ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಕಾರ್ಯಕರ್ತರಾಗಿ; ಅರ್ಹತೆ, ಗೌರವಧನ

|
Google Oneindia Kannada News

ಬೆಂಗಳೂರು, ಜುಲೈ 17 : ಕರ್ನಾಟಕದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಶುಕ್ರವಾರ ಒಂದೇ ದಿನ 3,693 ಪ್ರಕರಣ ರಾಜ್ಯದಲ್ಲಿ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ಸಮಯದಲ್ಲಿ ಜನರು ಸಹ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡಬಹುದು ಎಂದು ಆಹ್ವಾನ ನೀಡಿದೆ. ನೀವು ಸಹ ಕೋವಿಡ್-19 ವಿರುದ್ಧದ ಸಮರದಲ್ಲಿ ಭಾಗಿಯಾಗಲು ಇಚ್ಚಿಸಿದರೆ ಹೆಸರು ನೋಂದಾಯಿಸಬಹುದು.

ಕಲಬುರಗಿ; ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಕಲಬುರಗಿ; ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಸರ್ಕಾರ ಸ್ಥಾಪನೆ ಮಾಡಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಸ್ವಯಂ ಸೇವಕರು ಕನಿಷ್ಠ 10 ದಿನಗಳ ಕಾಲ ಸೇವೆ ಸಲ್ಲಿಸಬಹುದು. ವೈದ್ಯರು, ದಾದಿಯರು, ಪರಿಚಾರಕರಾಗಿ ನೀವು ಸೇವೆ ಸಲ್ಲಿಸಬಹುದು ಎಂದು ಇಲಾಖೆ ಟ್ವೀಟ್‌ನಲ್ಲಿ ಹೇಳಿದೆ.

ಶಿವಮೊಗ್ಗ; ಅರೆ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ ಶಿವಮೊಗ್ಗ; ಅರೆ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ

People Can Join To Battle Against COVID 19

ನೀವು ಸ್ವಯಂ ಸೇವಕರಾಗಿ ಕೆಲಸ ಮಾಡಿದರೂ ಸಹ ಗೌರವ ಧನವನ್ನು ನೀಡಲಾಗುತ್ತದೆ. ವೈದ್ಯರಿಗೆ ಮಾಸಿಕ 45,000, ದಾದಿಯರಿಗೆ 30,000 ಮತ್ತು ಪರಿಚಾರಕರಿಗೆ 15,000 ರೂ. ನೀಡಲಾಗುತ್ತದೆ.

ಬೆಂಗಳೂರು; ಯಲಹಂಕ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ ಬೆಂಗಳೂರು; ಯಲಹಂಕ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ

ಸರ್ಕಾರದಿಂದ ಕೋವಿಡ್ ಕರ್ತವ್ಯಕ್ಕಾಗಿ ನೇಮಕಗೊಂಡ ಸ್ವಯಂ ಸೇವಕರು ವಿಮಾ ಸೌಲಭ್ಯಕ್ಕೆ ಸಹ ಒಳಪಡಲಿದ್ದಾರೆ ಎಂದು ತಿಳಿಸಲಾಗಿದೆ.

ಆಸಕ್ತಿ ಇದ್ದವರು ಟ್ವೀಟ್‌ನಲ್ಲಿರುವ ವಿಳಾಸಕ್ಕೆ ವಿವರಗಳನ್ನು ಕಳಿಸಬಹುದಾಗಿದೆ.

English summary
Karnataka health and family welfare department invited the people to work in the battle against COVID -19. Know the qualification and roles to join.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X