ಹಗ್ ಡೇ 2026: ಅಪ್ಪುಗೆಯ ಮಹತ್ವ ಮತ್ತು ವೈಜ್ಞಾನಿಕ ಪ್ರಯೋಜನಗಳು
ಪ್ರತಿ ವರ್ಷ ಫೆಬ್ರವರಿ 12 ರಂದು ಪ್ರೇಮಿಗಳ ವಾರದ ೬ನೆ ದಿನವಾಗಿ ಹಗ್ ಡೇ (Hug Day) ಆಚರಿಸಲಾಗುತ್ತದೆ. ಪ್ರೇಮಿಗಳ ದಿನಕ್ಕೆ ಕೇವಲ ಎರಡು ದಿನಗಳ ಮೊದಲು ಬರುವ ಈ ದಿನ, ಪ್ರೀತಿ ಮತ್ತು ಸ್ನೇಹವನ್ನು ವ್ಯಕ್ತಪಡಿಸಲು ಅತ್ಯಂತ ಸರಳ ಆದರೆ ಆಳವಾದ ಮಾರ್ಗವಾದ ಅಪ್ಪುಗೆಯ ಮಹತ್ವವನ್ನು ನೆನಪಿಸುತ್ತದೆ. ಗುಲಾಬಿ, ಚಾಕೊಲೇಟ್ ಮತ್ತು ಭರವಸೆಗಳ ಮೂಲಕ ಆಚರಿಸುವ ಪ್ರೇಮಿಗಳ ವಾರ, ಹಗ್ ಡೇ ಮೂಲಕ ಮಾನವೀಯ ಮತ್ತು ಪ್ರೀತಿಯ ಸ್ಪರ್ಶದ ಶಕ್ತಿಗೆ ಮರಳುತ್ತದೆ.
ಹಗ್ ಡೇ 1986ರಲ್ಲಿ ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಆರಂಭವಾಯಿತು ಎಂದು ನಂಬಲಾಗುತ್ತದೆ. ಕೆವಿನ್ ಜಬೋರ್ನಿ ಎಂಬ ಪಾದ್ರಿಯು ಜನರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು ಎಂಬ ಉದ್ದೇಶದಿಂದ ಅಪ್ಪುಗೆಯನ್ನು ಪ್ರೋತ್ಸಾಹಿಸಿದರು. ನಂತರ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಯುವಜನರ ಮೂಲಕ ಪ್ರೇಮಿಗಳ ವಾರದ ಭಾಗವಾಗಿ ಆಚರಿಸಲಾಗುತ್ತಿದೆ.

ಹಗ್ ಡೇ ಮಹತ್ವ
ಒಳ್ಳೆಯ ಅಪ್ಪುಗೆಯು ಕೆಲವೇ ಸೆಕೆಂಡುಗಳಲ್ಲಿ ಮನಸ್ಸನ್ನು ನೆಮ್ಮದಿಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಭಯವನ್ನು ತಗ್ಗಿಸುತ್ತದೆ ಮತ್ತು "ನಾನು ಒಬ್ಬಂಟಿಯಲ್ಲ" ಎಂಬ ಭಾವನೆಯನ್ನು ಉಂಟುಮಾಡುತ್ತದೆ. ಭಾರತದಲ್ಲಿ ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು ಕೆಲವೊಮ್ಮೆ ಅಸಹಜವಾಗಿ ಕಾಣಬಹುದು, ಆದರೆ ಮನೆಯೊಳಗಿನ ಸರಳ ಅಪ್ಪುಗೆಯೂ ಸಾಕಷ್ಟು ಅರ್ಥಪೂರ್ಣವಾಗಿರುತ್ತದೆ.
ಅಪ್ಪುಗೆಯ ವೈಜ್ಞಾನಿಕ ಪ್ರಯೋಜನ
ಅಪ್ಪುಗೆಯು ಕೇವಲ ಭಾವನಾತ್ಮಕ ಕ್ರಿಯೆಯಲ್ಲ. ಇದರ ಹಿಂದೆ ವಿಜ್ಞಾನದ ಅಂಶವು ಇದೆ. ಸಂಶೋಧನೆಯ ಪ್ರಕಾರ, ಅಪ್ಪುಗೆಯು ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ "ಬಂಧಿಸುವ ಹಾರ್ಮೋನ್" ಎಂದು ಕರೆಯಲಾಗುತ್ತದೆ.
ಅಪ್ಪುಗೆಯ ಪ್ರಯೋಜನಗಳು
* ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
* ರಕ್ತದೊತ್ತಡವನ್ನು ತಗ್ಗಿಸುತ್ತದೆ
* ಭಾವನಾತ್ಮಕ ಭದ್ರತೆಯನ್ನು ಹೆಚ್ಚಿಸುತ್ತದೆ
ಇತ್ತೀಚಿನ ಅಧ್ಯಯನಗಳಲ್ಲಿ, ಅಪ್ಪುಗೆಯನ್ನು ಹೆಚ್ಚು ಅನುಭವಿಸುವವರು ಕಡಿಮೆ ಹೊಂದಿರುವುದು ಕಂಡುಬಂದಿದೆ. 104 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, ದಿನದಂದು ಹೆಚ್ಚು ಅಪ್ಪುಗೆಯನ್ನು ಹೊಂದಿದ್ದವರು ಮರುದಿನ ಬೆಳಿಗ್ಗೆ ಕಡಿಮೆ ಒತ್ತಡವನ್ನು ಅನುಭವಿಸಿದ್ದಾರೆ ಎಂಬುದು ಸಾಬೀತಾಗಿದೆ. ಇದು ಅಪ್ಪುಗೆಯು ದೈನಂದಿನ ಜೀವನದಲ್ಲಿಯೂ ಸಹ ದೇಹದ ಒತ್ತಡದ ಪ್ರತಿಕ್ರಿಯೆಯನ್ನು ನಿಯಂತ್ರಿಸಬಹುದು ಎಂಬುದನ್ನು ಸೂಚಿಸುತ್ತದೆ.
ವಿವಿಧ ರೀತಿಯ ಅಪ್ಪುಗೆಗಳು ಅರ್ಥ
* ಪರಸ್ಪರ ಅಕ್ಕಪಕ್ಕ ನಿಂತು ಅಪ್ಪಿಕೊಳ್ಳುವುದು - ಸ್ನೇಹಪರ ಮತ್ತು ಸರಳತೆ ಸೂಚಿಸುತ್ತದೆ.
* ಹಿಂಬದಿಯ (ಬೆನ್ನಿನ) ಅಪ್ಪುಗೆ - ಅಚ್ಚರಿ ಮತ್ತು ಉಷ್ಣತೆ ಲಕ್ಷಣ
* ದೀರ್ಘ ಅಪ್ಪುಗೆ - ಆಳವಾದ ಸಾಂತ್ವನ ಮತ್ತು ನಿಕಟತೆಯನ್ನು ತೋರ್ಪಡಿಸುತ್ತದೆ.
ಯಾವ ಶೈಲಿಯ ಅಪ್ಪುಗೆಯಾದರೂ ಒಂದು ಸುವರ್ಣ ನಿಯಮ ಇದೆ, ಅರ್ಥಪೂರ್ಣ ಅಪ್ಪುಗೆಯು ಇಬ್ಬರೂ ಗೌರವಿತ ಮತ್ತು ಸುರಕ್ಷಿತವೆಂದು ಭಾವಿಸುವಂತಿರಬೇಕು ಹೊರತು ಅದು ಹಿಂಸಿಸುವಂತಾಗಬಾರದು. ಇಂದಿನ ಈ ಡಿಜಿಟಲ್ ಯುಗದಲ್ಲಿ, ಅಪ್ಪುಗೆಯಂತಹ ಮಾನವೀಯ ಮತ್ತು ಪ್ರೀತಿಯ ಸ್ಪರ್ಶವು ಇನ್ನೂ ಅತ್ಯಂತ ಶಕ್ತಿಯುತವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ













Click it and Unblock the Notifications