Get Updates
Get notified of breaking news, exclusive insights, and must-see stories!

ಮಾಜಿ ಸಿಎಂ ದಿ. ದೇವರಾಜ ಅರಸು ಜನ್ಮದಿನ ಪ್ರತಿವರ್ಷ ಈ ಕಾರು ವಿಧಾನಸೌಧಕ್ಕೆ ಬರುವುದು ಯಾಕೆ?

ಬೆಂಗಳೂರು, ಆ. 20: ಪ್ರತಿ ವರ್ಷದಂತೆ ಈ ವರ್ಷವೂ ಆ ಕಾರು ವಿಧಾನಸೌಧಕ್ಕೆ ಬಂದಿದೆ. ಅಂದರೆ ಅದನ್ನು ವಿಧಾನಸೌಧಕ್ಕೆ ತರಲಾಗಿತ್ತು. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 106 ನೇ ಜನ್ಮ ದಿನಾಚರಣೆಯನ್ನು ವಿಧಾನಸೌಧದಲ್ಲಿ ಆಚರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.

ಜೊತೆಗೆ ಪ್ರತಿವರ್ಷದಂತೆ ಈ ವರ್ಷವೂ ಮಾಜಿ ಸಿಎಂ ದಿ. ದೇವರಾಜು ಅರಸು ಅವರ ಜನ್ಮದಿನದಂದು ಈ ಕಾರು ವಿಧಾನಸೌಧಕ್ಕೆ ಬಂದಿತ್ತು. ಅದು ಸರಿಸುಮಾರು 53 ವರ್ಷಗಳಷ್ಟು ಹಳೆಯ ಐಷಾರಾಮಿ ಕಾರದು. ಪ್ರತಿವರ್ಷವೂ ಈ ಕಾರನ್ನು ದೇವರಾಜು ಅರಸು ಜನ್ಮದಿನಂದು ವಿಧಾನಸೌಧಕ್ಕೆ ತರಲಾಗುತ್ತದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಒಂದು ಬಾರಿ ಇದೇ ಕಾರಿನಲ್ಲಿ ವಿಧಾನಸೌಧದ ಸುತ್ತಲೂ ಒಂದು ಸುತ್ತು ಹಾಕಿದ್ದರು. ಅಷ್ಟಕ್ಕೂ ಆ ಕಾರು ಯಾವುದು? ಅದನ್ನು ವಿಧಾನಸೌಧಕ್ಕೆ ದೇವರಾಜ ಅರಸುರವರ ಜನ್ಮದಿನದಂದು ವಿಧಾನಸೌಧಕ್ಕೆ ತರುವುದಾರೂ ಯಾಕೆ? ಮುಂದಿದೆ ಕುತೂಹಲಕಾರಿ ಮಾಹಿತಿ!

ಕಾರಿನ ಎದುರು ನಿಂತು ಫೋಟೊ ತೆಗೆಸಿಕೊಂಡ ಸಿಎಂ ಬೊಮ್ಮಾಯಿ!

ಕಾರಿನ ಎದುರು ನಿಂತು ಫೋಟೊ ತೆಗೆಸಿಕೊಂಡ ಸಿಎಂ ಬೊಮ್ಮಾಯಿ!

ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಯಾರೇ ಮುಖ್ಯಮಂತ್ರಿಗಳಾಗಿರಲಿ ಈ ಹಳೆಯ ಐಷಾರಾಮಿ ಮಾಡೆಲ್ ಕಾರು ಆಗಸ್ಟ್ 20ರಂದು ವಿಧಾನಸೌಧದಲ್ಲಿ ಇರುತ್ತದೆ. ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಈ ಕಾರಿನ ಎದುರು ಒಂದು ಫೋಟೊವನ್ನು ಫೋಟೊ ಜರ್ನಲಿಸ್ಟ್‌ಗಳು ತೆಗೆದುಕೊಂಡೇ ತೀರುತ್ತಾರೆ. ಇವತ್ತು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಇದೇ ಕಾರಿನ ಎದುರು ನಿಂತುಕೊಂಡು ಒಂದು ಫೋಟೊಕ್ಕೆ ಪೋಸ್ ಕೊಟ್ಟರು. ಅಷ್ಟಕ್ಕೂ ಯಾರ ಕಾರಿದು? ಪ್ರತಿವರ್ಷ ವಿಧಾನಸೌಧಕ್ಕೆ ಇದನ್ನು ತರುವುದಾದರೂ ಯಾಕೆ? ಮುಂದಿದೆ ಮಾಹಿತಿ!

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೊಡುಗೆ ಈ ಕಾರು!

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೊಡುಗೆ ಈ ಕಾರು!

ಇದು 1968ರ ಮಾದರಿಯ ವಿಂಟೇಜ್ ಮರ್ಸಿಡಿಸ್ ಬೆಂಜ್ ಕಾರು. ಈ ಕಾರಿಗೆ ಒಂದು ಇತಿಹಾಸವಿದೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು 1970ರ ದಶಕದ ಕೊನೆಯಲ್ಲಿ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇಂದಿರಾ ಗಾಂಧಿ ಅವರು ಈ ಕಾರನ್ನು ಕೊಡುಗೆಯಾಗಿ ನೀಡುವವರೆಗೆ ಅರಸು ಅವರು ಅಂಬಾಸಿಡರ್ ಕಾರನ್ನು ಬಳಸುತ್ತಿದ್ದರು. ದೇವರಾಜು ಅರಸು ಅವರಿಗೆ ಅತ್ಯಂತ ಪ್ರೀಯವಾದ ಕಾರು ಇದಾಗಿತ್ತಂತೆ. ಹೀಗಾಗಿ ಅವರ ಕುಟುಂಬಸ್ಥರು ಈ ಕಾರನ್ನು ಈಗಲೂ ಅತ್ಯಂತ ಜತನದಿಂದ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಕಾರಿನೊಂದಿಗೆ ಒಂದು ಭಾವನಾತ್ಮಕ ನಂಟು ಎಲ್ಲರಿಗೂ ಇದೆ.

ಪ್ರತಿ ವರ್ಷ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ಈ ಕಾರಿಗೆ ಒಂದು ಹಾರ ಹಾಕುವುದು ವಾಡಿಕೆ. ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಒಂದು ವಿಧಾನಸೌಧಸ ಸುತ್ತಲೂ ಒಂದು ಸುತ್ತನ್ನು ಈ ಕಾರಿನಲ್ಲಿಯೇ ಹಾಕಿದ್ದರು. ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಪಾತ್ರ ಹಿರಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು

ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು

ಇದೇ ಸಂದರ್ಭದಲ್ಲಿ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಯ ಭಾಗದ ಆವರಣದಲ್ಲಿ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿ ಮಾತನಾಡಿದರು. "ಕನ್ನಡ ನಾಡು ಕಂಡಂಥ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಿದು' ಎಂದು ಸಿಎಂ ಬೊಮ್ಮಾಯಿ ಹೇಳಿದರು.

"ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ. ಹಿಂದುಳಿದ ವರ್ಗಗಳ ಏಳಿಗೆಗಾಗಿ, ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು. ವಿಶೇಷವಾಗಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪವನ್ನು ಮಾಡುವ ದಿನ ಇದು ಎಂದು ಭಾವಿಸಿದ್ದೇನೆ" ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು.

ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ!

ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ!

ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+