ಕೊರೊನಾ ನಂತರ ಜೀವನ; ವೆಂಕಯ್ಯ ನಾಯ್ಡು ಕೊಟ್ರು 12 ಟಿಪ್ಸ್
ನವದೆಹಲಿ, ಮೇ 18: ಕೊರೊನಾ ಬಂದ ಮೇಲೆ ಮನುಷ್ಯನ ಸಹಜ ಜೀವನವೇ ಬದಲಾಗುತ್ತಿದೆ. ಯಾರೂ ಊಹಿಸದ ರೀತಿ ಬದಲಾವಣೆಗಳನ್ನುಂಟು ಮಾಡುತ್ತಿದೆ ಕೊರೊನಾ ಎಂಬ ಮಾಯಾ ಜೀವಿ.
ಸಾಕಷ್ಟು ಬುದ್ದಿಜೀವಿಗಳು ಈಗಾಗಲೇ ಕೊರೊನಾ ದಿಕ್ಕುತಪ್ಪಿ ಹೆಜ್ಜೆ ಹಾಕುತ್ತಿದ್ದ ಮನುಷ್ಯನಿಗೆ ಒಂದು ಪಾಠ ಕೊರೊನಾ ಎಂದು ಹೇಳಿದ್ದಾರೆ. ಮನುಷ್ಯ ಮುಂದೆ ಹೇಗೆ ಈ ಭೂಮಿ ಮೇಲೆ ಬದುಕಬೇಕು ಎಂಬುದನ್ನು ಹೇಳಿ ಕೊಡುತ್ತಿದ್ದಾರೆ.
Life After Corona: ಸ್ವಾರ್ಥ ಬದುಕಿನ ಚಿಂತನೆ ಬದಲಿಸಿ
ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಕೂಡ ದೇಶವಾಸಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. A New Normal for Life After Corona ಎಂಬ ಶಿರ್ಷಿಕೆಯಲ್ಲಿ ಫೊಸ್ಟ್ ಮಾಡಿರುವ ಅವರು ಕೊರೊನಾ ನಂತರ ಹೇಗೆ ಜೀವಿಸಬೇಕು ಎಂಬುದರ ಬಗ್ಗೆ 12 ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಜೀವನವು ಅಮೂಲ್ಯವಾದುದು
ಜೀವನವು ಅಮೂಲ್ಯವಾದುದು, ಮನುಷ್ಯ ಪ್ರಕೃತಿ ಮತ್ತು ಸಹ ಜೀವಿಗಳೊಂದಿಗೆ ಅರ್ಥಪೂರ್ಣವಾಗಿ ಬದುಕಬೇಕು, ಯಾವುದೇ ಒಂದು ಘಟನೆ ಸಂಗತಿ ಒಬ್ಬ ವ್ಯಕ್ತಿಯ ಮೇಲೆ ಎಲ್ಲಿಯಾದರೂ ಪರಿಣಾಮ ಬೀರಿದರೆ, ಅದು ಎಲ್ಲೆಡೆ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಬೇಕು ಅದು ರೋಗ ಅಥವಾ ಆರ್ಥಿಕತೆಯಾಗಿರಲಿ. ನಿಮ್ಮ ಜೀವನವು ಇತರರ ಜೀವನವನ್ನು ಅವಲಂಬಿಸಿರುತ್ತದೆ ಮತ್ತು ಜೀವನವು ಒಬ್ಬರಿಂದ ಮತ್ತೊಬ್ಬರಿಗೆ ಬೆಸುಗೆ ಹೊಂದಿರುತ್ತದೆ ಎಂಬುದನ್ನು ಅರಿತುಕೊಳ್ಳಿ
ಪರಿಣಾಮವನ್ನು ವೈಚಾರಿಕವಾಗಿ ವಿಶ್ಲೇಷಿಸಿ
ಈ ಕೋವಿಡ್ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿ ಕ್ರಿಯೆಯನ್ನು ಕೈಗೊಳ್ಳುವ ಮೊದಲು ವೈರಸ್ ಹರಡುವಿಕೆಯ ಮೇಲಿನ ಪರಿಣಾಮವನ್ನು ವೈಚಾರಿಕವಾಗಿ ವಿಶ್ಲೇಷಿಸಿ, ಪ್ರತಿ ಸವಾಲಿಗೆ ಪರಿಹಾರವಿದೆ ಮತ್ತು ಅದು ಬಂದ ತಕ್ಷಣ ಜಾಗತಿಕ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಳ್ಳಿ. ಅನಿಶ್ಚಿತತೆಗೆ ಹಠಾತ್ತಾಗಿ ಪ್ರತಿಕ್ರಿಯಿಸಬೇಡಿ ಮತ್ತು ವೈಚಾರಿಕತೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಿ.
Life after corona: ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ!
ಆತ್ಮವಿಶ್ವಾಸದಿಂದ ಬರುವ ಪರಿಸ್ಥಿತಿಗೆ ಹೊಂದಿಕೊಳ್ಳಿ
ಭಯಭೀತರಾಗುವ ಬದಲು ಆತ್ಮವಿಶ್ವಾಸದಿಂದ ಬರುವ ಪರಿಸ್ಥಿತಿಗೆ ಹೊಂದಿಕೊಳ್ಳಿ, ಲಾಕ್ಡೌನ್ ನಂತರವೂ ಅದರ ನಿಯಮಗಳನ್ನು ಪಾಲಿಸಿ, ಮುಖವಾಡಗಳನ್ನು ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ನೈರ್ಮಲ್ಯವನ್ನು ಪಾಲಿಸುವುದನ್ನು ಮಾಡಿ, ಧನಾತ್ಮಕವಾಗಿ ಯೋಚಿಸುವುದು ಹಾಗೂ ಯೋಗ ಮತ್ತು ಧ್ಯಾನದೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಮಾನಸಿಕ ಕಳಂಕವನ್ನು ತಡೆಗಟ್ಟುವುದು
ವೈಜ್ಞಾನಿಕ ಮಾಹಿತಿಯನ್ನು ಪ್ರಸಾರ ಮಾಡಬೇಕು
ನಾಗರಿಕರನ್ನು ವೈರಸ್ನ ವಾಹಕಗಳೆಂದು ಲೇಬಲ್ ಮಾಡುವವರ ಕುರಿತು ಪೂರ್ವಾಗ್ರಹಗಳನ್ನು ಪರಿಶೀಲಿಸಿ. ಎಲ್ಲಾ ರೀತಿಯ ಮಾಧ್ಯಮಗಳು ರೋಗವನ್ನು ದುರಂತವೆಂದು ಪ್ರಸ್ತುತಪಡಿಸುವ ಬದಲು ಸರಿಯಾದ ಮತ್ತು ವೈಜ್ಞಾನಿಕ ಮಾಹಿತಿಯನ್ನು ಪ್ರಸಾರ ಮಾಡಬೇಕು. ಸಾಮೂಹಿಕ ಅಸಹಾಯಕತೆಯನ್ನು ಅರ್ಥವನ್ನು ಪರಸ್ಪರ ಸಂಬಂಧ ಹೊಂದಿರುವವರು ಅರ್ಥ ಮಾಡಿಕೊಳ್ಳಬೇಕು.