ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬಲಾಬಲದ ಚಿತ್ರಮಾಹಿತಿ
ಕರ್ನಾಟಕದಲ್ಲಿ ಅತೀ ಹೆಚ್ಚು ಕಾಡನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಉತ್ತರ ಕನ್ನಡ ಜಿಲ್ಲೆಯದು. ಸರ್ವಋತುಗಳಲ್ಲೂ ಹಸಿರನ್ನೇ ಹೊದ್ದಿರುವ ಉತ್ತರ ಕನ್ನಡ ಮಲೆನಾಡೂ ಹೌದು, ಕರಾವಳಿಯೂ ಹೌದು! ಒಂದೆಡೆ ಕರಾವಳಿಯ ಸಮುದ್ರ ಕಿನಾರೆ ಇನ್ನೊಂದೆಡೆ ಮಲೆನಾಡಿನ ಸಸ್ಯಶಾಮಲೆ ಸೇರಿ ಉತ್ತರ ಕನ್ನಡದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ಈ ಜಿಲ್ಲೆಯಲ್ಲಿಯೂ ಈಗಾಗಲೇ ರಾಜಕೀಯ ಹಣಾಹಣಿ ಆರಂಭವಾಗಿದೆ. ಅಡಿಕೆ ಬೆಳೆಗಾರರ ಸಮಸ್ಯೆ, ಮೀನುಗಾರರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಲ್ಲೆ, ರಾಜ್ಯಕ್ಕೆ ತನ್ನ ಸಂಪನ್ಮೂಲಗಳ ಮೂಲಕ ಹಲವು ಕೊಡೆ ನೀಡುತ್ತಿದ್ದರೂ, ಸರ್ಕಾರದ ದೃಷ್ಟಿಯಲ್ಲಿ ಮಾತ್ರ ಎಂದಿಗೂ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಇದೆ.
ಅಷ್ಟಕ್ಕೂ ಜಿಲ್ಲೆಯ ಮತದಾರರು ಈ ಬಾರಿ ಎಂಥ ಪ್ರತಿನಿಧಿಗಳನ್ನು ಗೆಲ್ಲಿಸುತ್ತಾರೆ ಎಂಬುದು ಕೌತುಕದ ವಿಷಯ. ಅದಕ್ಕೂ ಮುನ್ನ 2013 ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರ, ಸೋತವರ ಚಿತ್ರ ಸಮೇತವನ್ನು ಇಲ್ಲಿ ನೀಡಲಾಗಿದು. ಇದು ಜಿಲ್ಲೆಯ ರಾಜಕೀಯ ಸ್ಥಿತಿಗತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾದೀತು.













Click it and Unblock the Notifications