ಆರ್ಥಿಕ ಹಿಂಜರಿತದ ಭಯದ ನಡುವೆ ದೇಶದಲ್ಲಿ ಉದ್ಯೋಗ ಬೇಡಿಕೆ ಸ್ಥಿರ
ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಹಣದುಬ್ಬರದ ಭಯದ ನಡುವೆ ಜುಲೈನಲ್ಲಿ ಉದ್ಯೋಗ ನೇಮಕಾತಿ ಬೆಳವಣಿಗೆಯು ಶೇಕಡಾ 1 ರಷ್ಟಿತ್ತು, ಡಿಜಿಟಲೀಕರಣ ಮತ್ತು ಬದಲಾಗುತ್ತಿರುವ ಗ್ರಾಹಕರ ಭಾವನೆಗಳಿಂದಾಗಿ ಹಲವಾರು ಕ್ಷೇತ್ರಗಳು ಸುಧಾರಣೆ ಕಂಡಿವೆ ಎಂದು ವರದಿಯೊಂದು ತಿಳಿಸಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ರಾಸಾಯನಿಕಗಳು, ಪ್ಲಾಸ್ಟಿಕ್, ರಬ್ಬರ್, ಬಣ್ಣಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕಚೇರಿ ಉಪಕರಣಗಳು, ಯಾಂತ್ರೀಕೃತಗೊಂಡಂತಹ ಉದ್ಯಮಗಳಲ್ಲಿ ಉದ್ಯೋಗಿಗಳ ನೇಮಕಾತಿ ಸ್ಥಿರವಾಗಿದೆ. ಆದರೆ ಟೆಲಿಕಾಂ ವಲಯವು ಬೆಳೆಯುತ್ತಿರುವ ಡಿಜಿಟಲೀಕರಣ ಮತ್ತು 5ಜಿ ಸೇವೆಗಳು ಆರಂಭವಾಗುತ್ತಿರುವ ಕಾರಣ ನೇಮಕಾತಿ ಪ್ರಮಾಣ ಏರುಗತಿಯಲ್ಲಿದೆ ಎಂದು ಮಾನ್ಸ್ಟರ್ ಎಂಪ್ಲಾಯ್ಮೆಂಟ್ ಇಂಡೆಕ್ಸ್ (MEI) ತಿಳಿಸಿದೆ.
ಮುಂದಿನ ತಿಂಗಳಲ್ಲಿ ಹಬ್ಬಗಳು ಬರುತ್ತಿರುವ ಕಾರಣ ಚಿಲ್ಲರೆ ವ್ಯಾಪಾರ ವಲಯದಲ್ಲೂ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅದು ತಿಳಿಸಿದೆ. ಮಾನ್ಸ್ಟರ್ ಉದ್ಯೋಗ ಸೂಚ್ಯಂಕವು ಮಾನ್ಸ್ಟರ್ ಇಂಡಿಯಾ ನಡೆಸಿದ ಆನ್ಲೈನ್ ಉದ್ಯೋಗ ಪೋಸ್ಟ್ ಚಟುವಟಿಕೆಯ ಸಮಗ್ರ ಮಾಸಿಕ ವಿಶ್ಲೇಷಣೆಯಾಗಿದೆ.

2ನೇ ಶ್ರೇಣಿ ನಗರಗಳ ನೇಮಕಾತಿಯಲ್ಲಿ ಕೊಯಮತ್ತೂರು ಮತ್ತು ಅಹಮದಾಬಾದ್ ಈಗ ಮುಂಚೂಣಿಯಲ್ಲಿವೆ ಎಂದು ವರದಿಯು ಬಹಿರಂಗಪಡಿಸಿದೆ. ಇದು ಹಲವು ವಿಭಾಗಗಳಲ್ಲಿ ಪ್ರತಿಭೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ.
ಚಿಲ್ಲರೆ ವಲಯದಲ್ಲಿ ಸುಧಾರಣೆ; ಪುಣೆಯು ಬಿಎಫ್ಎಸ್ಐ (BFSI) ಉದ್ಯಮದಲ್ಲಿ ಉದ್ಯೋಗಾವಕಾಶಗಳಲ್ಲಿ 66 ಪ್ರತಿಶತದಷ್ಟು ಇಳಿಕೆಯನ್ನು ಪ್ರಕಟಿಸಿದೆ, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಫಿನ್ಟೆಕ್ ಕೇಂದ್ರವಾಗಿ ತನ್ನ ಸ್ಥಾನವನ್ನು ದೃಢವಾಗಿ ಬಲಪಡಿಸಿದೆ. ಅನುಭವಿ ಉದ್ಯೋಗಿಗಳಿಗೆ, ಉನ್ನತ ಸ್ಥಾನಗಳ ನಿರ್ವಹಣೆಗೆ ಉದ್ಯೋಗಿಗಳ ಬೇಡಿಕೆಯಲ್ಲಿ ಶೇಕಡ 18 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
"ತಿಂಗಳ ಅನಿಶ್ಚಿತತೆಯ ನಂತರ, ಭಾರತೀಯ ಉದ್ಯೋಗ ಮಾರುಕಟ್ಟೆಯು ಜಾಗತಿಕ ಆರ್ಥಿಕ ಹಿಂಜರಿತದ ಭಯದ ನಡುವೆ ಜುಲೈನಲ್ಲಿ ತಿಂಗಳಿಗೆ ತಿಂಗಳಿಗೆ ಶೇಕಡ 1 ರಷ್ಟು ನೇಮಕಾತಿ ಬೇಡಿಕೆಯೊಂದಿಗೆ ಸ್ಥಿರವಾಗಿದೆ. ಮುಂಬರುವ ಆರ್ಥಿಕ ಹಿಂಜರಿತದ ಭಯದಲ್ಲಿ ಹೆಚ್ಚಿನ ದೇಶಗಳು ಉದ್ಯೋಗ ವಲಯದಲ್ಲಿ ಕುಸಿತ ಕಾಣುತ್ತಿರುವ ಸಮಯದಲ್ಲಿ ಇದು ಒಳ್ಳೆಯ ಸುದ್ದಿಯಾಗಿದೆ." ಎಂದು ಮಾನ್ಸ್ಟರ್.ಕಾಂ ಕಂಪನಿ ಸಿಇಒ ಶೇಖರ್ ಗರಿಸಾ ಹೇಳಿದರು.

ಹೆಚ್ಚುತ್ತಿರುವ ಗ್ರಾಹಕರ ವೆಚ್ಚದೊಂದಿಗೆ ಚಿಲ್ಲರೆ ಮತ್ತು ಉತ್ಪಾದನೆ ವಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಹಜವಾಗಿ, ಹಬ್ಬದ ನೇಮಕಾತಿ ಉತ್ತಮವಾಗಿದೆ, ಇದು ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
"ಸಾಂಕ್ರಾಮಿಕ ಕಾರಣದಿಂದಾಗಿ ಪೂರೈಕೆ ಸರಪಳಿ ವಲಯವು ಹಲವಾರು ಅಡಚಣೆಗಳಿಂದ ಬದುಕುಳಿದಿದೆ ಮತ್ತು ಅಂತಿಮವಾಗಿ ನೇಮಕಾತಿ ಪ್ರಕ್ರಿಯೆಗಳನ್ನುಆರಂಭಿಸುತ್ತಿದೆ. ಭಾರತದಲ್ಲಿ ನುರಿತ ಅಭ್ಯರ್ಥಿಗಳ ಬೇಡಿಕೆಯು ನಿರಂತರವಾಗಿ ಬೆಳೆಯುತ್ತಿದೆ ಮತ್ತು ಸಾಂಕ್ರಾಮಿಕ ನಂತರದ ಮಾರುಕಟ್ಟೆಯಲ್ಲಿ, ಹೊಸ ಕೌಶಲ್ಯಗಳನ್ನು ಹೊಂದುವುದು ಖಂಡಿತವಾಗಿಯೂ ಬಹಳಷ್ಟು ಮೌಲ್ಯವನ್ನು ಹೊಂದಿದೆ." ಎಂದು ಅವರು ಹೇಳಿದ್ದಾರೆ.












Click it and Unblock the Notifications