Holi in Mud: ಈ ಗ್ರಾಮದಲ್ಲಿ ವರ್ಷಗಳಿಂದಲೂ ಕೆಸರಿನಲ್ಲೇ ಹೋಳಿ ಆಚರಣೆ
ಇಡೀ ಜಗತ್ತು ಹೋಳಿ ಆಚರಣೆಗಾಗಿ ಕಾತುರದಿಂದ ಕಾಯುತ್ತಿದೆ. ಭಗವಂತ ಶ್ರೀಕೃಷ್ಣ ಈ ಹೋಳಿ ಹಬ್ಬವನ್ನು ಹೆಚ್ಚು ಇಷ್ಟಪಡುತ್ತಾನೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗುತ್ತದೆ. ಹೀಗಾಗಿ ಪ್ರತೀ ವರ್ಷ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.
ದೇಶಾದ್ಯಂತ ಹೋಳಿ ಆಡುವ ವಿಭಿನ್ನ ಶೈಲಿಗಳು ಮತ್ತು ಪದ್ಧತಿಗಳಿವೆ. ಸಾಮಾನ್ಯವಾಗಿ ಬಣ್ಣಗಳು, ಹೂವುಗಳು ಮತ್ತು ಮೊಟ್ಟೆ/ಟೊಮ್ಯಾಟೋದಿಂದಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಹಲವೆಡೆ ಕೆಸರು ಮತ್ತು ಮಣ್ಣಿನ ಹೋಳಿಯನ್ನು ಆಡಲಾಗುತ್ತದೆ. ಹೌದು... ಉತ್ತರಪ್ರದೇಶದಲ್ಲಿ ಸುರಿರ್, ನೌಜಿಲ್ ಸೇರಿದಂತೆ ಇಂತಹ ಹಲವು ಗ್ರಾಮಗಳಿದ್ದು, ಇಲ್ಲಿ ಕೆಸರಿನಿಂದ ಹೋಳಿ ಆಡುವ ಸಂಪ್ರದಾಯ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಪ್ರದೇಶಗಳಲ್ಲಿ ಹೋಳಿ ಮರುದಿನ ಕೆಸರು ಮತ್ತು ಮಣ್ಣಿನ ಹೋಳಿಯನ್ನು ಆಡಲಾಗುತ್ತದೆ.

ಹೋಳಿ ನಂತರ ಮಣ್ಣಿನ ಹೋಳಿ
ಮಥುರಾ-ವೃಂದಾವನದಲ್ಲಿ ಅನೇಕ ರೀತಿಯ ಹೋಳಿಗಳನ್ನು ಆಡಲಾಗುತ್ತದೆ. ಇಲ್ಲಿ ಹೋಳಿ ಆಡುವ ವಿಭಿನ್ನ ಪದ್ಧತಿ ಇದೆ. ಮಥುರಾದ ನೌಜಿಲ್ ಪಟ್ಟಣದಲ್ಲಿ ನೀವು ವಿಶಿಷ್ಟವಾದ ಹೋಳಿ ಆಚರಣೆಯನ್ನು ಕಾಣಬಹುದು. ಇಲ್ಲಿ ಬಣ್ಣಗಳ ಹೋಳಿಯ ಮರುದಿನ ಅಂದರೆ ದೌಜ್ ದಿನದಂದು ಮಣ್ಣು ಅಥವಾ ಕೆಸರಿನಿಂದ ಹೋಳಿ ಆಡಲಾಗುತ್ತದೆ. ಈ ದಿನದಂದು ಉತ್ಸಾಹಿ ಯುವಜನತೆಯ ಗುಂಪುಗಳು ಬೀದಿಗಳಲ್ಲಿ ಮತ್ತು ಆಯಾ ನಿಗಧಿ ಪ್ರದೇಶಗಳಲ್ಲಿ ಮಣ್ಣಿನ ಹೋಳಿಯನ್ನು ಆನಂದಿಸುತ್ತಾರೆ.
ಮಣ್ಣಿನ ಹೋಳಿ
ನೌಜಿಲ್ ಪಟ್ಟಣದಲ್ಲಿ ಮಡ್ ಹೋಲಿ ಎಷ್ಟು ಪ್ರಸಿದ್ಧವಾಗಿದೆ ಎಂದರೆ ಜನರು ಹೋಳಿಯನ್ನು ವೀಕ್ಷಿಸಲು ಮತ್ತು ಆಡಲು ಇಲ್ಲಿಗೆ ಬರುತ್ತಾರೆ. ಪಟ್ಟಣದ ಎಲ್ಲಾ ಅಂಗಡಿಗಳು ಮತ್ತು ಇತರ ಸಂಸ್ಥೆಗಳು ಸಂಪೂರ್ಣವಾಗಿ ಈ ದಿನ ಮುಚ್ಚಲ್ಪಟ್ಟಿರುತ್ತವೆ. ಇಲ್ಲಿ ಹಾದು ಹೋಗುವ ಯಾರೇ ಆಗಲಿ ಕೆಸರು ಹಚ್ಚಿಕೊಳ್ಳದೇ ಹೋಗುವಂತಿಲ್ಲ. ಪಟ್ಟಣದಲ್ಲಿ ಹಾದು ಹೋಗುವ ಯಾವುದೇ ರೀತಿಯ ವಾಹನಗಳಿಗೂ ಕೆಸರು ಎರಚಲಾಗುತ್ತದೆ. ಪ್ರತಿಯೊಬ್ಬರಿಗೂ ಕೆಸರು ಹಚ್ಚಲಾಗುತ್ತದೆ.

ಮಣ್ಣಿನ ಹೋಳಿಗೆ ತಯಾರಿ
ಹೋಳಿ ಆಡಲು ಇಷ್ಟಪಡುವವರು ಮುಂಚಿತವಾಗಿಯೇ ಈ ಮಣ್ಣಿನ ಹೋಳಿಗೆ ತಯಾರಿ ಆರಂಭಿಸುತ್ತಾರೆ. ಹೋಳಿಗೆ ಎರಡು ದಿನ ಮುಂಚಿತವಾಗಿ ಇಲ್ಲಿನ ನಿವಾಸಿಗಳು ಟ್ರ್ಯಾಕ್ಟರ್ಗಳಲ್ಲಿ ಮಣ್ಣು ತಂದು ಕೆಸರಿನ ವ್ಯವಸ್ಥೆ ಮಾಡುತ್ತಾರೆ. ಇದರೊಂದಿಗೆ ಎಲ್ಲರೂ ಹೋಳಿ ಆಡುತ್ತಾರೆ. ಸ್ಥಳೀಯ ಮಹಿಳೆಯರೂ ಕೂಡ ಕೆಸರಿನಲ್ಲಿ ಮಿಂದೇಳುತ್ತಾರೆ.
ಹಲವು ವರ್ಷಗಳ ಸಂಪ್ರದಾಯ
ಧಾರ್ಮಿಕ ನಗರಿ ಮಥುರಾದ ನೌಜಿಲ್ ಪಟ್ಟಣದಲ್ಲಿ ಹೋಳಿ ಹಬ್ಬದ ಎರಡನೇ ದಿನದಂದು ಮಣ್ಣಿನ ಹೋಳಿ ಆಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣ್ಣಿನ ಹೋಳಿ ಅಥವಾ ಕೆಸರಿನ ಹೋಳಿ ದಿನದಂದು ಮಾರುಕಟ್ಟೆಗಳು ಮುಚ್ಚಿರುತ್ತವೆ. ಸ್ಥಳೀಯರು ಈ ದಿನ ಹೋಳಿಯಲ್ಲಿ ಮುಳುಗಿ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ದಾರಿಯಲ್ಲಿ ಹೋಗುವವರನ್ನೂ ಬಿಡುವುದಿಲ್ಲ. ಈ ಕೆಸರಿನಲ್ಲಿ ಆಡುವ ಪುಂಡರನ್ನು ಬಿಟ್ಟರೆ ಮತ್ತೇನೂ ಬೀದಿಯಲ್ಲಿ ಕಾಣಿಸುವುದಿಲ್ಲ. ಇಲ್ಲಿಯ ನಿವಾಸಿಗಳು ತಮ್ಮ ಹುಟ್ಟಿನಿಂದಲೂ ಈ ಸಂಪ್ರದಾಯವನ್ನು ನೋಡುತ್ತಿರುವುದಾಗಿ ಹೇಳುತ್ತಾರೆ.

ಹೋಳಿಕಾ ಸಮಯದಲ್ಲಿ, ಭಕ್ತ ಪ್ರಹ್ಲಾದನ ಬದುಕುಳಿಯುವಿಕೆಯನ್ನು ಮತ್ತು ಹೋಳಿಕಾ ದಹನವನ್ನು ಜನರು ಆಚರಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಹೋಳಿಕಾ ಭಸ್ಮವನ್ನು ಒಬ್ಬರಿಗೊಬ್ಬರು ಲೇಪಿಸಲು ಆರಂಭಿಸಿ, ಬೂದಿಯನ್ನು ನೀರಿನಲ್ಲಿ ಕಲಸಿ ಒಬ್ಬರ ಮೇಲೊಬ್ಬರು ಎರಚಲು ಆರಂಭಿಸಿದರು. ಕಾಲ ಕಳೆದಂತೆ ಅದು ಕೆಸರಿನ ರೂಪವನ್ನು ಪಡೆದುಕೊಂಡಿತು. ಜನರು ಕೆಸರಿನಿಂದ ಹೋಳಿ ಆಡಲಾರಂಭಿಸಿದರು ಮತ್ತು ಅಂದಿನಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications