Bellulli Kabab: ಮನೆಯಲ್ಲಿಯೇ ಸುಲಭವಾಗಿ ಮಾಡಿ ಸಕತ್ ಟೆಸ್ಟಿ, ಟ್ರೆಂಡಿ 'ಬೆಳ್ಳುಳ್ಳಿ ಕಬಾಬ್'
ಈಗ ಎಲ್ಲಿ ನೋಡಿದರೂ ಕೂಡ 'ಬೆಳ್ಳುಳ್ಳಿ ಕಬಾಬ್'ದೆ ಸುದ್ದಿ. ಕಬಾಬ್ನಲ್ಲಿ ಸಾಕಷ್ಟು ವಿಧಗಳಿವೆ. ವೆಜ್, ನಾನ್ ವೆಜ್ ಸೇರಿ ಹಲವು ರೀತಿಯ ಕಬಾಬ್ಗಳಿದ್ದು, ಇದಕ್ಕೆ ಸದ್ಯ ಬೆಳ್ಳುಳ್ಳಿ ಕಬಾಬ್ ಹೊಸ ಸೇರ್ಪಡೆಯಾಗಿದೆ. ಬಾಣಸಿಗ ಚಂದ್ರು ಅವರ ವಿಡಿಯೋಗಳು ಸಕತ್ ಟ್ರೆಂಡ್ ಸೃಷ್ಟಿ ಮಾಡಿದ ಹಾಗೆಯೇ ಅವರ 'ಬೆಳ್ಳುಳ್ಳಿ ಕಬಾಬ್' ಕೂಡ ಸಕತ್ ಟ್ರೆಂಡಿಂಗ್ನಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಹಎಲ್ಲಿ ನೋಡಿದರೂ ಚಂದ್ರು ಬೆಳ್ಳುಳ್ಳಿ ಕಬಾಬ್ ವಿಡಿಯೋ ಕಾಣಿಸುತ್ತಿದೆ. ತುಂಬಾ ಸರಳವಾಗಿ ಹಲವು ರೆಸಿಪಿಗಳನ್ನು ಇವರು ಹೇಳಿಕೊಡುತ್ತಾರೆ. ಅದರಲ್ಲಿ ಬೆಳ್ಳುಳ್ಳಿ ಕಬಾಬ್ ಕೂಡ ಒಂದು. ಹಲವು ಮಂದಿ ಈ 'ಬೆಳ್ಳುಳ್ಳಿ ಕಬಾಬ್' ಅನ್ನು ಟ್ರೈ ಮಾಡುತ್ತಿದ್ದು, ನೀವು ಒಮ್ಮೆ ಟ್ರೈ ಮಾಡಿ. ಅದರ ಸುಲಭ ವಿಧಾನ ಇಲ್ಲಿದೆ.

ಚಂದ್ರು ಸ್ಟೈಲ್ ಬೆಳ್ಳುಳ್ಳಿ ಕಬಾಬ್ ಮಾಡಲು ಬೇಕಾದ ಪದಾರ್ಥಗಳು
* ಒಂದೂವರೆ ಕೆಜಿ ಚಿಕನ್
*ನಾಲ್ಕು ಬೆಳ್ಳುಳ್ಳಿ
* ಹನ್ನೇರಡು ಹಸಿ ಮೆಣಸಿನ ಕಾಯಿ
* ಸ್ವಲ್ಪ ಶುಂಠಿ
* ಕರಿಬೇವಿನ ಸೋಪ್ಪು
* ನಾಲ್ಕು ಲವಂಗ, ಒಂದು ತುಂಡು ಚಕ್ಕೆ
* ನಾಲ್ಕು ಸ್ಪೂನ್ ಜೋಳದ ಹಿಟ್ಟು
* ಒಂದು ಅಥವಾ ಎರಡು ಸ್ಪೂನ್ ಮೈದಾ
* ಒಂದು ಸ್ಪೂನ್ ಅಕ್ಕಿ ಹಿಟ್ಟು
*ಒಂದು ಸ್ಪೂನ್ ಕಡಲೇಹಿಟ್ಟು
* ಸ್ವಲ್ಪ ಅರಿಶಿಣ ಪುಡಿ
* ಒಂದು ಮೊಟ್ಟೆ
* ಒಂದು ಸಣ್ಣ ಬಟ್ಟಲು ಮೊಸರು
* ಸ್ವಲ್ಪ ಕಸ್ತೂರಿ ಮೇಥಿ
* ಕಬಾಬ್ ಕರಿಯಲು ಎಣ್ಣೆ
ಬೆಳ್ಳುಳ್ಳಿ ಕಬಾಬ್ ಮಾಡಲು ಮೊದಲು ಒಂದು ಪೇಸ್ಟ್ ತಯಾರಿಸಬೇಕು. ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕರಿಬೇವು, ಹಸಿಮೆಣಸಿನ ಕಾಯಿಯನ್ನು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಕೊಂಡು ರೆಡಿ ಮಾಡಿಕೊಳ್ಳಬೇಕು.
ಬೆಳ್ಳುಳ್ಳಿ ಕಬಾಬ್ ಮಾಡುವ ವಿಧಾನ
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಜೋಳದ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟು, ಕಡಲೇಹಿಟ್ಟು, ಕಸ್ತೂರಿ ಮೇಥಿ, ಅರಿಶಿಣ, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಸೇರಿಸಬೇಕು. ಚೆನ್ನಾಗಿ ಮಿಕ್ಸ್ ಮಾಡಿದ ಮಿಶ್ರಣಕ್ಕೆ ಒಂದು ಮೊಟ್ಟೆ ಸೇರಿಸಬೇಕು. ನೀರು ಬಳಸಬಾರದು.

ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್ ಹಾಕಿ ಚೆನ್ನಾಗಿ ಕಲಸಬೇಕು. ಬಳಿಕ ಇದನ್ನು ಅರ್ಧ ಗಂಟೆ ಮ್ಯಾರಿನೇಟ್ ಮಾಡಬೇಕು. ಮ್ಯಾರಿನೇಟ್ ಆದ ಚಿಕನ್ ಅನ್ನು ಕಾದ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಒಮ್ಮೆ ಫ್ರೈ ಮಾಡಿದ ಬಳಿಕ ತೆಗೆದು ಅದು ತನ್ಣಗಾದ ಬಳಿಕ ಮತ್ತೊಮ್ಮೆ ಎನ್ಣೆಯಲ್ಲಿ ಕರಿಯಬೇಕು. ಇದರ ಮೇಲೆ ಕೊಂಚ ಕರಿಬೇವು ಕೂಡ ಹಾಕಿಕೊಳ್ಳಬೇಕು. ಚೆನ್ನಾಗಿ ಕರಿದ ಮೇಲೆ ಎಣ್ಣೆಯಿಂದ ಹೊರ ತೆಗೆದು ಬಿಸಿ ಬಿಸಿಯಾದ ಬೆಳ್ಳುಳ್ಳಿ ಕಬಾಬ್ ಸವಿಯಬಹುದು.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications