Get Updates
Get notified of breaking news, exclusive insights, and must-see stories!

Fasting Rule: ಇಂದು ಖಿಚಡಿ ಮತ್ತು ಬಾಳೆಹಣ್ಣು ತಿನ್ನಬಾರದು: ಕಾರಣ ಇಲ್ಲಿ ತಿಳಿಯಿರಿ

ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಅನೇಕ ಜನರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಗುರುವಾರ ಉಪವಾಸವನ್ನು ಮಾಡುತ್ತಾರೆ. ತಮ್ಮ ವೃತ್ತಿಜೀವನದಲ್ಲಿ ಯಾವುದೇ ದೊಡ್ಡ ಯಶಸ್ಸನ್ನು ಪಡೆಯದ ಅಥವಾ ತಮ್ಮ ಮದುವೆಯಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿರುವ ಜನರು ಗುರುವಾರದಂದು ಉಪವಾಸವನ್ನು ಆಚರಿಸುತ್ತಾರೆ.

ವಿಧಿವಿಧಾನಗಳೊಂದಿಗೆ ವಿಷ್ಣುವನ್ನು ಪೂಜಿಸುವ ಮೂಲಕ ಆತನ ಕೃಪೆಗೆ ಪಾತ್ರರಾಗುತ್ತಾರೆ. ಗುರುವಾರ ಉಪವಾಸದ ದೊಡ್ಡ ನಿಯಮವೆಂದರೆ ಈ ದಿನ ಉಪ್ಪು ಸೇವಿಸುವುದಿಲ್ಲ. ಕೆಲವರು ಸಂಜೆ ವಿಷ್ಣುವಿಗೆ ಸಿಹಿಯಾದ ಆಹಾರವನ್ನು ನೈವೇದ್ಯ ಮಾಡಿ ಪ್ರಸಾದವಾಗಿ ಸ್ವೀಕರಿಸಿ ಉಪವಾಸವನ್ನು ಕೊನೆಗೊಳಿಸುತ್ತಾರೆ.

Dont eat khichdi and banana on Thursday: Know the reason here

ಭಗವಾನ್ ವಿಷ್ಣುವಿನ ಪೂಜೆಯೊಂದಿಗೆ ಉಪವಾಸ ಮಾಡುವುದರಿಮದ ಅದೃಷ್ಟವನ್ನು ತರುತ್ತದೆ. ಹೆಚ್ಚು ಪ್ರಯತ್ನಗಳ ನಂತರವೂ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ಗುರುವಾರದಂದು ವಿಷ್ಣು ದೇವವನ್ನು ಆರಾಧಿಸಬೇಕು ಎಂದು ಹೇಳಲಾಗುತ್ತದೆ. ಮತ್ತೊಂದು ನಿಯಮದ ಪ್ರಕಾರ ಗುರುವಾರದಂದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನ ಖಿಚಡಿ ಮತ್ತು ಬಾಳೆಹಣ್ಣು ತಿನ್ನುವುದಿಲ್ಲ. ಅಷ್ಟಕ್ಕೂ ಗುರುವಾರ ಈ ಎರಡು ಪದಾರ್ಥಗಳನ್ನು ತಿನ್ನುವುದನ್ನು ಏಕೆ ನಿಷೇಧಿಸಲಾಗಿದೆ ಎಂದು ತಿಳಿಯೋಣ.

ಗುರುವಾರ ಬಾಳೆಹಣ್ಣು ಏಕೆ ತಿನ್ನುವುದಿಲ್ಲ?

ಗುರುವಾರ ಉಪವಾಸ ಮಾಡದಿದ್ದರೂ ಸಹ ಬಾಳೆಹಣ್ಣು ತಿನ್ನಬಾರದು. ಏಕೆಂದರೆ ವಿಷ್ಣುವು ಬಾಳೆ ಮರದ ಮೇಲೆ ನೆಲೆಸಿದ್ದಾನೆ ಎಂದು ನಂಬಲಾಗುತ್ತದೆ. ಹೀಗಾಗಿ ಗುರುವಾರ ಬಾಳೆ ಎಲೆ ಅಥವಾ ಬಾಳೆಹಣ್ಣುಗಳನ್ನು ಕೀಳುವುದು ಶುಭವಲ್ಲ. ಗುರುವಾರದಂದು ವಿಷ್ಣುವಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ಆದರೆ ಈ ದಿನ ಬಾಳೆಹಣ್ಣು ತಿನ್ನುವುದನ್ನು ನಿಷೇಧಿಸಲಾಗಿದೆ.

ಗುರುವಾರದಂದು ಬಾಳೆಹಣ್ಣು ತಿನ್ನುವುದರಿಂದ ನಿಮಗೆ ವಿಷ್ಣುವಿನ ಸಂಪೂರ್ಣ ಅನುಗ್ರಹ ದೊರೆಯುವುದಿಲ್ಲ. ಅದಲ್ಲದೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯೂ ನಿಮ್ಮ ಮೇಲೆ ಕೋಪಗೊಳ್ಳಬಹುದು. ಈ ಕಾರಣದಿಂದಾಗಿ ನೀವು ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.

Dont eat khichdi and banana on Thursday: Know the reason here

ಗುರುವಾರದಂದು ಖಿಚಡಿ ಏಕೆ ತಿನ್ನಬಾರದು?

ಗುರುವಾರ ಯಾವುದೇ ಇತರ ಹಳದಿ ವಸ್ತುಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಗುರುವಾರದಂದು ಖಿಚಡಿ ತಿನ್ನುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಗುರುವಾರದಂದು ಖಿಚಡಿ ತಿನ್ನುವುದರಿಂದ ನಿಮ್ಮ ಗ್ರಹಗಳು ದುರ್ಬಲವಾಗುತ್ತವೆ ಮತ್ತು ನಿಮಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.

ಇದಲ್ಲದೇ ಗುರುವಾರ ಖಿಚಡಿ ತಿನ್ನುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ನಿಮ್ಮ ಆದಾಯವು ಕಡಿಮೆಯಾಗಲು ಪ್ರಾರಂಭವಾಗುತ್ತದೆ ಮತ್ತು ವೆಚ್ಚಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ನಿಮ್ಮ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕಾಣಲು ಬಯಸಿದರೆ, ಗುರುವಾರದಂದು ಖಿಚಡಿ ಮತ್ತು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+