ಕಲಬುರಗಿ: ಗ್ರಾಮ್ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ
ಕಲಬುರಗಿ, ಮೇ 1: ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು ಒನ್ ಮಾದರಿಯಲ್ಲಿ ಫ್ರಾಂಚೈಸಿ ಆಧಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ
ಗ್ರಾಮ ಒನ್ ಯೋಜನೆಯನ್ನು ಸರ್ಕಾರ ಈಗಾಗಲೇ ಲೋಕಾರ್ಪಣೆ ಮಾಡಿದೆ. ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆ ಪಡೆಯಲು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ(ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 423 ಗ್ರಾಮ ಒನ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಕೇಂದ್ರ ತೆರೆಯಲು ಅರ್ಹರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ 'ಗ್ರಾಮ ಒನ್' ಸೌಲಭ್ಯ ವಿಸ್ತರಣೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಅನುಗುಣವಾಗಿ ಒಂದು ಅಥವಾ ಎರಡು ಕೇಂದ್ರ ತೆರೆಯಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದ ಕೆಲವು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಯೋಜನೆ ಇದೀಗ ರಾಜ್ಯದೆಲ್ಲಡೆ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಆಸಕ್ತ ಪ್ರಾಂಚೈಸೀಸ್ಗಳು ಏನು ಮಾಡಬಹುದು
ಈ ಕೇಂದ್ರವು ವಾರದ 7 ದಿನಗಳು ಬೆಳಗ್ಗೆ 8 ರಿಂದ ಸಾಯಂಕಾಲ 8ರ ವರೆಗೆ ಕಾರ್ಯನಿರ್ವಹಿಸಲಿವೆ. ಗ್ರಾಮ ಒನ್ ಮೂಲಕ ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್ ಹೀಗೆ ಒಟ್ಟು 750 ಸೇವೆಗಳನ್ನು ಗ್ರಾಮೀಣ ಜನರು ಪಡೆಯಬಹುದಾಗಿದೆ. ಇದಲ್ಲದೆ ಕೇಂದ್ರದ ಮೂಲಕ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸುವ ಉದ್ದೇಶವು ಹೊಂದಲಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು https://karnatakaone.gov.in ಅಥವಾ sevasindhu.karnataka.gov.in ರಲ್ಲಿ ಆನ್ಲೈನ್ ಮೂಲಕ ಮೇ 5ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ತಾಲೂಕಾವಾರು
ಮಂಜೂರಾದ
ಗ್ರಾಮ
ಒನ್
ಕೇಂದ್ರಗಳ
ಸಂಖ್ಯೆ
ಹೀಗಿದೆ:
ಕಲಬುರಗಿ-47,
ಆಳಂದ-75,
ಅಫಜಲಪೂರ-53,
ಜೇವರ್ಗಿ-38,
ಚಿತ್ತಾಪೂರ-42,
ಸೇಡಂ-38,
ಚಿಂಚೋಳಿ-45,
ಯಡ್ರಾಮಿ-24,
ಕಮಲಾಪೂರ-27,
ಶಹಾಬಾದ-9
ಹಾಗೂ
ಕಾಳಗಿ
-25
ಸೇರಿ
ಒಟ್ಟು
423
ಕೇಂದ್ರಗಳು.
ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 7829274377, 9743669741, 9686579224 ಅಥವಾ ಇಮೇಲ್ [email protected] ಅಥವಾ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರವಿಂದ ಬಾಡಗಿ-9379049999 ಅವರನ್ನು ಸಂಪರ್ಕಿಸಬಹುದಾಗಿದೆ.
ಗ್ರಾಮ
ಒನ್:
ಇದು
ಕರ್ನಾಟಕ
ಸರ್ಕಾರದ
ಮಹತ್ವಾಕಾಂಕ್ಷಿ
ಯೋಜನೆಯಾಗಿದ್ದು,
ಎಲ್ಲಾ
ಇಲಾಖೆಗಳ
ನಾಗರಿಕ
ಸೇವೆಗಳನ್ನು
ಗ್ರಾಮೀಣ
ನಾಗರಿಕರಿಗೆ
ಅವರ
ಗ್ರಾಮಗಳಲ್ಲಿಯೇ
ತಲುಪಿಸುವ
ಗುರಿಯನ್ನು
ಹೊಂದಿದೆ.
ಈ
ಯೋಜನೆಯನ್ನು
ನಾಗರಿಕ
ಕೇಂದ್ರಿತ
ಸೇವೆಗಳಾದ
ಜಿ2ಸಿ
ಸೇವೆಗಳು,
ಬ್ಯಾಂಕಿಂಗ್
ಸೇವೆಗಳು,
ಆರ್
ಟಿ
ಐ
ಪ್ರಶ್ನೆಗಳು
ಹಾಗೂ
ಇನ್ನಿತರೇ
ಸೇವೆಗಳನ್ನು
ಗ್ರಾಮ
ಮಟ್ಟದಲ್ಲಿ
ಎಲ್ಲಾ
ನಾಗರಿಕರಿಗೆ
ತಲುಪಿಸುವ
ಏಕ-ಬಿಂದು
ಸಹಾಯ
ಕೇಂದ್ರವಾಗಿರುವಂತೆ
ಯೋಜಿಸಲಾಗಿದೆ.
*
ಪ್ರತಿ
ಗ್ರಾಮಒನ್
ಕೇಂದ್ರವು
ಮೈಕ್ರೋ
ಬ್ಯಾಂಕಿಂಗ್
ಸಂಸ್ಥೆಯಾಗಿ
ಕಾರ್ಯನಿರ್ವಹಿಸಲು
ಅವಕಾಶ
ನೀಡುವ
ಮೂಲಕ
ಆರ್ಥಿಕ
ಸೇರ್ಪಡೆಯನ್ನು
ಸಾಧಿಸಲಾಗುತ್ತದೆ
*
ಸರ್ಕಾರದ
ಸೇವೆಗಳನ್ನು
ಪಡೆಯಲು
ನಾಗರಿಕರು
ಯಾರನ್ನೂ
ಅವಲಂಬಿಸಬೇಕಾಗಿಲ್ಲವಾದ್ದರಿಂದ
ಸ್ವಾವಲಂಬನಾ
ಮನೋಭಾವವನ್ನು
ಎತ್ತಿಹಿಡಿದಂತಾಗಿದೆ
*
ಸೇವೆಗಳ
ಸಮಯೋಚಿತ
ಮತ್ತು
ಗುಣಮಟ್ಟದ
ವಿತರಣೆಯ
ಮೂಲಕ
ಸಾಮಾಜಿಕ-ಆರ್ಥಿಕ
ಅಭಿವೃದ್ಧಿಯನ್ನು
ಸಾಧಿಸಲಾಗುತ್ತದೆ