Chanakya Niti: ಎಷ್ಟೇ ಹಸಿವಾದರೂ ಇವರ ಮನೆಯಲ್ಲಿ ಊಟ ಮಾಡಬಾರದು!ಬದುಕು ಹಾಳಾಗುವ ಬಗ್ಗೆ ಚಾಣಕ್ಯನ ಎಚ್ಚರಿಕೆ!
ಆಚಾರ್ಯ ಚಾಣಕ್ಯರು ತಮ್ಮ 'ಚಾಣಕ್ಯ ನೀತಿ'ಯಲ್ಲಿ ಜೀವನಕ್ಕೆ ಅಗತ್ಯವಾದ ಅನೇಕ ಅಮೂಲ್ಯ ವಿಷಯಗಳನ್ನು ತಿಳಿಸಿದ್ದಾರೆ. ಅವರ ತತ್ವಗಳು ಕೇವಲ ರಾಜಕೀಯ ಅಥವಾ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ನಮ್ಮ ದೈನಂದಿನ ಜೀವನಕ್ಕೂ ಅನ್ವಯಿಸುತ್ತವೆ. ಅನೇಕ ಜನರು ಅವರ ಬೋಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಈ ನೀತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತಾ ಎಂದು ಹೇಳಲಾಗುತ್ತದೆ.
ಹಸಿವಾದಾಗ ನಾವು ಆಹಾರ ಸೇವಿಸುತ್ತೇವೆ. ಎಷ್ಟೋ ಬಾರಿ ನಮ್ಮ ಸ್ನೇಹಿತರು, ಪರಿಚಯದವರು, ನೆಂಟರಿಷ್ಟರ ಮನೆಯಲ್ಲಿ ಊಟಕ್ಕೆ ಹೋಗುತ್ತೇವೆ. ಅಥವಾ ಹೊಟೇಲ್ನಲ್ಲಿ ಅವರು ಕೊಡಿಸುವ ಆಹಾರವನ್ನು ತಿನ್ನುತ್ತೇವೆ. ಆದರೆ ಯಾರೋ ಆಹ್ವಾನಿಸಿದರು ಎಂದ ಮಾತ್ರಕ್ಕೆ ಅವರ ಮನೆಗೆ ಅಥವಾ ಅವರ ಜೊತೆಗೆ ಹೋಗಿ ಆಹಾರ ತಿನ್ನುವುದು ಸರಿಯಾದ ಕ್ರಮ ಅಲ್ಲ. ಆಹಾರ ಸೇವಿಸುವಾಗ ನಾವು ತಿನ್ನುವ ಆಹಾರದ ಮೂಲವೂ ಬಹಳ ಮುಖ್ಯವಾಗಿದೆ.

ಚಾಣಕ್ಯರ ಪ್ರಕಾರ, ನಾವು ತಿನ್ನುವ ಆಹಾರವು ನಮ್ಮ ದೇಹವನ್ನು ಮಾತ್ರವಲ್ಲದೆ ನಮ್ಮ ಮನಸ್ಸು, ಆಲೋಚನೆಗಳು ಮತ್ತು ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ.
ನಾವು ಯಾರ ಮನೆಯಲ್ಲಿ ಊಟ ಮಾಡಬೇಕು? ಯಾರ ಮನೆಗಳಲ್ಲಿ ಊಟ ಮಾಡಬಾರದು? ಎನ್ನುವುದನ್ನು ಇಲ್ಲಿ ಚಾಣಾಕ್ಯರು ಸ್ಪಷ್ಟವಾಗಿ ಹೇಳಿದ್ದಾರೆ. ಐದು ರೀತಿಯ ಜನರ ಬಗ್ಗೆ ಎಚ್ಚರಿಸಿದ್ದಾರೆ. ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ ಯಾರೊಂದಿಗೂ ಊಟ ಮಾಡಬಾರದು ಎನ್ನುವುದನ್ನು ಒತ್ತಿ ಹೇಳಿದ್ದಾರೆ.
ಅಂಟುವುದು ಪಾಪ ಕರ್ಮದ ಫಲ:
ಕಳ್ಳತನ, ವಂಚನೆ ಅಥವಾ ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಗಳಿಸಿದ ಹಣದಿಂದ ಖರೀದಿಸಿದ ಆಹಾರವನ್ನು ಎಂದಿಗೂ ತಿನ್ನಬಾರದು. ಅಂಥಹ ಆಹಾರವನ್ನು ತಿನ್ನುವುದರಿಂದ ಆ ಪಾಪ ಕರ್ಮಗಳ ಫಲ ನಮಗೂ ಅಂಟಿಕೊಳ್ಳುತ್ತದೆ. ಅದು ನಮ್ಮ ಮಾನಸಿಕ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ಅಂತಿಮವಾಗಿ ಜೀವನದಲ್ಲಿ ನಿರಾಶೆಗೆ ಕಾರಣವಾಗುತ್ತದೆ.
ಆಚರಿಸಿಕೊಳ್ಳುವುದು ಅಪಖ್ಯಾತಿ:
ಸಮಾಜದಲ್ಲಿ ಕೆಟ್ಟ ಹೆಸರು ಹೊಂದಿರುವ ಅಥವಾ ತಪ್ಪು ಕೆಲಸಗಳಲ್ಲಿ ಭಾಗಿಯಾಗಿರುವ ಜನರ ಮನೆಯಲ್ಲಿ ಊಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವರು ಬೇಯಿಸಿದ ಆಹಾರವನ್ನು ಸ್ವೀಕರಿಸುವುದರಿಂದ ನಮ್ಮ ಆಲೋಚನೆಗಳು ಕೂಡಾ ಕಲುಷಿತವಾಗುತ್ತದೆ. ಇದಲ್ಲದೆ, ಅಂತಹ ಜನರ ಸ್ನೇಹ ಅಥವಾ ಆತಿಥ್ಯವನ್ನು ಸ್ವೀಕರಿಸುವುದು ಸಮಾಜದಲ್ಲಿ ಅಪಖ್ಯಾತಿಯನ್ನು ತರುತ್ತದೆ.
ಆಹಾರ ಬಡಿಸುವ ಕ್ರಮವೂ ಮುಖ್ಯ:
ಆಹಾರವನ್ನು ಯಾವಾಗಲೂ ಪ್ರೀತಿ, ಭಕ್ತಿ ಮತ್ತು ಗೌರವದಿಂದ ಬಡಿಸಬೇಕು. ಆದರೆ ಅಹಂಕಾರ, ಅಸಹಿಷ್ಣುತೆ ಅಥವಾ ಕೋಪದಿಂದ ಬಡಿಸುವ ಆಹಾರವು ವಿಷದಂತೆ ಎಂದು ಚಾಣಾಕ್ಯ ಹೇಳುತ್ತಾರೆ.ಅಂತಹ ಜನರ ಮನೆಗಳಲ್ಲಿ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹವನ್ನು ನಕಾರಾತ್ಮಕ ಶಕ್ತಿ ಪ್ರವೇಶಿಸಬಹುದು.
ಕಾಡುವುದು ಆರೋಗ್ಯ ಸಮಸ್ಯೆ:
ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ಜನರ ಮನೆಗಳಲ್ಲಿ ಊಟ ಮಾಡುವುದನ್ನು ಅಥವಾ ಅವರು ಮುಟ್ಟಿದ ಆಹಾರವನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಇದು ಕೇವಲ ಧಾರ್ಮಿಕ ನಂಬಿಕೆಯ ವಿಷಯವಲ್ಲ, ವೈಜ್ಞಾನಿಕ ಮತ್ತು ಆರೋಗ್ಯ ದೃಷ್ಟಿಕೋನವೂ ಆಗಿದೆ. ಹಾಗೆ ಮಾಡುವುದರಿಂದ ಜೀವಕ್ಕೆ ಅಪಾಯಕಾರಿ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ನಾವು ಒಳಗಾಗಬಹುದು.
ಬಡವರ ಶಾಪ ಒಳ್ಳೆಯದಲ್ಲ:
ಇತರರ ವಿರುದ್ಧ ಹಿಂಸಾಚಾರ ಎಸಗಿದ, ಮುಗ್ಧರಿಗೆ ಕಿರುಕುಳ ನೀಡಿದ, ಅಥವಾ ಬಡವರನ್ನು ತುಳಿದು ಅವರ ಕಣ್ಣಲ್ಲಿ ನೀರು ತರಿಸಿದ ಶ್ರೀಮಂತರ ಮನೆಗಳಿಂದ ಆಹಾರವನ್ನು ಸ್ವೀಕರಿಸಬಾರದು. ಇತರರ ಶಾಪ ಮತ್ತು ದ್ವೇಷಪೂರಿತ ಮಾತುಗಳಿಂದ ಗಳಿಸಿದ ಹಣದಿಂದ ಗಳಿಸಿದ ಆಹಾರವು ಯಾರಿಗೂ ಎಂದಿಗೂ ಒಳ್ಳೆಯ ಫಲಿತಾಂಶಗಳನ್ನು ತರುವುದಿಲ್ಲ.
ನಾವು ತಿನ್ನುವ ಆಹಾರವು ನಮ್ಮ ಹಸಿವನ್ನು ನೀಗಿಸುವುದಲ್ಲದೆ, ನಮ್ಮ ವ್ಯಕ್ತಿತ್ವದ ಮೇಲೆಯೂ ಪ್ರಭಾವ ಬೀರಬೇಕು. ಆದ್ದರಿಂದ, ಪ್ರಾಮಾಣಿಕತೆ ಮತ್ತು ಬದ್ಧತೆಯ ಮೂಲಕ ಸಂಪತ್ತನ್ನು ಗಳಿಸಿದವರ ಮನೆಗಳಿಂದ ಆಹಾರವನ್ನು ಸ್ವೀಕರಿಸುವುದು ಅತ್ಯಗತ್ಯ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications