Happiness: ಬದುಕಿನ ಆ ಎರಡು ಆನಂದಗಳು ಯಾವುದು ಗೊತ್ತಾ?
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಎರಡು ರೀತಿಯ ಆನಂದಗಳಿವೆಯಂತೆ ಅದರಲ್ಲಿ ಒಂದು ಲೋಕದ ಸುಖ-ಸಂತೋಷಗಳ ಮೂಲಕ ಪಡೆಯುವ ವಿಷಯಾನಂದ. ಇನ್ನೊಂದು ಭಗವಂತನ ಅರ್ಚನೆಯ ಮೂಲಕ ಒದಗಿ ಬರುವ ಭಜನಾನಂದ. ಇದೆರಡರ ನಡುವೆ ಮನುಷ್ಯ ಸುಖಾಪೇಕ್ಷೆ ಮತ್ತು ವಿಷಯಾಪೇಕ್ಷೆಗಳ ಬೆನ್ನು ಹತ್ತಿ ಹೋಗುತ್ತಾನೆ.
ಸುಖಾಪೇಕ್ಷೆ ಮತ್ತು ವಿಷಯಾಪೇಕ್ಷೆಗಳಿಂದ ನಿಜವಾಗಿಯೂ ಆನಂದ ಪಡೆಯಲು ಸಾಧ್ಯನಾ? ಎಂಬ ಪ್ರಶ್ನೆಗಳು ಮೂಡದಿರದು. ಯಾವುದರ ಬಗ್ಗೆ ಆಸಕ್ತಿ ಹುಟ್ಟುತ್ತದೆಯೋ ಅದೇ ವಿಷಯಾಪೇಕ್ಷೆ. ಇಲ್ಲಿ ನಾವು ಯಾವ ವಿಷಯದ ಬಗ್ಗೆ ಅಪೇಕ್ಷೆ ಹೊಂದಿದ್ದೇವೆ ಎನ್ನುವುದು ಬಹು ಮುಖ್ಯವಾಗುತ್ತದೆ. ಒಳ್ಳೆಯ ವಿಷಯ ಆದರೆ ಒಳ್ಳೆಯದ್ದೇ ಆಗುತ್ತದೆ. ಅದರಾಚೆಗೆ ಕೆಟ್ಟ ವಿಚಾರವಾದರೆ ಅದಕ್ಕೆ ಕಂದಾಯ ಕಟ್ಟಬೇಕಾಗುತ್ತದೆ.

ಇನ್ನು ಈ ವಿಷಯಾಪೇಕ್ಷೆ ಎನ್ನುವುದು ಮನುಷ್ಯನ ರಕ್ತ ಮಾಂಸ ಮಜ್ಜೆಯಲ್ಲಿ ಬೇರು ಬಿಟ್ಟಿದೆ. ಹೀಗಾಗಿ ಮನುಷ್ಯ ಸದಾ ವಿಷಯಾಪೇಕ್ಷೆಯಲ್ಲಿರುತ್ತಾನೆ. ಹಾಗೆಂದು ವಿಷಯಾಪೇಕ್ಷೆಗೆ ಒಳಗಾಗುವುದು ಕೆಟ್ಟದಲ್ಲ. ಬದಲಿಗೆ ನಾವು ಯಾವ ವಿಷಯಗಳಲ್ಲಿ ಅಪೇಕ್ಷೆಗೆ ಒಳಗಾಗುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ನಿಂತಿರುತ್ತದೆ. ಇದರ ಜತೆಗೆ ಸುಖಾಪೇಕ್ಷೆಯೂ ಅಷ್ಟೆ. ಕ್ಷಣಿಕ ಸುಖದ ಹಿಂದೆ ಬಿದ್ದವರು ಉದ್ಧಾರವಾದ ಉದಾಹರಣೆಗಳಿಲ್ಲ.
ಮನುಷ್ಯನ ಜೀವಶಕ್ತಿ ಯಾವುದು?
ಸುಖಾಪೇಕ್ಷೆ ಹಾಗೂ ವಿಷಯಾಪೇಕ್ಷೆಗಳು ಮನುಷ್ಯನ ಮೂಲಭೂತ ಜೀವಶಕ್ತಿಯಾಗಿದೆ. ಅಷ್ಟೇ ಅಲ್ಲ ಮನುಷ್ಯ ಬದುಕುತ್ತಿರುವುದೇ ಈ ಅಪೇಕ್ಷೆಯ ಪ್ರೇರಣೆಯಿಂದ. ಕೆಲವೊಮ್ಮೆ ಮನುಷ್ಯನ ಸಂಕಲ್ಪ ಶಕ್ತಿಯನ್ನು ವಿಷಯಾಪೇಕ್ಷೆಗಳು ಮೊಟಕುಗೊಳಿಸಿಬಿಡುತ್ತವೆ. ವಿಷಯಾಸಕ್ತರಾದವರನ್ನು ನೀವು ಲೌಕಿಕ ಸುಖಗಳ ಹಿಂದೆ ಹೋಗಬೇಡಿ ಎಂದು ಹೇಳುವುದು ಮೂರ್ಖತನವಾಗುತ್ತದೆ.

ಆತ್ಮಜ್ಞಾನಿಗಳು, ಮನುಷ್ಯನ ಮನೋಮಟ್ಟವನ್ನು ಅರಿತವರಾದ ಆಧ್ಯಾತ್ಮಿಕ ಚಿಂತಕರು ಹೇಳುವುದಿಷ್ಟೆ. ಸುಖಾನ್ವೇಷಿಯಾಗು, ಆದರೆ ಆ ನಿನ್ನ ಸುಖಾಪೇಕ್ಷೆ ನಿನ್ನ ಮಾನಸಿಕ ಮತ್ತು ಶಾರೀರಿಕ ಸೌಖ್ಯವನ್ನು ಹಾಳುಮಾಡುವಂತಿರಬಾರದು ಅಥವಾ ನಿನ್ನ ಊರ್ಧ್ವ ಗಮನಾಭಿಲಾಷೆಯನ್ನು ಕುಂಠಿತ ಗೊಳಿಸುವಂತಿರಬಾರದು. ಮಾನಸಿಕವಾದ ಸಂತೋಷಗಳ ಅನ್ವೇಷಣೆಯ ಮೂಲಕ ಆತ್ಮಾನಂದವನ್ನು ಪಡೆದುಕೊಳ್ಳಲು ಬೇಕಾದ ಶಕ್ತಿ, ಸಾಮರ್ಥ್ಯವನ್ನು ಗಳಿಸಿಕೋ. ನಿನ್ನ ಸುಖಾಪೇಕ್ಷೆಯು ಆತ್ಮ ಹಾನಿಗೆ ದಾರಿಯಾಗಬಾರದು. ಇದು ವಿಚಾರವಂತರಲ್ಲಿ ಮೂಡಬೇಕಾದ ಎಚ್ಚರಿಕೆಯಾಗಿದೆ.
ನೈತಿಕ ನಿಯಮ ಅಳವಡಿಕೆ ಅಗತ್ಯ
ನೈತಿಕ ನಿಯಮಗಳಾಗಲೀ, ಇನ್ನಿತರ ನಿಯಮಗಳಾಗಲೀ ಇವುಗಳೆಲ್ಲವೂ ಅಡ್ಡದಾರಿ ಹಿಡಿದು ಸುಖಾಪೇಕ್ಷೆಯ ಬೆನ್ನತ್ತಿ ಹೋಗುವ ಮನುಷ್ಯನನ್ನು ಕಾಪಾಡುವ ಸಲುವಾಗಿಯೇ ಮಾಡಲ್ಪಟ್ಟವುಗಳಾಗಿವೆ. ನಮ್ಮಲ್ಲಿ ಮೂಡುವಂತಹ ವಿಷಯಾಪೇಕ್ಷೆಯಾಗಲೀ, ಸೆಳೆಯುವಂತಹ ಸುಖಾಪೇಕ್ಷೆಯಾಗಲೀ ಇವುಗಳನ್ನು ಅನುಕೂಲವಾಗುವಂತಹ ಚೌಕಟ್ಟಿನಲ್ಲಿ ಪಳಗಿಸಿ ಬೇರೊಂದು ಸ್ಥಿತಿಗೆ ಸಿದ್ಧಗೊಳಿಸುವ ತಂತ್ರ ನಮ್ಮಲ್ಲಿಯೇ ಇದೆ ಎಂಬುದನ್ನು ಮರೆಯಬಾರದು.

ಮನಸ್ಸನ್ನು ಬೇರೊಂದು ಸ್ಥಿತಿಗೆ ಸಿದ್ಧಪಡಿಸುವುದೆಂದರೆ ಇಲ್ಲಿ ಆನಂದದ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದು ಎಂದರ್ಥ. ಮನುಷ್ಯನೊಬ್ಬ ಬೇಕೇ ಬೇಕು ಎಂದಾದರೆ ವಿಷಯಾನಂದದ ಹಿಂದೆ ಹೋಗಬಹುದು. ಆದರೆ ಅದು ಭಜನಾಂದಕ್ಕೆ ಎಂದೂ ಪ್ರತಿಕೂಲವಾಗಬಾರದು. ಇದು ಒಂದು ಬಗೆಯ ವಿವೇಚನೆ ಮತ್ತು ವಿಷಯಾನಂದದಲ್ಲಿ ಮಾಡಿಕೊಳ್ಳುವ ಆಯ್ಕೆ ಮೇಲೆ ಅವಲಂಬಿಸಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೇನು?
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ ವಿಷಯಜನ್ಯ ಭೋಗಗಳು ಖಂಡಿತವಾಗಿಯೂ ದುಃಖಕ್ಕೆ ಕಾರಣವಾಗುತ್ತವೆ. ವಿಷಯಸುಖಗಳನ್ನು ಅನುಭವಿಸುವಾಗ ಕೂಡ ಈ ವಿಚಾರವನ್ನು ನೆನಪಿನಲ್ಲಿರಿಸಿಕೊಂಡಿದ್ದೇ ಆದರೆ ವಿವೇಚನೆಗೆ ಅನುಕೂಲವಾಗುತ್ತದೆ. ಆಗ ವಿಷಯಾಸಕ್ತನಾದವನು ಕೂಡಾ ನೈತಿಕ ನಿರ್ದಿಷ್ಟ ನೈತಿಕ ಕಟ್ಟುಪಾಡುಗಳ ಒಳಗೇ ವಿಷಯಾನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಭಜನಾಂದವನ್ನೂ ಪಡೆದುಕೊಳ್ಳಲು ಅಗತ್ಯವಾದ ಆಧ್ಯಾತ್ಮಿಕ ಸಾಧನೆಗಳನ್ನು ಕೈಗೊಂಡರೆ, ಮನಸ್ಸು ಅನುಕ್ರಮವಾಗಿ ಪರಿಶುದ್ಧವಾಗುತ್ತಾ ವಿಷಯಾನಂದದ ಬಗೆಗಿನ ಆಸಕ್ತಿ ಕಡಿಮೆಯಾಗಿ ಭಜನಾನಂದದ ಕಡೆಗೆ ಮನಸ್ಸು ಗಮನಾರ್ಹವಾಗಿ ವಾಲುತ್ತದೆ.
ಶ್ರೀರಾಮಕೃಷ್ಣರು ಹೇಳುವಂತೆ ನಮ್ಮ ಮನಸ್ಸಿನ ಭಾವ-ರಾಗಗಳನ್ನು ನಾವು ವಿನಾಶಗೊಳಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಶುದ್ಧಗೊಳಿಸಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ನೇರಗೊಳಿಸಬಹುದು. ನಮ್ಮ ರಾಗ-ಭಾವಗಳು ಕೀಳು ವಿಷಯಗಳ ಕಡೆ ತಿರುಗಿದರೆ ನಾವೂ ಕೀಳಾಗುತ್ತೇವೆ. ಅವುಗಳನ್ನು ಮೇಲ್ಮುಖವಾಗಿ ತಿರುಗಿಸಿದರೆ ನಾವು ಮೇಲಾದವರಾಗುತ್ತೇವೆ. ಅವುಗಳನ್ನು ಪರಬ್ರಹ್ಮಾಭಿಮುಖವಾಗಿ ನಿರ್ದೇಶಿಸಿದರೆ ಅವುಗಳ ಜತೆಗೆ ನಾವೂ ಆ ಹಂತಕ್ಕೆ ಏರುತ್ತೇವೆ. ಆಗ ಈ ಲೋಕದ ವಿಷಯ ಪ್ರವೃತ್ತಿಗಳು ಸುಶಿಕ್ಷಿತವಾಗಿ ಪರಿಣತವಾಗಿ ತಮ್ಮ ಮೊದಲಿನ ಗುಣ ಲಕ್ಷಣಗಳನ್ನು ಕಳೆದುಕೊಂಡು ಅಸಾಧಾರಣವಾಗುತ್ತವೆ.
ನಮ್ಮ ಆಸಕ್ತಿಗಳು ಸತ್ಯದ ಕಡೆಗಿರಲಿ
ಯಾವಾಗ ಒಬ್ಬ ಮನುಷ್ಯ ತಾನು ಕೇವಲ ಮನೋಬುದ್ದಿ ಅಹಂಕಾರಗಳಿಂದ ಕೂಡಿದ ದೇಹವಲ್ಲ. ನಾನು ನಿತ್ಯ ಶುದ್ಧವಾದ ಆತ್ಮಸ್ವರೂಪನೇ ಎಂದು ಅನುಭವಿಸಿ ತಿಳಿಯುತ್ತಾನೆಯೋ ಆಗ ಅವನ ಭಾವ-ರಾಗಗಳು ಸ್ತಬ್ಧವಾಗುತ್ತವೆ. ಏಕೆಂದರೆ ಈ ಭಾವ-ರಾಗಗಳು ವಾಸ್ತವವಾಗಿ ನೋಡಿದರೆ ತಪ್ಪುದಾರಿಗೆ ಬಿದ್ದ ನಮ್ಮ ಅಪೇಕ್ಷೆಗಳಲ್ಲದೆ ಬೇರೆ ಯೂವುದೂ ಅಲ್ಲ. ನಿಜ ಹೇಳಬೇಕೆಂದರೆ ಆಸೆಗಳು ನಮ್ಮ ಉದ್ದೇಶಕ್ಕೆ ಅನುಸಾರವಾಗಿ ಶತ್ರುಗಳೂ ಆಗಬಹುದು. ಮಿತ್ರರೂ ಆಗಬಹುದು.
ಯಾವಾಗ ನಮ್ಮ ಆಸಕ್ತಿಗಳು ಸತ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ನಮ್ಮ ಬಿಡುಗಡೆಯ ಹಾಗೂ ಆನಂದದ ಸಾಧನಗಳಾಗುತ್ತವೆ. ಯಾವಾಗ ಅವು ಮಿಥ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ಬಂಧನದ ಹಾಗೂ ದುಃಖದ ಸಾಧನಗಳಾಗುತ್ತವೆ. ಆನಂದ ಎನ್ನುವುದು ಕೇವಲ ಸುಖ ಅಲ್ಲ. ಅದು ಸುಖ, ದುಃಖಗಳಾಚೆಯದು ಮತ್ತು ಎಂದೂ ದೈಹಿಕ, ಮಾನಸಿಕ ಸ್ತರಗಳಲ್ಲಿ ಪ್ರತ್ಯೇಕಿಸಲಾರದಂತಹದ್ದಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications