Pitru Paksha 2022: ಶ್ರಾದ್ಧ, ಪಿಂಡಪ್ರದಾನ ಮಾಡಲು ಒಳ್ಳೆಯ ಸ್ಥಳಗಳು ಇವು
ಸಾವನ್ನಪ್ಪಿದವರ ಆತ್ಮಗಳಿಗೆ ಮುಕ್ತಿ ಸಿಗಲು ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ, ಶ್ರಾದ್ಧ, ಪಿಂಡದಾನ, ಅಸ್ಥಿ ವಿಸರ್ಜನೆ ಇತ್ಯಾದಿ ವಿಧಿವಿಧಾನಗಳನ್ನು ನೆರವೇರಿಸಬೇಕು. ಇಲ್ಲದಿದ್ದರೆ ಮುಕ್ತಿ ಸಿಗುವುದಿಲ್ಲ ಎಂಬ ನಂಬಿಕೆ ಹಿಂದೂಗಳಲ್ಲಿದೆ.
ಶ್ರಾದ್ಧ, ಪಿಂಡದಾನ, ತರ್ಪಣ ಕ್ರಿಯೆಗಳಿಗೆ ಪಿತೃಪಕ್ಷ ಸರಿಯಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಶ್ರಾದ್ಧ ಮಾಡಿದರೆ ನಮ್ಮ ಮೂರು ತಲೆಮಾರುಗಳ ಆತ್ಮಗಳಿಗೆ ಮುಕ್ತಿ ಸಿಗುತ್ತದೆ.
ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಬರುತ್ತದೆ. ಈ ವರ್ಷ ಇದು ಸೆಪ್ಟೆಂಬರ್ 25, ಭಾನುವಾರದಂದು ಇದೆ. ಅಮಾವಾಸ್ಯೆಯಾದ್ದರಿಂದ ಈ ದಿನದಂದು ಶ್ರಾದ್ಧ, ಪಿಂಡಪ್ರದಾನ, ತರ್ಪಣ ಬಿಡುವುದು ಬಹಳ ಉತ್ತಮ ಎನ್ನಲಾಗಿದೆ. ಈ ಕ್ರಿಯೆಗಳಿಗೆ ಕೆಲ ಸ್ಥಳಗಳನ್ನು ಶ್ರೇಷ್ಠವೆಂದು ಪರಿಭಾವಿಸಲಾಗಿದೆ. ಅಂಥ ಕೆಲ ಪ್ರಮುಖ ಸ್ಥಳಗಳು ಇಲ್ಲಿವೆ.

ಪಿಂಡದಾನ ಮಾಡಲು ಯಾವ ಸ್ಥಳ ಸೂಕ್ತ:
1) ವಾರಾಣಸಿ: ಉತ್ತರ ಪ್ರದೇಶದಲ್ಲಿ ಪವಿತ್ರ ಗಂಗಾ ನದಿಯ ತಟದಲ್ಲಿರುವ ವಾರಾಣಸಿ ಹಿಂದೂಗಳ ಅತ್ಯಂತ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾಯುವುದರೊಳಗೆ ಹಿಂದೂಗಳ ಕೈಗೊಳ್ಳಬೇಕಾದ ತೀರ್ಥಯಾತ್ರೆಯ ಸ್ಥಳಗಳಲ್ಲಿ ಇದೂ ಒಂದು. ಕಾಶಿ ವಿಶ್ವನಾಥ ಸೇರಿದಂತೆ ಹಲವಾರು ಪ್ರಮುಖ ದೇವಸ್ಥಾನಗಳು ಇಲ್ಲಿವೆ. ಸಾವಿರಾರು ವರ್ಷಗಳಿಂದಲೂ ವಾರಾಣಸಿಯಲ್ಲಿ ಪಿಂಡದಾನ ಮಾಡಿಕೊಂಡು ಬರಲಾಗುತ್ತಿದೆ.
2) ಗಯಾ: ಬಿಹಾರದಲ್ಲಿರುವ ಗಯಾ ಇನ್ನೊಂದು ಹಿಂದೂಗಳ ಪವಿತ್ರ ಕ್ಷೇತ್ರ. ಇಲ್ಲಿಯ ಫಲ್ಗು ನದಿಯ ತಟದಲ್ಲಿ ಪಿಂಡದಾನ ಮಾಡುವ ಪದ್ಧತಿ ಇದೆ. ವಿಷ್ಣುವಿನ ಅವತಾರ ಇಲ್ಲಾಯಿತು ಎಂಬ ನಂಬಿಕೆ ಇದೆ. ಈ ನದಿಯಲ್ಲಿ ಮಿಂದು ನಂತರ ಪಿಂಡದಾನ ಮಾಡಲಾಗುತ್ತದೆ.
3) ಬದ್ರಿನಾಥ: ಅಲಕಾನಂದ ನದಿ ತಟದಲ್ಲಿರುವ ಬ್ರಹ್ಮ ಕಪಾಲ ಘಾಟಿಯು ಪಿಂಡದಾನಕ್ಕೆ ಶ್ರೇಷ್ಠ ಎಂದು ಪರಿಗಣಿತವಾಗಿದೆ. ಅಲಕಾನಂದ ನದಿಯಲ್ಲಿ ಮುಳುಗೆದ್ದು ಶ್ರಾದ್ಧ, ಪಿಂಡದಾನ ಮಾಡಬೇಕು. ವಿಧಿವಿಧಾನಗಳನ್ನು ನೆರವೇರಿಸಲು ಇಲ್ಲಿ ಬ್ರಾಹ್ಮಣರೂ ಲಭ್ಯ ಇರುತ್ತಾರೆ.

4) ಪುಷ್ಕರ: ರಾಜಸ್ಥಾನದ ಪುಷ್ಕರ ಸರೋವರ ಬಹಳ ಪವಿತ್ರ ಸ್ಥಳವೆನಿಸಿದೆ. ವಿಷ್ಣುವಿನ ನಾಬಿಯಿಂದ ಸರೋವರ ಸೃಷ್ಟಿಯಾಯಿತು ಎಂದು ಹೇಳಲಾಗುತ್ತದೆ. ಹಾಗೆಯೇ, ಬ್ರಹ್ಮದೇವ ಇಲ್ಲಿ ತಾವರೆ ಹೂವನ್ನು ಎಸೆದು ಹೋಗಿದ್ದರಿಂದ ಪುಷ್ಕರ ಸೃಷ್ಟಿಯಾಯಿತು ಎಂಬ ನಂಬಿಕೆಯೂ ಇದೆ.
ಈ ಕೆರೆಯ ಸುತ್ತ 52 ಘಾಟ್ಗಳು ಇದ್ದು, ಇಲ್ಲಿ ಪಿಂಡದಾನ ಮಾಡಬಹುದು. ಸಾಮಾನ್ಯವಾಗಿ ಅಶ್ವಿನಿ ಮಾಸದಲ್ಲಿ ಈ ಕಾರ್ಯ ನಡೆಯುತ್ತದೆ.
5) ಅಯೋಧ್ಯೆ: ರಾಮನ ಜನ್ಮಭೂಮಿ ಎನಿಸಿರುವ ಅಯೋಧ್ಯೆಯೂ ಕೂಡ ಪಿಂಡದಾನಕ್ಕೆ ಶ್ರೇಷ್ಠ ಜಾಗವೆನಿಸಿದೆ. ಇಲ್ಲಿಯ ಸರಯೂ ನದಿಯ ತಟದಲ್ಲಿರುವ ಭಾತ್ ಕುಂಡ್ ಪ್ರದೇಶದಲ್ಲಿ ಪಿಂಡದಾನ ಮಾಡಲಾಗುತ್ತದೆ.
6) ಶ್ರೀರಂಗಪಟ್ಟಣ: ಮಂಡ್ಯದ ಕಾವೇರಿ ನದಿ ತಟದಲ್ಲಿ ಶ್ರೀ ರಂಗನಾಥ ಸ್ವಾಮಿಯ ಸಾನಿಧ್ಯದಲ್ಲಿ ಪಿತೃಪಕ್ಷದಲ್ಲಿ ಶ್ರಾದ್ಧ, ಪಿಂಡ ಪ್ರದಾನ ಇತ್ಯಾದಿ ವಿಧಿ ವಿಧಾನಗಳನ್ನು ನೆರವೇರಿಸುವುದು ಶ್ರೇಷ್ಠ ಎಂದು ಭಾವಿಸಲಾಗಿದೆ. ಇಲ್ಲಿ ನಾರಾಯಣ ಬಲಿ ಪೂಜೆ ಮಾಡಿ ನಂತರ ಪಿಂಡದಾನ ಮಾಡಲಾಗುತ್ತದೆ.
ಪಿತೃ ದೋಷ ನಿವರಣೆಗೆ, ಪೂರ್ವಿಕರ ಶಾಪದಿಂದ ವಿಮೋಚನೆಯಾಗಲು, ಪೂರ್ವಿಕರ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು, ದುಷ್ಟ ಆತ್ಮಗಳ ನಿವಾರಣೆ ಮಾಡಲು ಶ್ರೀರಂಗಪಟ್ಟಣದಲ್ಲಿ ಪಿಂಡದಾನ ಮತ್ತು ನಾರಾಯಣ ಬಲಿ ಮುಖ್ಯ ಕ್ರಿಯೆಯಾಗಿದೆ.
(ಒನ್ಇಂಡಿಯಾ ಸುದ್ದಿ)
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications