ಇಂಟರ್ನೆಟ್ಟಿನಲ್ಲಿ ಹಗಲೂ ರಾತ್ರಿ ಮಹಾಶಿವರಾತ್ರಿ

ಶಿವಲಿಂಗಗಳಿಗೆ ಅಹೋರಾತ್ರಿ ಅಭಿಷೇಕ. ಇಂದು ರಾತ್ರಿ ನಾಲಕ್ಕು ಯಾಮದ ಪೂಜೆ. ಅಂದಹಾಗೆ ಇವತ್ತು ಸರಕಾರಿ ರಜಾ ದಿನ. ಬುಧವಾರ ರಾತ್ರಿ ಜಾಗರಣೆ. ಆದ್ದರಿಂದ ನಾಳೆ ಗುರುವಾರ ರಜೆ ಕೊಡಬಹುದಿತ್ತು. ಹೋಗಲಿ ಬಿಡಿ. ನಾಳೆ ಕಚೇರಿಯಲ್ಲಿ ತೂಕಡಿಸಿದರಾಯಿತು.
ಸರ್ವಶಕ್ತನಾದ ಶಿವನನ್ನು ಆರಾಧಿಸುವುದಕ್ಕೆ ಇವತ್ತು ಅತ್ಯಂತ ಪ್ರಶಸ್ತವಾದ ದಿನ. ಹಾಗಾಗಿ ಮನೆಗೆ ಸಮೀಪದ ಶಿವ ದೇವಸ್ಥಾನದಿಂದ ಹಿಡಿದು ದೂರದ ಗೋಕರ್ಣ, ಧರ್ಮಸ್ಥಳ, ಮಲೆ ಮಹದೇಶ್ವರ, ನಂಜನಗೂಡು ನಂಜುಂಡ ಮುಂತಾದ ದೇಗುಳದಲ್ಲಿ ಜನಸಾಗರದಿಂದ ಒಂದು ಭಕ್ತಿ ಪುರಸ್ಸರ ನಮಸ್ಕಾರ. ದೇಗುಳದವರೆಗೆ ಹೋಗಲಾರದವರಿಗೆ ಇಂಟರ್ನೆಟ್ಟೇ ದೇವಸ್ಥಾನ. ಕ್ರಿಕೆಟ್ಟುಗಳ ಟಿಕೆಟ್ಟುಗಳು, ಪೀಜಾಗಳು, ಬ್ಯಾಂಕ್ ಲೋನುಗಳು, ಹೂವು, ಉಡುಗೊರೆಗಳ ಪೊಟ್ಣಗಳು ಇಂಟರ್ನೆಟ್ ಮುಖಾಂತರವಾಗೇ ಮನೆತಲುಪುವ ಈ ದಿನಗಳಲ್ಲಿ ದೇವರೂ ಕೂಡ ಅಂತರ್ಜಾಲದಲ್ಲಿ ಇಣುಕುವುದು, ಅದೂ ಪುಕ್ಕಟೆ ದರ್ಶನ ಕೊಡುವುದು ಈ ಕಾಲದ ಮಹಿಮೆ. ತಾವು ಕೂಡ ಈ ಪುಟದಲ್ಲೇ ಶಿವ ದರುಶನ ಪಡೆದುಕೊಂಡು ಪಾವನರಾಗಬಹುದು.
ಮುಕ್ಕೋಟಿ ದೇವತೆಗಳಿದ್ದರೂ ಹಿಂದೂಗಳಿಗೆ ಶಿವನಲ್ಲಿ ಎಲ್ಲಿಲ್ಲದ ಭಕ್ತಿ. ಶಿವ ಯಾರು? ತಲೆಯಲ್ಲಿ ನಲ್ಲಿ ಇಟ್ಟುಕೊಂಡು, ಕೊರಳಲ್ಲಿ ಹಾವು ಸುತ್ತಿಕೊಂಡು, ಹುಲಿ ಚರ್ಮದಿಂದ ಮಾಡಿದ ಲೆವಿಸ್ ಲುಂಗಿ ತೊಟ್ಟುಕೊಂಡು, ಕಪಾಲ ಹಿಡಿದುಕೊಂಡು ಸ್ಮಶಾನಗಳಲ್ಲಿ ತಿರುಗುವ ಅಲೆಮಾರಿ ಮಾತ್ರವಲ್ಲ. ಆತನೂ ನಮ್ಮ ನಿಮ್ಮಂತೆಯೇ ಕುಟುಂಬದ ಯಜಮಾನ. ನೋಡುವುದಕ್ಕೆ ಆತನಿಗೆ ಇಬ್ಬರು ಹೆಂಡಿರು (ಗಂಗೆ, ಗೌರಿ) ನಾಲ್ವರು ಮುದ್ದು ಮಕ್ಕಳಿದ್ದರೂ (ಮಾನಸ, ಗಣೇಶ, ಷಣ್ಮುಖ ಮತ್ತು ವೀರಭದ್ರ) ಇಡೀ ಬ್ರಹ್ಮಾಂಡವೇ ಅವನ ಸಂಸಾರ. ಆತನ ಕರುಣೆಯಿಲ್ಲದೆ ನಮಗೆ ಐಹಿಕವಾಗಿ, ಪಾರಮಾರ್ಥಿಕವಾಗಿ ಇಲ್ಲೇನೂ ಗಿಟ್ಟುವುದಿಲ್ಲ.
ಶಿವನ ಮಹಿಮೆ ಅಪಾರ. ಎಷ್ಟು ಬಣ್ಣಿಸಿದರೂ ಕಡಿಮೆಯೇ. ಅದ್ವೈತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಸಮುದಾಯಕ್ಕೆ ಶಿವನೇ ಅಂತಿಮ ನಿಲ್ದಾಣ. ಆದರೆ, ದ್ವೈತ ಸಿದ್ಧಾಂತ ಪ್ರಿಯರಿಗೆ ವಿಷ್ಟುವೇ ಸರ್ವೋತ್ತಮ. ಹಾಗಾಗಿ, ಕಟ್ಟಾ ಸಂಪ್ರದಾಯವಾದಿಗಳಿಗೆ ಶಿವ ದೂರವೇ. ಹಾಗೆಯೆ, ಕೆಲ ದ್ವೈತ ಸಿದ್ಧಾಂತಿಗಳು ಶಿವನೇ ಪ್ರಥಮ ವೈಷ್ಣವ ಎಂದು ನಂಬುವವರೂ ಇದ್ದಾರೆ. ಅವರವರ ಭಾವಕ್ಕೆ ತಕ್ಕಂತೆ. ಆದರೆ, ನಮ್ಮಲ್ಲಿರುವ ಪ್ರತೀತಿ ಪ್ರಕಾರ ದ್ವೈತ ಸಿದ್ಧಾಂತಿಗಳು ಕೂಡ ಇಂದು ಶಿವ ದರುಶನವನ್ನು ಕಡ್ಡಾಯ ಪಡೆಯಲೇಬೇಕು. ಇಲ್ಲದಿದ್ದರೆ ಅವರಿಗೆ ಮುಂದೆ ಕತ್ತೆ ಜನ್ಮ ಬರುತ್ತದೆಂದು ನಂಬಿಕೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications