Get Updates
Get notified of breaking news, exclusive insights, and must-see stories!

Vaikuntha Ekadashi 2025: ವೈಕುಂಠ ಏಕಾದಶಿಯ ದಿನ ಉಪವಾಸದ ಪ್ರಯೋಜನಗಳೇನು?

ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿಗೂ ಮುನ್ನ ಬರುವ ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಪವಿತ್ರ ದಿನವಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಹೆಸರೇ ಸೂಚಿಸುವಂತೆ ಮರಣಾ ನಂತರ ಮೋಕ್ಷ ಮತ್ತು ವೈಕುಂಠ ಪ್ರಾಪ್ತವಾಗುತ್ತದೆ. ಹಾಗಾದರೆ ಈ ಬಾರಿ ವೈಕುಂಠ ಏಕಾದಶಿ ಯಾವಾಗ ಆಚರಿಸಲಾಗುತ್ತದೆ? ಈ ದಿನ ಉಪವಾಸದ ಪ್ರಯೋಜನಗಳೇನು? ಪೂಜಾ ವಿಧಾನಗಳ ಕುರಿತು ನೋಡೊಣ.

ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2025ರ ಮೊದಲ ವೈಕುಂಠ ಏಕಾದಶಿಯನ್ನು ಜನವರಿ 10ರಂದು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯನ್ನು ಪುತ್ರದ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನದಂದು ಉಪವಾಸ ಮಾಡುವುದರಿಂದ ಯೋಗ್ಯ ಮಗುವಿನ ಜನನವಾಗುತ್ತದೆ ಎಂಬ ನಂಬಿಕೆ ಇದೆ. ಈಗ ವೈಕುಂಠ ಏಕಾದಶಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಮತ್ತು ಈ ದಿನದ ಉಪವಾಸದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

Vaikuntha Ekadashi 2025 what are the benefits of fasting on vaikuntha ekadashi

ವೈಕುಂಠ ಏಕಾದಶಿಯ ಇಡೀ ದಿನ ಭಕ್ತರು ಉಪವಾಸವಿದ್ದು ಜಾಗರಣೆ ಮಾಡುತ್ತಾರೆ. ಈ ದಿನ ಅನ್ನವನ್ನು ತಿನ್ನುವುದು ಅಥವಾ ಅಕ್ಕಿಯಿಂದ ಮಾಡಿದ ಯಾವುದೇ ಆಹಾರ ಸೇವಿಸುವುದಿಲ್ಲ. ಇದರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರವನ್ನು ಹಿಂದೂ ಮನೆಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ಈ ವಿಶೇಷ ದಿನ ವಿಷ್ಣುವಿನ ಅನುಗ್ರಹವನ್ನು ಪಡೆಯಲು ಜನ ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ.

ವೈಕುಂಠ ಏಕಾದಶಿಯ ದಿನ ಉಪವಾಸದ ಪ್ರಯೋಜನಗಳು:-

* ವೈಕುಂಠ ಏಕಾದಶಿಯನ್ನು ಪುತ್ರದ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುವುದರಿಂದ ಯೋಗ್ಯವಾದ ಮಗು ಜನಿಸುತ್ತದೆ. ಇದರೊಂದಿಗೆ ನಿಮ್ಮ ಮಕ್ಕಳು ಈ ದಿನ ಉಪವಾಸ ಮಾಡುವುದರಿಂದ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಪಡೆಯುತ್ತಾರೆ.

* ಈ ಏಕಾದಶಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದಿನದಂದು ಭಕ್ತರು ವಿಷ್ಣುವನ್ನು ಸಂತೋಷಪಡಿಸುವ ಮೂಲಕ ತಮ್ಮ ಜೀವನದ ಕೊನೆಯಲ್ಲಿ ಅಂದರೆ ಮರಣದ ನಂತರ ವೈಕುಂಠ ಲೋಕಕ್ಕೆ ಹೋಗಲಿದ್ದಾರೆ. ಈ ದಿನ ಉಪವಾಸ ಮಾಡುವುದರಿಂದ ನಿಮ್ಮ ಕುಟುಂಬದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

* ಈ ದಿನವನ್ನು ಪೂರ್ವಜರ ಆತ್ಮಗಳಿಗೆ ಮುಕ್ತಿ ನೀಡುವ ದಿನವೆಂದು ಪರಿಗಣಿಸಲಾಗಿದೆ. ಈ ದಿನ ನೀವು ನಿಮ್ಮ ಪೂರ್ವಜರನ್ನು ಧ್ಯಾನಿಸಿ ದಕ್ಷಿಣಕ್ಕೆ ಮುಖ ಮಾಡಿ ಎಳ್ಳು ಬೆರೆಸಿದ ನೀರನ್ನು ಅವರಿಗೆ ಅರ್ಪಿಸಿದರೆ, ಅವರು ಮೋಕ್ಷವನ್ನು ಪಡೆಯುವಿರಿ. ಈ ಕೆಲಸವು ಪೂರ್ವಜರಿಗೆ ವೈಕುಂಠವನ್ನು ಸಹ ನೀಡುತ್ತದೆ ಎಂದು ನಂಬಲಾಗಿದೆ.

* ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವವರಿಗೆ ಮೋಕ್ಷದ ಬಾಗಿಲುಗಳು ತೆರೆದುಕೊಳ್ಳುವುದಲ್ಲದೆ ಅನೇಕ ಜನ್ಮಗಳ ಪಾಪಗಳು ಸಹ ನಾಶವಾಗುತ್ತವೆ.

* ಇನ್ನೂ ವೈಕುಂಠ ಏಕಾದಶಿ ಉಪವಾಸದ ಸಮಯದಲ್ಲಿ ದಾನ ಮಾಡಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಹೀಗೆ ಮಾಡುವುದರಿಂದ ಜೀವನದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.

* ಈ ದಿನದಂದು ಆಚರಿಸುವ ಉಪವಾಸ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನಸ್ಸಾಕ್ಷಿಯು ಬಲವಾಗಿರುತ್ತದೆ. ಅದು ನಿಮಗೆ ಸತ್ಯದ ಜ್ಞಾನವನ್ನು ನೀಡುತ್ತದೆ.

* ವೈಕುಂಠ ಏಕಾದಶಿಯ ದಿನದಂದು ಉಪವಾಸ ಮಾಡುವುದರಿಂದ ಜಾತಕದಲ್ಲಿ ಗುರು ಬಲಶಾಲಿಯಾಗುತ್ತಾನೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಸಿಗಲಿದೆ.

* ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದರಿಂದ ದುಃಖ ಮತ್ತು ಬಡತನ ದೂರವಾಗುತ್ತದೆ. ಜೀವನದಲ್ಲಿ ಬರುವ ತೊಂದರೆಗಳು ದೂರವಾಗುತ್ತವೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಇದರೊಂದಿಗೆ, ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ, ನೀವು ಯೋಗ್ಯ ಮಗುವನ್ನು ಸಹ ಪಡೆಯುತ್ತೀರಿ. ಮಕ್ಕಳಿಲ್ಲದ ದಂಪತಿಗಳಿಗೆ ಈ ದಿನವು ತುಂಬಾ ವಿಶೇಷವೆಂದು ಪರಿಗಣಿಸಲಾಗಿದೆ.

* ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ, ಸಾಕಷ್ಟು ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ನೀರು ಕುಡಿಯದೆ ಈ ಉಪವಾಸ ಆಚರಿಸುವ ಜನರ ಎಲ್ಲಾ ಆಸೆಗಳನ್ನು ವಿಷ್ಣು ಪೂರೈಸುತ್ತಾನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+