ಬೆಂಗಳೂರು ಜಿ. ಪಂಚಾಯಿತಿ ನೇಮಕಾತಿ; ಸೆ. 11ರ ತನಕ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 01: ಬೆಂಗಳೂರು ಜಿಲ್ಲಾ ಪಂಚಾಯಿತಿ 4 ಹುದ್ದೆಗಳ ಭರ್ತಿಗೆ ಅಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸೆಪ್ಟೆಂಬರ್ 11ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
Recommended Video
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಯುಷ್ಮಾನ್ ಭಾರತ್ ಯೊಜನೆಯಡಿ ಅಭಿವೃದ್ಧಿಗೊಳಿಸಿರುವ 'ಆಯುಷ್ ಕ್ಷೇಮ ಕೇಂದ್ರ'ಗಳಿಗೆ ಯೋಗ ತರಬೇತುದಾರರು ಬೇಕಾಗಿದ್ದಾರೆ. ಒಟ್ಟು 4 ಕೇಂದ್ರಗಳಿಗೆ ನಾಲ್ಕು ತರಬೇತುದಾರರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಬನ್ನೇರುಘಟ್ಟ, ಬ್ಯಾತ, ಸೋಮನಹಳ್ಳಿ ಮತ್ತು ಗಂಟಗಾನಹಳ್ಳಿ ಕೇಂದ್ರಗಳಿಗೆ ತರಬೇತುದಾರರನ್ನು ನೇಮಕ ಮಾಡಲಾಗುತ್ತಿದೆ. ಪ್ರತಿ ಗಂಟೆಗೆ 250 ರೂ. ನಂತೆ, ಗರಿಷ್ಠ 32 ಗಂಟೆಗಳ ಅವಧಿಯ ಸೇವೆಗೆ 8000 ರೂ. ವೇತನ ನೀಡಲಾಗುತ್ತದೆ.

ಈ ಹುದ್ದೆ ಸಂಪೂರ್ಣ ತಾತ್ಕಾಲಿಕವಾಗಿದ್ದು 11 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಈ ಹುದ್ದೆಗಳನ್ನು ಖಾಯಂ ಎಂದು ಪರಿಗಣಿಸುವುದಿಲ್ಲ.
ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಡಿ. ಎ. ಒ/ ಸಂಬಂಧಿಸಿದ ಕ್ಷೇಮ ಕೇಂದ್ರದ ವೈದ್ಯರು ನಿಗದಿಪಡಿಸಿದ ಸಮಯದಲ್ಲಿ ಜನರಿಗೆ ಯೋಗ ತರಬೇತಿ ನೀಡಬೇಕು.
ಅರ್ಜಿಗಳನ್ನು ಜಿಲ್ಲಾ ಆಯುಷ್ ಕಚೇರಿ ಬೆಂಗಳೂರು ಅಥವ ಸಂಬಂಧಿಸಿದ ಕೇಂದ್ರದಿಂದ 4/9/2020ರ ತನಕ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಲು 11/9/2020ರ ಸಂಜೆ 5 ಗಂಟೆ ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದು. ವೆಬ್ ಸೈಟ್ ವಿಳಾಸ











Click it and Unblock the Notifications