ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಇಟ್ಟಿದಿರಾ? ಹಾಗಾದರೆ ಇದನ್ನು ಓದಿ
ಜೀವನ ಸಮೃದ್ಧಿಯಿಂದ ಕೂಡಿರಲು ದೇವರ ವಿಗ್ರಹವನ್ನು ಜನ ಮನೆಯಲ್ಲಿಟ್ಟು ಪೂಜಿಸುತ್ತಾರೆ. ದೇವರ ವಿಗ್ರಹವನ್ನು ಎಲ್ಲಿ ಇರಿಸಲಾಗುತ್ತದೆಯೋ ಅಥವಾ ದೇವರ ಹೆಸರನ್ನು ಎಲ್ಲಿ ಬರೆಯಲಾಗುತ್ತದೆಯೋ ಆ ಸ್ಥಳವು ಪವಿತ್ರವಾಗುತ್ತದೆ. ಅದೇ ರೀತಿ ವಾಹನ ಚಾಲನೆ ಮಾಡುವಾಗ ರಕ್ಷಣೆಯ ಭಾಗವಾಗಿ ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಅಥವಾ ಫೋಟೋವನ್ನು ಇಡಲಾಗುತ್ತದೆ.
ಆದರೆ ಈ ರೀತಿ ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ವಿಗ್ರಹ ಇಟ್ಟರೆ ಅದು ಶುದ್ಧ ಮತ್ತು ಪವಿತ್ರವಾಗಿರಲು ವಿಶೇಷ ಕಾಳಜಿ ವಹಿಸಬೇಕು. ಆಗ ಮಾತ್ರ ದೇವರ ಆಶೀರ್ವಾದ, ರಕ್ಷಣೆ ಸಿಗಲು ಸಾಧ್ಯ. ಹಾಗಾದರೆ ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಇಡುವುದು ಸರಿಯೇ? ಜ್ಯೋತಿಷ್ಯದ ನಿಯಮಗಳು ಏನು ಎಲ್ಲವನ್ನೂ ತಿಳಿಯೋಣ.

ಕಾರು ಚಾಲನೆ ಮಾಡುವಾಗ ದೇವರ ರಕ್ಷಣೆ ಇರಲೆಂದು ಜನ ದೇವರ ವಿಗ್ರಹ ಹಾಗೂ ಫೋಟೋಗಳನ್ನು ವಾಹನದಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಸಮಸ್ಯೆಗಳಿಲ್ಲ. ಆದರೆ ಆ ಸ್ಥಳ ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.
ಹೌದು ದೇವರ ವಿಗ್ರಹ ಅಥವಾ ಫೊಟೋ ಇಟ್ಟಿರುವ ಸ್ಥಳದಲ್ಲಿ ಯಾವುದೇ ಕೊಳಕು ಇರಬಾರದು. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೊಳಕು ಕೈಗಳಿಂದ ದೇವರನ್ನು ಮುಟ್ಟಬಾರದು. ದೇವರಿಗೆ ಅವಮಾನವಾಗದಂತೆ ವಿಶೇಷ ಕಾಳಜಿ ವಹಿಸಬೇಕು. ದೇವರನ್ನು ಗೌರವಿಸುವುದರಿಂದ ಆತನ ಕೃಪೆಯು ಭಕ್ತರ ಮೇಲೆ ಇರುತ್ತದೆ.
ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ವಿಗ್ರಹವನ್ನು ಇಡುವುದಕ್ಕೆ ಜ್ಯೋತಿಷ್ಯ ನಿಯಮಗಳು:-
*ನಿಮ್ಮ ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ಪ್ರತಿಮೆಯನ್ನು ಇರಿಸಿದ್ದರೆ, ಕಾರಿನಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯವನ್ನು ಸೇವಿಸದಂತೆ ಎಚ್ಚರ ವಹಿಸಿ.
*ದೇವರ ವಿಗ್ರಹದ ಮುಂದೆ ಕಾರಿನಲ್ಲಿ ಕುಳಿತಾಗ ಮಾಂಸಾಹಾರಿ ಆಹಾರವನ್ನು ಸೇವಿಸಬಾರದು
*ಕಾರಿನಲ್ಲಿ ಸಿಗರೇಟ್ ಸೇದಬಾರದು ಅಥವಾ ಮದ್ಯಪಾನ ಮಾಡಬಾರದು.

*ನಿಮ್ಮ ಕಾರನ್ನು ವಿಶೇಷವಾಗಿ ಡ್ಯಾಶ್ಬೋರ್ಡ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಲು ಮರೆಯದಿರಿ.
*ವಾಸ್ತು ಶಾಸ್ತ್ರದ ಪ್ರಕಾರ ಕಾರಿನಲ್ಲಿ ಗಣೇಶನ ವಿಗ್ರಹವನ್ನು ಇಡುವುದು ಅತ್ಯಂತ ಮಂಗಳಕರ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ. ಗಣೇಶನನ್ನು ಅಡೆತಡೆಗಳನ್ನು ನಾಶಮಾಡುವವನೆಂದು ಪರಿಗಣಿಸಲಾಗುತ್ತದೆ.
*ವಾಯುಪುತ್ರ ಹನುಮಂತನ ವಿಗ್ರಹವನ್ನು ವಾಹನದಲ್ಲಿ ಇಡುವುದು ಕೂಡ ಶುಭ. ಕಾರಿನಲ್ಲಿ ಯಾವಾಗಲೂ ಹಾರುವ ಹನುಮಂತನ ವಿಗ್ರಹವನ್ನು ಇಟ್ಟುಕೊಳ್ಳಿ. ಹನುಮಂತನನ್ನು ವಾಯುವಿನ ಮೊದಲ ಅವತಾರವೆಂದು ಪರಿಗಣಿಸಲಾಗಿದೆ. ವಾಯುದೇವ ಗಾಳಿಯ ದೇವರು. ಕಾರು ಗಾಳಿಯ ವೇಗದಲ್ಲಿ ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುತ್ತದೆ. ಅದಕ್ಕಾಗಿಯೇ ಕಾರಿನಲ್ಲಿ ಹನುಮಂತನ ವಿಗ್ರಹವನ್ನು ಇರಿಸಿದರೆ ತುಂಬಾ ಒಳ್ಳೆಯದು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications