ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಇಟ್ಟಿದಿರಾ? ಹಾಗಾದರೆ ಇದನ್ನು ಓದಿ
ಜೀವನ ಸಮೃದ್ಧಿಯಿಂದ ಕೂಡಿರಲು ದೇವರ ವಿಗ್ರಹವನ್ನು ಜನ ಮನೆಯಲ್ಲಿಟ್ಟು ಪೂಜಿಸುತ್ತಾರೆ. ದೇವರ ವಿಗ್ರಹವನ್ನು ಎಲ್ಲಿ ಇರಿಸಲಾಗುತ್ತದೆಯೋ ಅಥವಾ ದೇವರ ಹೆಸರನ್ನು ಎಲ್ಲಿ ಬರೆಯಲಾಗುತ್ತದೆಯೋ ಆ ಸ್ಥಳವು ಪವಿತ್ರವಾಗುತ್ತದೆ. ಅದೇ ರೀತಿ ವಾಹನ ಚಾಲನೆ ಮಾಡುವಾಗ ರಕ್ಷಣೆಯ ಭಾಗವಾಗಿ ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಅಥವಾ ಫೋಟೋವನ್ನು ಇಡಲಾಗುತ್ತದೆ.
ಆದರೆ ಈ ರೀತಿ ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ವಿಗ್ರಹ ಇಟ್ಟರೆ ಅದು ಶುದ್ಧ ಮತ್ತು ಪವಿತ್ರವಾಗಿರಲು ವಿಶೇಷ ಕಾಳಜಿ ವಹಿಸಬೇಕು. ಆಗ ಮಾತ್ರ ದೇವರ ಆಶೀರ್ವಾದ, ರಕ್ಷಣೆ ಸಿಗಲು ಸಾಧ್ಯ. ಹಾಗಾದರೆ ಕಾರಿನ ಡ್ಯಾಶ್ಬೋರ್ಡ್ ಮೇಲೆ ದೇವರ ವಿಗ್ರಹ ಇಡುವುದು ಸರಿಯೇ? ಜ್ಯೋತಿಷ್ಯದ ನಿಯಮಗಳು ಏನು ಎಲ್ಲವನ್ನೂ ತಿಳಿಯೋಣ.

ಕಾರು ಚಾಲನೆ ಮಾಡುವಾಗ ದೇವರ ರಕ್ಷಣೆ ಇರಲೆಂದು ಜನ ದೇವರ ವಿಗ್ರಹ ಹಾಗೂ ಫೋಟೋಗಳನ್ನು ವಾಹನದಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಸಮಸ್ಯೆಗಳಿಲ್ಲ. ಆದರೆ ಆ ಸ್ಥಳ ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.
ಹೌದು ದೇವರ ವಿಗ್ರಹ ಅಥವಾ ಫೊಟೋ ಇಟ್ಟಿರುವ ಸ್ಥಳದಲ್ಲಿ ಯಾವುದೇ ಕೊಳಕು ಇರಬಾರದು. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೊಳಕು ಕೈಗಳಿಂದ ದೇವರನ್ನು ಮುಟ್ಟಬಾರದು. ದೇವರಿಗೆ ಅವಮಾನವಾಗದಂತೆ ವಿಶೇಷ ಕಾಳಜಿ ವಹಿಸಬೇಕು. ದೇವರನ್ನು ಗೌರವಿಸುವುದರಿಂದ ಆತನ ಕೃಪೆಯು ಭಕ್ತರ ಮೇಲೆ ಇರುತ್ತದೆ.
ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ವಿಗ್ರಹವನ್ನು ಇಡುವುದಕ್ಕೆ ಜ್ಯೋತಿಷ್ಯ ನಿಯಮಗಳು:-
*ನಿಮ್ಮ ಕಾರಿನ ಡ್ಯಾಶ್ಬೋರ್ಡ್ನಲ್ಲಿ ದೇವರ ಪ್ರತಿಮೆಯನ್ನು ಇರಿಸಿದ್ದರೆ, ಕಾರಿನಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯವನ್ನು ಸೇವಿಸದಂತೆ ಎಚ್ಚರ ವಹಿಸಿ.
*ದೇವರ ವಿಗ್ರಹದ ಮುಂದೆ ಕಾರಿನಲ್ಲಿ ಕುಳಿತಾಗ ಮಾಂಸಾಹಾರಿ ಆಹಾರವನ್ನು ಸೇವಿಸಬಾರದು
*ಕಾರಿನಲ್ಲಿ ಸಿಗರೇಟ್ ಸೇದಬಾರದು ಅಥವಾ ಮದ್ಯಪಾನ ಮಾಡಬಾರದು.

*ನಿಮ್ಮ ಕಾರನ್ನು ವಿಶೇಷವಾಗಿ ಡ್ಯಾಶ್ಬೋರ್ಡ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಲು ಮರೆಯದಿರಿ.
*ವಾಸ್ತು ಶಾಸ್ತ್ರದ ಪ್ರಕಾರ ಕಾರಿನಲ್ಲಿ ಗಣೇಶನ ವಿಗ್ರಹವನ್ನು ಇಡುವುದು ಅತ್ಯಂತ ಮಂಗಳಕರ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ. ಗಣೇಶನನ್ನು ಅಡೆತಡೆಗಳನ್ನು ನಾಶಮಾಡುವವನೆಂದು ಪರಿಗಣಿಸಲಾಗುತ್ತದೆ.
*ವಾಯುಪುತ್ರ ಹನುಮಂತನ ವಿಗ್ರಹವನ್ನು ವಾಹನದಲ್ಲಿ ಇಡುವುದು ಕೂಡ ಶುಭ. ಕಾರಿನಲ್ಲಿ ಯಾವಾಗಲೂ ಹಾರುವ ಹನುಮಂತನ ವಿಗ್ರಹವನ್ನು ಇಟ್ಟುಕೊಳ್ಳಿ. ಹನುಮಂತನನ್ನು ವಾಯುವಿನ ಮೊದಲ ಅವತಾರವೆಂದು ಪರಿಗಣಿಸಲಾಗಿದೆ. ವಾಯುದೇವ ಗಾಳಿಯ ದೇವರು. ಕಾರು ಗಾಳಿಯ ವೇಗದಲ್ಲಿ ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುತ್ತದೆ. ಅದಕ್ಕಾಗಿಯೇ ಕಾರಿನಲ್ಲಿ ಹನುಮಂತನ ವಿಗ್ರಹವನ್ನು ಇರಿಸಿದರೆ ತುಂಬಾ ಒಳ್ಳೆಯದು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications