Copper Vessels: ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ತಾಮ್ರದ ಪಾತ್ರೆಗಳನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಇರಿಸಲಾದ ನೀರನ್ನು ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯ ಕಾಪಾಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಾಮ್ರದ ಪಾತ್ರೆಗಳನ್ನು ಅಡುಗೆಗೂ ಬಲಸಲಾಗುತ್ತದೆ.
ಆರೋಗ್ಯಕ್ಕೆ ತನ್ನದೆ ಕೊಡುಗೆ ನೀಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛವಾಗಿಡುವುದು ಕೂಡ ಒಂದು ದೊಡ್ಡ ಕೆಲಸವೇ ಸರಿ. ಮಾಮೂಲಿ ಪಾತ್ರೆಗಳಂತೆ ಈ ತಾಮ್ರದ ಪಾತ್ರೆ ಮತ್ತು ಲೋಟಗಳನ್ನು ತೊಳೆಯಲು ಸಾಧ್ಯವಿಲ್ಲ. ಹಾಗೆ ತೊಳೆದರೂ ಕೂಡ ಇವುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೀಗಾಗಿ ತಾಮ್ರದ ಪಾತ್ರೆಗಳನ್ನು ಹೇಗೆ ತೊಳೆಯುವುದು ಎಂಬುದನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ.

ತಾಮ್ರದ ಪಾತ್ರೆಗಳನ್ನು ಸ್ವಚ್ಛ ಮಾಡೋದು ಹೇಗೆ?
ತಾಮ್ರದ ಪಾತ್ರೆಗಳು ಅಥವಾ ವಸ್ತುಗಳನ್ನು ಹೇಗೆ ಸ್ವಚ್ಛಗೊಳಿಸುವುದು ಪ್ರಮುಖವಾದ ಕೆಲಸ. ತಾಮ್ರದ ಪಾತ್ರೆಗಳು ಅಥವಾ ವಸ್ತುಗಳನ್ನು ಉಪ್ಪು ಮತ್ತು ವಿನೆಗರ್ನಂತಹ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಸ್ವಚ್ಛ ಮಾಡಬಹುದು. ಅದರ ಮೊದಲ ಹೊಳಪನ್ನೇ ಮತ್ತೆ ನೀಡಬಹುದು.
ಉಪ್ಪು ಮತ್ತು ವಿನೆಗರ್ ತಾಮ್ರದ ವಸ್ತುಗಳನ್ನು ಸ್ವಚ್ಛಗೊಳಿಸಸುವುದು ತುಂಬಾ ಸುಲಭ ಮತ್ತು ಪಟ್ ಎಂದು ಆಗಿ ಹೋಗುತ್ತದೆ. ಈ ವಿಧಾನದಿಂದ ಕೈಗಳಿಗೆ ಯಾವುದೇ ಅಪಯಾವಿಲ್ಲ. ಉಪ್ಪು ಮತ್ತು ವಿನೆಗರ್ ಬಳಸಿ ತುಂಬಾ ಗಟ್ಟಿಯಾಗಿ ಕೂಡ ಉಜ್ಜುವ ಅಗತ್ಯವಿಲ್ಲ. ಆರಾಮವಾಗಿ ಪಾತ್ರೆಗಳನ್ನು ತೊಳೆಯಬಹುದಾಗಿದೆ.

ಇನ್ನು, ಪಾತ್ರೆ ತೊಳೆಯಲು ವಿನೆಗರ್ ಇಲ್ಲದಿದ್ದರೆ, ಅದನ್ನು ನಿಂಬೆ ರಸ ಅಥವಾ ಹುಣಸೆ ಹಣ್ಣಿನ ರಸವನ್ನು ಕೂಡ ಬಳಸಬಹುದು. ಅದರೆ, ವಿನೆಗರ್ ಹೆಚ್ಚು ಉತ್ತಮ.
ತಾಮ್ರದ ಪಾತ್ರೆ ತೊಳೆಯಲು ಬೇಕಿರುವ ಪದಾರ್ಥಗಳು
* ಅಗತ್ಯವಿರುವಷ್ಟು ಉಪ್ಪು
* ಅಗತ್ಯವಿರುವಷ್ಟು ವಿನೆಗರ್ (ವಿನೆಗರ್ ಇಲ್ಲದೆ ಇದ್ದರೇ ನಿಂಬೆ ರಸ ಅಥವಾ ಹುಣಸೆಹಣ್ಣು)
* ಪಾತ್ರೆ ತೊಳೆಯುವ ಬ್ರಷ್ ಅಥವಾ ಸ್ಕ್ರಬ್ಬರ್
ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ವಿಧಾನ
ಕಪ್ಪಗೆ ಆಗಿರುವ ಒಂದು ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಸ್ವಲ್ಪ ಉಪ್ಪು ಹಾಕಿರಿ. ಇದಾದ ನಂತರ ಸ್ವಲ್ಪ ವಿನೆಗರ್ ಸೇರಿಸಿ, ನಿಧಾನವಾಗಿ ಸ್ಕ್ರಬ್ ಮಾಡುತ್ತಾ ಹೋಗಿ. ವಿನೆಗರ್ ಇಲ್ಲದೆ ಇದ್ದರೆ ನಿಂಬೆ ರಸ ಅಥವಾ ಹುಣಸೆ ಹಣ್ಣಿನ ರಸವನ್ನು ಉಪ್ಪಿನ ಮೇಲೆ ಹಾಕಿ ನಿಧಾನವಾಗಿ ಪಾತ್ರೆಯನ್ನು ಉಜ್ಜಿ. ಬಳಿಕ ನೀರಿನಿಂದ ತೊಳೆದರೆ ಫಲ ಫಳ ಹೊಳೆಯುವ ತಾಮ್ರದ ಪಾತ್ರೆಗಳು ನಿಮ್ಮ ಕಣ್ಣಮುಂದೆ ಇರುತ್ತವೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications