಲ್ಲಿರುವವಳನ್ನು ಲೆಕ್ಕಿಸದೇ ನಿಮ್ಮನ್ನು ಇಂಪ್ರೆಸ್ ಮಾಡುವವ, ನಾಳೆ ಹೀಗೇ ರಕ್ಷಕ ಎಂಬ ಫೀಲಿಂಗ್ ಕೊಟ್ಟು ಇನ್ನೊಬ್ಬಳಿಗಾಗಿ ನಿಮ್ಮನ್ನು ಇಗ್ನೋರ್ ಮಾಡಲಾರ ಎಂಬುದಕ್ಕೆ ಏನು ಗ್ಯಾರಂಟಿ?
ದಯವಿಟ್ಟು ನಿಮ್ಮ ಈ ಆಲ್ಫಾ ಮೇಲ್ ಕನಸು ಬಿಟ್ಟು ವಾಸ್ತವದತ್ತ ನೋಡಿ. ನಿಮ್ಮ ಸಂಗಾತಿ ನಿಮಗಾಗಿ ನಿಜಕ್ಕೂ ಏನೂ ಮಾಡಿಲ್ಲವೇ? ಯೋಚಿಸಿ.. ನಿಮ್ಮ ಕಷ್ಟದ ಕಾಲದಲ್ಲಿ ನಿಮಗೆ ಆಸರೆಯಾಗಿ ನಿಂತಿದ್ದು ಈ ನಿಮ್ಮ ಸಂಗಾತಿಯೇ ಅಲ್ಲವೇ ? ಅಷ್ಟಕ್ಕೂ ನಿಮಗೆ ಇರುವ ಹಾಗೆಯೇ ಅವರಿಗೂ ಇನ್ಯಾವುದೋ ಹುಡುಗಿಯ ಕನಸು ಇರುತ್ತೆ ಎಂದುಕೊಳ್ಳಿ. ಅವರು ಹಾಗೆಯೇ ಅವಳ ಹಿಂದೆ ಹೋದರೆ ನಿಮಗೆ ಯಾವ ರೀತಿ ಹರ್ಟ್ ಆಗುತ್ತೆ ಊಹಿಸಿಕೊಳ್ಳಿ.
ತಮಾಷೆ ಅಂದರೆ 'ನಿಲ್ಲೇ ಪತಂಗ, ಬೇಡ ಬೇಡ ಬೆಂಕಿಯ ಸಂಗ' ಎನ್ನುವುದು ಗೊತ್ತಿದ್ದರೂ ಮನಸೇ ಹಾಗೆ. ಅದಕ್ಕೆ ಸುಟ್ಟುಕೊಂಡು ಹಿಂದಿರುಗುವ ತನಕ ಅರ್ಥವೇ ಆಗುವುದಿಲ್ಲ. ಹಿಂದಿರುಗುವವರಾದರೂ ಸರೀ ಆದರೆ ಹಿಂದಿರುಗಿ ಬರಲೂ ಮನಸಾಗದಂತಹ ಬಲೆಗೆ ಬಿದ್ದವರ ಬದುಕು ಮುರುಟಿ ಹೋಗುವುದದಂತೂ ಖಂಡಿತ.
ಯಾರನ್ನೂ ಹೆದರಿಸುವ ಉದ್ದೇಶದಿಂದ ಬರೆದ ಬರಹ ಅಲ್ಲ ಇದು. ಆಕರ್ಷಣೆಯ ಬೆಂಕಿಯ ತೀವ್ರತೆಯ ಬಗ್ಗೆ ಅರಿವು ಮೂಡಿಸುವುದಷ್ಟೇ ನನ್ನ ಉದ್ದೇಶ.
ಬರಹ: ಡಾ ರೂಪಾ ರಾವ್
(ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ, ಬೆಂಗಳೂರು. ಮೊ: 97408 66990)
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್














Click it and Unblock the Notifications