White Biryani: ಹೈದರಾಬಾದ್ ಸ್ಟೈಲ್ ವೈಟ್ ಬಿರಿಯಾನಿ ಮಾಡುವುದು ತುಂಬಾ ಸಿಂಪಲ್
ಬಿರಿಯಾನಿ ಎಂದರೆ ನಾನ್ವೆಜ್ ಪ್ರಿಯರಿಗೆ ಪಂಚಪ್ರಾಣ. ಮಾರುಕಟ್ಟೆಯಲ್ಲೂ ಹಲವು ಮಾದರಿಯ ಬಿರಿಯಾನಿಗಳು ಬಂದಿವೆ. ಅದರಲ್ಲಿ ಹೈದರಾಬಾದ್ನ ವೈಟ್ ಬಿರಿಯಾನಿ ಸಹ ಒಂದು. ಹೈದರಾಬಾದ್ನ ಈ ಬಿರಿಯಾನಿ ಮಾಡುವುದಕ್ಕೆ ನಿಮಗೆ ಐದರಿಂದ ಆರು ಐಟಂಗಳು ಇದ್ದರೆ ಸಾಕು.
ತುಂಬಾ ಸಿಂಪಲ್ ಆಗಿ ನೀವು ಮನೆಯಲ್ಲೇ ವೈಟ್ ಬಿರಿಯಾನಿ ಮಾಡಿಕೊಳ್ಳಬಹುದು. ಚಿಕನ್ ಗ್ರೇವಿ ಅಥವಾ ಕರಿಯೊಂದಿಗೆ ಸವಿಯುವುದಕ್ಕೆ ಈ ವೈಟ್ಬಿರಿಯಾನಿ ಅದ್ಭುತವಾಗಿರುತ್ತೆ. ಇಲ್ಲವೇ ಮೊಸರು ಬಜ್ಜಿಯೊಂದಿಗೂ ನೀವು ಈ ಬಿರಿಯಾನಿ ತಿನ್ನಬಹುದು.

ವೈಟ್ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು: ಮೊದಲೇ ಹೇಳಿದಂತೆ ಐದಾರು ಪದಾರ್ಥಗಳಿದ್ದರೆ ಸಾಕು ನೀವು ವೈಟ್ ಬಿರಿಯಾನಿಯನ್ನು ಮಾಡಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ನೋಡುವುದಾದರೆ. ಅರ್ಧಕೆಜಿ ಚಿಕನ್, ಅಕ್ಕಿ, ಎರಡರಿಂದ ಮೂರು ಈರುಳ್ಳಿ, ಮೆಣಸಿನಕಾಯಿ, ಸೊಂಪು, ಕಾಳು ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಬಿರಿಯಾನಿ ಎಲೆ, ಏಲಕ್ಕಿ, ಚಕ್ಕೆ- ಲವಂಗ, ಕಸ್ತೂರಿ ಮೇಥಿ, ನಿಂಬೆ ಹಣ್ಣು,ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ರುಚಿಕೆ ತಕ್ಕಷ್ಟು ಉಪ್ಪು.
ವೈಟ್ ಬಿರಿಯಾನಿ ಮಾಡುವ ವಿಧಾನ: ಈರುಳ್ಳಿ, ಮೆಣಸಿನಕಾಯಿ, ಚಕ್ಕೆ- ಲವಂಗ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು, ಏಲಕ್ಕಿಯನ್ನು ಮಿಕ್ರಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ತೊಳೆದ ಚಿಕನ್ಗೆ ಸ್ವಲ್ಪ ಮೊಸರು, ಉಪ್ಪು ಹಾಗೂ ಈಗಾಗಲೇ ಮಿಕ್ರಿಯಲ್ಲಿ ಹಾಕಿ ಮಿಕ್ಸ್ ಮಾಡಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10ರಿಂದ 15 ನಿಮಿಷ ಬಿಡಿ.
ಆ ಮೇಲೆ ಕುಕ್ಕರ್ನಲ್ಲಿ ತುಪ್ಪ ಹಾಕಿ ಈರುಳ್ಳಿಯನ್ನು ಚೆನ್ನಾಗಿ ಕೆಂಪು ಬಣ್ಣ ಬರುವವೆರೆ ಉರಿದುಕೊಳ್ಳಿ, ಆ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಕಸ್ತೂರಿ ಮೇಥಿ, ಚಕ್ಕೆ -ಲವಂಗ ಹಾಕಿಕೊಳ್ಳಿ. ಇದಕ್ಕೆ ಈಗಾಗಲೇ ಮಿಶ್ರಣ ಮಾಡಿ ಇಟ್ಟುಕೊಂಡಿರುವ ಚಿಕನ್ ಹಾಗೂ ಮಸಾಲೆಯನ್ನು ಸೇರಿಸಿ. ಇದೆಲ್ಲ ಒಂದು ಹಂತಕ್ಕೆ ನೀರು ಬಿಟ್ಟ ಮೇಲೆ ತೊಳೆದಿರುವ ಅಕ್ಕಿ, ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಎರಡರಿಂದ ಮೂರು ವಿಶಲ್ ಬಿಡಿ ಬಿಸಿ ಬಿಸಿ ವೈಟ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತೆ.
ಮಸಾಲೆ ಇಲ್ಲದ ಲೈಟ್ ಬಿರಿಯಾನಿ
ವೈಟ್ ಬಿರಿಯಾನಿ ಎನ್ನುವುದು ಹೆಚ್ಚು ಮಸಾಲೆ ಇಲ್ಲದೆ ಮಾಡುವ ಬಿರಿಯಾನಿ ಆಗಿದೆ. ಹೀಗಾಗಿ, ಇದು ತುಂಬಾ ಲೈಟ್ ಆಗಿರುತ್ತೆ ಮಕ್ಕಳಿಗೂ ಈ ಬಿರಿಯಾನಿ ಇಷ್ಟವಾಗುತ್ತೆ. ರಾತ್ರಿ ಸಮಯದಲ್ಲಿ ಬಿರಿಯಾನಿ ಸವಿಯಬೇಕು ಆದರೆ, ಹೆಚ್ಚು ಮಸಾಲೆ ಹಾಕುವುದು ಬೇಡ ಎಂದರೆ ನೀವು ಈ ಬಿರಿಯಾನಿಯನ್ನು ಮಾಡಬಹುದು.
ಇದರೊಂದಿಗೆ ರುಚಿಯಾದ ಗ್ರೇವಿ ಬೇಕಾದರೆ ಅದನ್ನು ಖಾರವಾಗಿ ಮಾಡಿಕೊಳ್ಳಬಹುದು. ಬಿರಿಯಾನಿಯಲ್ಲಿ ಮಸಾಲೆ ಕಡಿಮೆ ಇರುವುದರಿಂದ ಹೆವಿ ಫುಡ್ ಅನಿಸಲ್ಲ. ಚಿಕನ್ ಗ್ರೇವಿ ಇಲ್ಲದಿದ್ದರೆ ಮೊಸರು ಬಜ್ಜಿ ಇಲ್ಲವೇ ಈರುಳ್ಳಿಯೊಂದಿಗೂ ವೈಟ್ ಬಿರಿಯಾನಿ ಹೆಚ್ಚು ಟೇಸ್ಟಿ ಆಗಿರುತ್ತೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications