ಶ್ರೀರಾಮನ ಹುಟ್ಟುಹಬ್ಬಕ್ಕೆ 100% ಸೆಕ್ಯುಲರ್ ಪಾನ-ಗಾನ!
ಶ್ರೀಜಯನಾಮ ಸಂವತ್ಸರ, ವಸಂತ ಋತು, ಚೈತ್ರಮಾಸ, ಉತ್ತರಾಯಣ, ಶುಕ್ಲ ಪಕ್ಷ, ನವಮಿ ತಿಥಿ, ಪುನರ್ವಸು ನಕ್ಷತ್ರವಿರುವ ಮಂಗಳವಾರ (ಏ.8) ಶ್ರೀರಾಮನವಮಿ ಎಲ್ಲೆಡೆ ಆಚರಿಸಲಾಗುತ್ತಿದೆ. ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕ ಶ್ರೀರಾಮ ಕಡು ಬೇಸಿಗೆಯಲ್ಲಿ ಜನಿಸಿ ಜನರಿಗೆ ಬದುಕಿನ ಸಿಹಿ ಹಂಚಿದಾತ.
ರಾಮನವಮಿಗೆ ನಾನಾ ಬಗೆಯ ಪೇಯಗಳು. ಕಲ್ಲಂಗಡಿ, ಕರಬೂಜಾ, ನಿಂಬೆ ಹಣ್ಣಿನ ರಸ ಸೇವನೆಗೆ ಸಕಾಲ. ಹೆಸರುಬೇಳೆ ಕೋಸಂಬರಿಗೂ ರಾಮನವಮಿಗೂ ಬಿಡಿಸಲಾರದ ನಂಟು. ದೇಶದೆಲ್ಲೆಡೆ ರಾಮಭಜನೆ, ರಾಮ ನಾಮದೊಂದಿಗೆ ಪಾನಕ ಕೋಸಂಬರಿ ವಿತರಣೆ ಸಾಂಗವಾಗಿ ಸಾಗಿದೆ. [ಇಂದಿನ ದಿನಶುದ್ಧಿ ಏನಿದೆ?]

ಈ ಸಂದರ್ಭದಲ್ಲಿ ನಮ್ಮ ಓದುಗರಾದ ಶ್ರೀವತ್ಸ ಜೋಶಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ 'ರಾಮನವಮಿಗೆ 100% ಸೆಕ್ಯುಲರ್ ಪಾನಕದ ಪಾನ-ಗಾನ' ಹೆಸರಿನಡಿಯಲ್ಲಿ ರಾಮಮಯವಾಗಿರುವ ರಾಮಾಯಣದ ಕಥೆ ಹೇಳುವ ವಿಡಿಯೋ ಹಾಕಿಕೊಂಡಿದ್ದಾರೆ. ಏನಿದರ ಕಥೆ, ವಿಡಿಯೋದಲ್ಲಿ ಏನಿದೆ ಮುಂದೆ ಓದಿ...
ಇದು ಕೇರಳದ ಒಬ್ಬ ಮುಸ್ಲಿಂ ಕವಿ (ಯೂಸುಫ್ ಅಲಿ ಕೆಚೇರಿ) ಬರೆದಿರುವ ಗೀತೆ. ಸಂಗೀತ ನಿರ್ದೇಶನ ಮಾಡಿದ ಕಲಾವಿದನೂ ಮುಸ್ಲಿಂ (ನೌಷಾದ್). ಹಾಡುಗಾರ ಕ್ರಿಶ್ಚಿಯನ್ (ಕೆ.ಜೆ.ಯೇಸುದಾಸ್). ಸಂಸ್ಕೃತ ಭಾಷೆಯಲ್ಲಿ ಇರುವ ಈ ಭಕ್ತಿಗೀತೆ ಹಿಂದೂ ದೇವರಾದ ಶ್ರೀರಾಮನ ಕಥೆಯನ್ನು ಹೇಳುತ್ತಿದೆ. ನಿಜಕ್ಕೂ ಮೈನವಿರೇಳಿಸುವಂಥ ಸಂಗತಿ!
ನಾವೆಲ್ಲ ಯಾಕಾದರೂ ಕುಲ-ಜಾತಿ-ಮತ-ಧರ್ಮ ಅಂತ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೊ. ಸಂಗೀತದ ಮಾಧುರ್ಯಕ್ಕೆ ಎಲ್ಲಿಯ ಗೋಡೆಗಳು? ಮನುಜರೆಲ್ಲ ಒಂದೇ ಕುಲ ಎನ್ನುವುದನ್ನು ಈ ಗೀತೆಯನ್ನು ಕೇಳಿಯಾದರೂ ನಾವು ಅರ್ಥ ಮಾಡಿಕೊಳ್ಳಬೇಕು. ರಾಮನವಮಿಯ ಈ ಶುಭದಿನದಂದು ಇದೇ ಆಗಲಿ ನಮಗೆಲ್ಲ ಪಾನ(ಗಾನ)ಪ್ರಸಾದ. ಕಲ್ಯಾಣಿ ರಾಗದಲ್ಲಿ ಸುಮಧುರವಾಗಿ ಮೂಡಿಬಂದಿರುವ ಈ ಸಂಸ್ಕೃತ ಭಕ್ತಿಗೀತೆ "ಜಾನಕೀ ಜಾನೇ ರಾಮಾ...". ಹಾಡಿನ ಜೊತೆಯಲ್ಲಿ ವಿಡಿಯೋದಲ್ಲಿ ಮೂಡಿಬರುವ ರಾಮಾಯಣ ಮಹಾಕಾವ್ಯದ ವರ್ಣಚಿತ್ರಗಳು. ಎಲ್ಲರಿಗೂ ಶ್ರೀರಾಮನವಮಿ ಶುಭಾಶಯಗಳು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications