ಜ್ಯೇಷ್ಠ ಹುಣ್ಣಿಮೆಯ ಇಂದು ಅಪರೂಪದ ಗ್ರಹಗಳ ಸಂಯೋಗ : 6 ರಾಶಿಯವರಿಗೆ ಒಲಿಯುವುದು ಸಂಪತ್ತು, ಸಮೃದ್ಧಿ

ಇಂದು ಜ್ಯೇಷ್ಠ ಮಾಸ ಶುಕ್ಲ ಪಕ್ಷ ಹುಣ್ಣಿಮೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಶಕ್ತಿಶಾಲಿ ದಿನಗಳಲ್ಲಿ ಒಂದಾಗಿದೆ. ಹುಣ್ಣಿಮೆ ತಿಥಿ ಜೂನ್ 29 ರಂದು ಬೆಳಗಿನ ಜಾವ 3:06 ರಿಂದ ಜೂನ್ 30 ರಂದು ಬೆಳಗಿನ ಜಾವ 5:26 ರವರೆಗೆ ಇರುತ್ತದೆ. ಈ ದಿನವನ್ನು ವಟ ಪೂರ್ಣಿಮಾ ಅಥವಾ ವಟ ಸಾವಿತ್ರಿ ವ್ರತ ಎಂದೂ ಕರೆಯಲಾಗುತ್ತದೆ. ಈ ವರ್ಷ, ಜ್ಯೇಷ್ಠ ಹುಣ್ಣಿಮೆ ಅಪರೂಪದ ಗ್ರಹಗಳ ಸಂಯೋಗದೊಂದಿಗೆ ಬರುತ್ತಿದೆ. ಕರ್ಕ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ಸಿಂಹ ರಾಶಿಗೆ ಗುರುವಿನ ಪ್ರವೇಶ ಈ ದಿನವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಪರಿಣಾಮವಾಗಿ, ಭಾವನೆಗಳು, ವೃತ್ತಿ ಮತ್ತು ಸಂಬಂಧಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ.

ಜ್ಯೇಷ್ಠ ಹುಣ್ಣಿಮೆಯ ಆಧ್ಯಾತ್ಮಿಕ ಮಹತ್ವ:

ಇಂದು ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿಷ್ಣು ಮತ್ತು ಲಕ್ಷ್ಮೀ ಆರಾಧನೆಗೆ ಶುಭ ದಿನ. ವಟ ವೃಕ್ಷ ಅಥವಾ ಆಲದ ಮರವನ್ನು ಪೂಜಿಸುವುದರೊಂದಿಗೆ ಸಾವಿತ್ರಿ-ಸತ್ಯವಾನರ ಕಥೆಯನ್ನು ಓದುವ ಮೂಲಕ, ಪತಿಯ ದೀರ್ಘಾಯುಷ್ಯ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬಹುದು. ದಾನ, ತರ್ಪಣ ಮತ್ತು ಉಪವಾಸ ಮಾಡುವುದರಿಂದ ಪಿತೃ ದೇವರುಗಳು ತೃಪ್ತರಾಗುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ವರ್ಷ ಅಧಿಕ ಮಾಸದ ಪ್ರಭಾವದಿಂದಾಗಿ ಜ್ಯೇಷ್ಠ ಹುಣ್ಣೆಮೆ ಹೆಚ್ಚು ಶಕ್ತಿಶಾಲಿಯಾಗಲಿದೆ.

Jyeshtha Purnima 2026 Horoscope

ಹನ್ನೆರಡು ರಾಶಿಗಳ ಮೇಲೆ ಪ್ರಭಾವ :

ಮೇಷ ರಾಶಿ (Aries): ವೃತ್ತಿ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಇದು ಸರಿಯಾದ ಸಮಯ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈಗ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನವನ್ನು ನೀಡಬಹುದು. ಗುರುವಿನ ಸಂಚಾರದಿಂದ ಧೈರ್ಯ ಹೆಚ್ಚುತ್ತದೆ. ಹೊಸ ಕೆಲಸಕ್ಕೆ ಕೈ ಹಾಕಬಹುದು. ಆದರೆ ಸಂಬಂಧಗಳ ಬಗ್ಗೆ ಜಾಗರೂಕರಾಗಿರಬೇಕು. ಆರೋಗ್ಯವು ಉತ್ತಮವಾಗಿರುತ್ತದೆ.

ವೃಷಭ ರಾಶಿ (Taurus): ಕೌಟುಂಬಿಕ ವ್ಯವಹಾರಗಳು ಚೆನ್ನಾಗಿ ನಡೆಯುತ್ತವೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.ವ್ಯಾಪಾರ ಉದ್ಯಮಗಳು ವೇಗವನ್ನು ಪಡೆಯುತ್ತವೆ. ಸಿಂಹ ರಾಶಿಗೆ ಗುರುವಿನ ಪ್ರವೇಶವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಆರ್ಥಿಕ ಲಾಭವಾಗುವುದು. ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ.

ಜುಲೈ ಒಂದರಿಂದ ಈ ರಾಶಿಯವರಿಗೆ ಗಜಕೇಸರಿ ಯೋಗ :ಒಲಿಯುವಳು ಲಕ್ಷ್ಮೀ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ
ಜುಲೈ ಒಂದರಿಂದ ಈ ರಾಶಿಯವರಿಗೆ ಗಜಕೇಸರಿ ಯೋಗ :ಒಲಿಯುವಳು ಲಕ್ಷ್ಮೀ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ

ಮಿಥುನ ರಾಶಿ (Gemini): ನಿಮ್ಮ ಭಾವನೆಗಳು ಮತ್ತು ಸಂಬಂಧಗಳ ಮೇಲೆ ಗಮನ ಹರಿಸಬೇಕು. ಬುಧನ ಹಿಮ್ಮುಖ ಚಲನೆ ಈ ರಾಶಿಯವರ ಮೇಲೆ ಪರಿಣಾಮ ಬೀರಬಹುದು. ಹಳೆಯ ಸಮಸ್ಯೆಗಳು ಬಗೆಹರಿಯುವುದು. ವೃತ್ತಿಜೀವನದ ಅವಕಾಶಗಳು ಸುಧಾರಿಸುತ್ತವೆ. ನಿರ್ಧಾರಗಳ ಬಗ್ಗೆ ಜಾಗರೂಕರಾಗಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಪೂಜೆ ಮಾಡಿ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ.

ಕರ್ಕಾಟಕ ರಾಶಿ (Cancer): ಈ ಜ್ಯೇಷ್ಠ ಪೂರ್ಣಿಮೆಯು ಈ ರಾಶಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ರಾಶಿಯ ಮೇಲೆ ಚಂದ್ರನ ಪ್ರಭಾವ ಹೆಚ್ಚಾಗಿರುತ್ತದೆ. ಭಾವನಾತ್ಮಕ ಸ್ಥಿರತೆ ಹೆಚ್ಚಾಗುತ್ತದೆ. ಪ್ರೀತಿ ಮತ್ತು ವಾತ್ಸಲ್ಯ ವೃದ್ಧಿಯಾಗುತ್ತದೆ. ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಈ ರಾಶಿಯವರ ಮೇಲೆ ಲಕ್ಷ್ಮೀ ಅನುಗ್ರಹವಿರುವುದು. ವಿವಿಧ ಮಾರ್ಗಗಳ ಮೂಲಕ ಹಣವನ್ನು ಪಡೆಯುವ ಸಾಧ್ಯತೆಗಳು ಸುಧಾರಿಸುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ.

ಸಿಂಹ ರಾಶಿ (Leo): ಗುರು ನಿಮ್ಮ ರಾಶಿಗೆ ಪ್ರವೇಶಿಸುವುದರಿಂದ ಶುಭಫಲ ದೊರೆಯುತ್ತದೆ. ನಾಯಕತ್ವದ ಗುಣಗಳು ಮತ್ತು ಸೃಜನಶೀಲತೆ ಹೆಚ್ಚಾಗುತ್ತದೆ. ಆರ್ಥಿಕ ಲಾಭವಾಗುವುದು. ಹೂಡಿಕೆಗಳಿಂದ ಲಾಭವಾಗುವುದು. ಕೆಲಸದಲ್ಲಿ ನಿಮಗೆ ಮನ್ನಣೆ ಸಿಗುತ್ತದೆ. ಕುಟುಂಬ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುತ್ತದೆ.

ಜೂನ್ 26ರವರೆಗೆ ಈ 4 ರಾಶಿಗಳ ಅದೃಷ್ಟ ಬದಲಾಗುತ್ತದೆಯೇ? ಚಂದ್ರನ ತುಲಾ ರಾಶಿ ಸಂಚಾರದ ಪರಿಣಾಮ ಏನು?
ಜೂನ್ 26ರವರೆಗೆ ಈ 4 ರಾಶಿಗಳ ಅದೃಷ್ಟ ಬದಲಾಗುತ್ತದೆಯೇ? ಚಂದ್ರನ ತುಲಾ ರಾಶಿ ಸಂಚಾರದ ಪರಿಣಾಮ ಏನು?

ಕನ್ಯಾ ರಾಶಿ(Virgo): ಆಧ್ಯಾತ್ಮಿಕ ಭಾವನೆಗಳು ಹೆಚ್ಚಾಗುತ್ತವೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಇದು ನಿಮಗೆ ಒಳ್ಳೆಯ ದಿನ. ಬುಧ ಗ್ರಹದ ಹಿಮ್ಮೆಟ್ಟುವಿಕೆಯ ಪರಿಣಾಮವು ನಿಮಗೆ ಶುಭವಾಗಿರುತ್ತದೆ. ನಿಮ್ಮ ನಿರ್ಧಾರಗಳ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ ಇದೆ. ಆರೋಗ್ಯ ಮತ್ತು ಕೆಲಸದ ಬಗ್ಗೆ ಜಾಗರೂಕರಾಗಿರಿ. ದಾನ ಮತ್ತು ಪ್ರಾರ್ಥನೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯಿರಿ.

ತುಲಾ ರಾಶಿ (Libra): ಇದು ನಿಮಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ ಸಮಯ. ಜೀವನದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ವಿಶೇಷವಾಗಿ ಗುರುವಿನ ಸಂಚಾರವು ನಿಮಗೆ ಪ್ರಯೋಜನಕಾರಿಯಾಗಿದೆ. ಇದು ನಿಮ್ಮನ್ನು ಉತ್ತಮ ಬೆಂಬಲದೊಂದಿಗೆ ಮುಂದೆ ಕೊಂಡೊಯ್ಯುತ್ತದೆ. ಆರ್ಥಿಕ ಸ್ಥಿರತೆ ಇರುತ್ತದೆ. ನಿಮ್ಮ ಖರ್ಚುಗಳನ್ನು ನೀವೇ ನಿಯಂತ್ರಿಸುವಿರಿ. ಹೊಸ ಆದಾಯದ ಮೂಲಗಳ ಬಗ್ಗೆ ಆಳವಾಗಿ ಯೋಚಿಸುವಿರಿ. ವಿವಾದಗಳಿಂದ ದೂರವಿದ್ದರೆ ಒಳ್ಳೆಯದು.

ವೃಶ್ಚಿಕ ರಾಶಿ (Scorpio): ವೃತ್ತಿಜೀವನದಲ್ಲಿನ ಬದಲಾವಣೆಗಳು ಸಕಾರಾತ್ಮಕವಾಗಿರುತ್ತವೆ. ಕೆಲಸವನ್ನು ಬದಲಾಯಿಸಲು ಬಯಸಿದರೆ, ಇದು ಸರಿಯಾದ ಸಮಯ. ನಿಮ್ಮ ಪ್ರಸ್ತುತ ವ್ಯವಹಾರವನ್ನು ಬಿಟ್ಟು ಇನ್ನೊಂದನ್ನು ಶುರು ಮಾಡಬೇಕು ಎಂದಿದ್ದರೆ ಅದಕ್ಕೂ ಸರಿಯಾದ ಸಮಯ. ಆಧ್ಯಾತ್ಮಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಶಕ್ತಿಯನ್ನು ನೀಡುತ್ತದೆ.

ಧನು ರಾಶಿ (Sagitarius): ಈ ರಾಶಿಯ ಅಧಿಪತಿ ಗುರು. ಆದ್ದರಿಂದ, ಗುರುವಿನ ಸಂಚಾರವು ಈ ರಾಶಿಗೆ ಉತ್ತಮ ಅವಕಾಶಗಳನ್ನು ತರುತ್ತದೆ. ಪ್ರಯಾಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ದೇವಾಲಯಗಳಿಗೆ ಭೇಟಿ ನೀಡುವುದು ಪ್ರಯೋಜನಕಾರಿಯಾಗಿರುವುದು. ನಿಮ್ಮ ಗುರಿಗಳನ್ನು ಸಾಧಿಸಲು ಸರಿಯಾದ ಸಮಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಮಕರ ರಾಶಿ (Capricorn): ವೃತ್ತಿ ಮತ್ತು ಗುರಿಗಳ ಬಗ್ಗೆ ಆಳವಾಗಿ ಯೋಚಿಸುವ ಸಮಯ ಇದು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಂತೆ ತೋರುತ್ತಿದ್ದ̧ರೂ, ಪರದೆಯ ಹಿಂದೆ ಕೆಲವು ಪಿತೂರಿಗಳು ನಿಮ್ಮ ವಿರುದ್ಧ ಕೆಲಸ ಮಾಡುತ್ತಿವೆ. ನೀವು ಜಾಗರೂಕರಾಗಿರಬೇಕು. ಸಂದರ್ಭಗಳು ನಿಮ್ಮ ಪರವಾಗಿದ್ದರೂ ನಿರ್ಧಾರಗಳು ನಿಮಗೆ ಸಮಸ್ಯೆಯಾಗಬಹುದು. ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಯಾರು ಏನೇ ಹೇಳಿದರೂ ತಕ್ಷಣ ಒಪ್ಪಬೇಡಿ ಅಥವಾ ಇಲ್ಲ ಎಂದು ಹೇಳಬೇಡಿ.

ಕುಂಭ ರಾಶಿ (Aquarius): ಈಗ ನಿಮಗೆ ಸಕಾಲ. ನಿಮ್ಮ ನಾಯಕತ್ವದ ಗುಣಗಳನ್ನು ತೋರಿಸಲು ಇದು ಸರಿಯಾದ ಸಮಯ. ಯಾವುದೇ ದೊಡ್ಡ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಬಹುದು. ಗುರುವಿನ ಸಂಚಾರವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಎಲ್ಲವೂ ಚೆನ್ನಾಗಿದ್ದರೂ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಖರ್ಚುಗಳು ಹೆಚ್ಚಾಗದಂತೆ ನಿಯಂತ್ರಿಸಿ. ಆಧ್ಯಾತ್ಮಿಕ ಅನುಭವಗಳು ಇರಬಹುದು.

ಮೀನ ರಾಶಿ (Pisces): ಮನಸ್ಸಿನಲ್ಲಿ ಆಲೋಚನೆಗಳ ಹರಿವು ಮುಂದುವರಿಯುತ್ತದೆ. ನೀವು ಸಂತೋಷವಾಗಿರುತ್ತೀರಿ. ಭಾವನೆಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಬೆಳವಣಿಗೆ ಹೆಚ್ಚಾಗುತ್ತದೆ. ಈ ಹುಣ್ಣಿಮೆ ನಿಮ್ಮನ್ನು ಶಕ್ತಿಶಾಲಿಯನ್ನಾಗಿಸುತ್ತದೆ. ಸಂಬಂಧಗಳು ಗಟ್ಟಿಯಾಗಿರುತ್ತವೆ. ಸೃಜನಶೀಲ ಕೆಲಸಗಳಿಂದ ಲಾಭವಾಗುವುದು. ಗುರುವಿನ ಪ್ರಭಾವವು ನಿಮಗೆ ಶುಭವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+