ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ
ದೇಶಾದ್ಯಂತ ಪವಿತ್ರ ರಂಜಾನ್ ಸಂಭ್ರಮ ಮನೆ ಮಾಡಿದೆ. ರಂಜಾನ್ ತಿಂಗಳಿನಲ್ಲಿ ಒಬ್ಬ ಮುಸ್ಲಿಂ ಕೈಗೊಳ್ಳುವ ಕಟ್ಟುಪಾಡುಗಳೇನು? ಇದನ್ನು ಪಾಲಿಸುವುದರಿಂದ ವೈಜ್ಞಾನಿಕವಾಗಿ ಆಗುವ ಲಾಭಗಳು ಏನು? ಉಪವಾಸದ ಪದ್ಧತಿ ಎಂಥದ್ದು? ಇಫ್ತಾರ್ ಕೂಟದ ಪ್ರಾಮುಖ್ಯವೇನು? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಇದ್ದರೆ ಅದಕ್ಕೆಲ್ಲ ಇಲ್ಲಿದೆ ಉತ್ತರ.
ಜೂನ್ 17 ರಂದು ಆರಂಭವಾಗಿರುವ ಉಪವಾಸ ಒಂದು ತಿಂಗಳ ಕಾಲ ಚಾಲ್ತಿಯಲ್ಲಿ ಇರುತ್ತದೆ. ಮುಂಜಾನೆ ಸೂರ್ಯೋದಯಕ್ಕಿಂತ ಮುನ್ನ ಸಂಜೆ ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಬೇಕು. ಮಕ್ಕಳು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಮಾತ್ರ ಉಪವಾಸದಿಂದ ವಿನಾಯಿತಿ.[ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು]
ರಂಜಾನ್ ಆಚರಣೆಯ ಬಗ್ಗೆ ಮಂಗಳೂರಿನ ಸ್ನೇಹಿತ ಯೂಸಫ್ ಅವರನ್ನು ಕೇಳಿದಾಗ ಅದರ ಒಂದೊಂದೆ ವಿಚಾರಗಳನ್ನು ಮತ್ತು ಮೌಲ್ಯಗಳನ್ನು ಬಿಚ್ಚಿಟ್ಟರು. ಅವರ ಮಾತಿನಲ್ಲಿಯೇ ರಂಜಾನ್ ಮಹತ್ವವನ್ನು ತಿಳಿದುಕೊಳ್ಳೋಣ...

ಸೂರ್ಯೋದಯಕ್ಕೂ ಮುನ್ನವೇ ಎದ್ದು ಪ್ರಾರ್ಥನೆ ಸಲ್ಲಿಕೆ ಮಾಡಬೇಕು, ನಂತರ ಆಹಾರ ಸೇವನೆ. ಸೂರ್ಯ ಉದಯದ ನಂತರ ಎಂಜಲನ್ನು ಸಹ ನುಂಗುವಂತಿಲ್ಲ. ಬಡವರ ಕಷ್ಟ ಎಲ್ಲರಿಗೂ ಗೊತ್ತಾಗಲಿ, ನಮ್ಮ ಮನಸ್ಸಿನಲ್ಲಿರುವ ಅಹಂಕಾರದ ಭಾವನೆಗಳು ಮರೆಯಾಗಲಿ ಎಂಬ ಉದ್ದೇಶಕ್ಕೆ ತಿಂಗಳ ಕಾಲದ ಉಪವಾಸವನ್ನು ಧಾರ್ಮಿಕ ಮುಖಂಡರು ತಿಳಿಸಿಕೊಟ್ಟಿದ್ದಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ದೇಹದಲ್ಲಿನ ಕೊಬ್ಬಿನ ಅಂಶ ನಾಶ ಮಾಡುವುದರೊಂದಿಗೆ ಹೊಸ ಚೈತನ್ಯಕ್ಕೆ ಈ ಉಪವಾಸ ಕಾರಣವಾಗುತ್ತದೆ.
ಸಂಜೆ ನಡೆಯುವ ಇಫ್ತಾರ್ ಕೂಟಕ್ಕೆ ಉಪವಾಸ ಬಿಡುವುದು ಎಂದು ಕರೆಯಬಹುದು. ಅದು ಅಂದಿಗೆ ಮಾತ್ರ. ಮತ್ತೆ ಮರುದಿನ ದೈನಂದಿನ ಪದ್ಧತಿ ಜಾರಿಯಲ್ಲಿ ಇರುತ್ತದೆ. ದಿನದ ಐದು ಪ್ರಾರ್ಥನೆಗಳೊಂದಿಗೆ ಈ ತಿಂಗಳಲ್ಲಿ ಕೆಲ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಬೇಕು.[ಉಪವಾಸ, ಪಾರಾಯಣ, ಪಾರಣಿ : ರಂಗ್ರಂಗೀನ್ ರಂಜಾನ್]
ಮಸೀದಿಯಲ್ಲೇ ಇಫ್ತಾರ್ ಕೂಟ ಮಾಡುತ್ತೇವೆ. ಒಂದೊಂದು ದಿನ ಒಬ್ಬೊಬ್ಬರು ಊಟದ ಜವಾಬ್ದಾರಿ ವಹಿಸಿಕೊಂಡಿರುತ್ತಾರೆ. ಖರ್ಜೂರಕ್ಕೆ ವಿಶೇಷವಾದ ಸ್ಥಾನ ನೀಡಿದ್ದು ಸೇವನೆ ಮಾಡುತ್ತೇವೆ. ಮಾಂಸಹಾರಕ್ಕೆ ನಿರ್ಬಂಧವಿಲ್ಲ. ಖರ್ಜೂರ, ಹಣ್ಣು, ಶ್ಯಾವಿಗೆ ಮತ್ತು ಪಾಯಸ ಪ್ರಮುಖವಾದದ್ದು.
ಕುರಾನ್ ಪಠಣ ಹಬ್ಬದ ಪ್ರಮುಖ ಅಂಶ. ಕುರಾನ್ ಧರ್ಮಗ್ರಂಥದ ವಿವಿಧ ಭಾಗಗಳನ್ನು ಓದಿ ಹೇಳುವ ಮೌಲಾ ಅವರ ಆಣತಿಯಂತೆ ನಡೆದುಕೊಳ್ಳುತ್ತೇವೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ಧರ್ಮಗ್ರಂಥ ಪಠಣ ಮಾಡಬಹುದು.
ದಾನ ನೀಡುವುದಕ್ಕೂ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಆತ ಗಳಿಸಿದ ಆದಾಯದ ಶೇ.2.5 ನ್ನು ಬಡವರಿಗೆ ನೀಡಬೇಕು ಎಂಬ ನಿಯಮವಿದೆ. ಆಹಾರ ವಸ್ತುಗಳನ್ನು, ಹಣ ಮತ್ತು ಬಟ್ಟೆ ದಾನ ಮಾಡಬಹುದು.
ಪ್ರಾರ್ಥನೆ, ಶಿಸ್ತು, ದಾನ, ತಮ್ಮನ್ನು ತಾವು ಅರಿತುಕೊಳ್ಳುವುದು, ದೇಹ ದಂಡನೆ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು, ಏಕಾಗ್ರತೆ ಸಾಧಿಸುವುದು ಹಬ್ಬದ ವಿಶೇಷ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications