ಮುಚ್ಚಿಟ್ಟ ಲೈಂಗಿಕತೆಯಿಂದ ಹೆಚ್ಚುತ್ತಿರುವ ಏಡ್ಸ್

ಆದರೇ ಮಾನವನಿಗೆ ಇತರೆ ಪ್ರಾಣಿಗಳಂತೆ ಹಸಿವು, ನಿದ್ರೆ, ಲೈಂಗಿಕತೆ ಇವು ಸ್ವಾಭಾವಿಕವಾಗಿಯೆ ಇರುವುದು. ಇದರಲ್ಲಿಯೂ ಸಹಾ ನಾವು ನಮ್ಮದೇ ಆದ ನೀತಿ ನಿಯಮವನ್ನು ಸೃಷ್ಟಿ ಮಾಡಿಕೊಂಡಿರುವೆವು. ಸರಿಯಾದ ವೇಳೆಗೆ ಆಹಾರ ಸೇವನೆ, ನಿರ್ದಿಷ್ಟ ಅವಧಿಯಲ್ಲಿ ನಿದ್ದೆ, ನಾಲ್ಕು ಗೋಡೆಯ ನಡುವೆ ಲೈಂಗಿಕತೆ ಈ ರೀತಿಯ ನಿಯಮಗಳನ್ನು ಹೆಚ್ಚಾಗಿ ಪಾಲಿಸುತ್ತಾ ಬಂದಿರುವೆವು.
ಆದರೆ ಪ್ರಾಣಿಗಳಲ್ಲಿ ಈ ರೀತಿಯಾಗಿಲ್ಲ. ಹಸಿವಾದಾಗ ಆಹಾರ ಸೇವನೆ, ಹೊಟ್ಟೆ ತುಂಬಿದಾಗ ನಿದ್ದೆ, ಲೈಂಗಿಕತೆಯ ಅಗತ್ಯತೆ ಎನಿಸಿದಾಗ ಅನ್ಯ ಲಿಂಗದ ಜೊತೆ ಲೈಂಗಿಕತೆ ಇವು ಸ್ವಾಭಾವಿಕವಾಗಿದೆ. ಯಾರಿಗೂ ಕಾಣದಂತೆ ಕೋಣೆಯಲ್ಲಿ, ಮರೆಯಾಗಿ ಲೈಂಗಿಕತೆ ಮಾಡುವ ಅಗತ್ಯವೂ ಪ್ರಾಣಿಗೆ ಇಲ್ಲ. ಸ್ವಾಭಾವಿಕವಾಗಿ ಜೀವಿಯ ಮೂರು ಅಗತ್ಯತೆಗಳನ್ನು ಆಯಾ ಸಂದರ್ಭದಲ್ಲಿ ನೆರವೇರಿಸಿಕೊಳ್ಳುತ್ತಿರುವವು.
ಆದರೆ ಅದೇ ಪ್ರಾಣಿ ಜಾತಿಯಲ್ಲಿ ಹುಟ್ಟಿದ ಮಾನವ ತಾನೇ ಮಾಡಿಕೊಂಡ ಚೌಕಟ್ಟಿನಲ್ಲಿ ಈ ಮೂರು ಅಗತ್ಯತೆಯನ್ನು ಪೂರೈಸಿಕೊಳ್ಳುವ ಕಟ್ಟುಪಾಡನ್ನು ವಿಧಿಸಿಕೊಂಡಿರುವನು. ಸಹಜವಾಗಿರುವ ಆಶೆಯವನ್ನು ಕಟ್ಟುಪಾಡಿನ ಸಂಪ್ರದಾಯದಲ್ಲಿ ನೆರವೇರಿಸಿಕೊಳ್ಳಲು ಸಾಧ್ಯವಾಗದ ಇದ್ದಾಗ ಸಹಜವಾಗಿ ಸಂಪ್ರದಾಯ ಒಪ್ಪದ ರೀತಿಯಲ್ಲಿ ಅಗತ್ಯ ಚಟುವಟಿಕೆಗಳು ನಡೆಸಲು ಆರಂಭಿಸುತ್ತಾನೆ.
ಈ ರೀತಿಯ ನಾವೇ ಮಾಡಿಕೊಂಡ ಚೌಕಟ್ಟಿನಲ್ಲಿ ಎಡವಿದರ ಪರಿಣಾಮವಾಗಿ ಇಂದು ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆವು. ಅದರಲ್ಲಿ ಲೈಂಗಿಕತೆ ಬಗ್ಗೆ ನಮಗೆ ಇರುವ ಚೌಕಟ್ಟು, ಸಮಾಜದ ದೃಷ್ಟಿಕೋನ ಇವೆಲ್ಲವುಗಳ ಪರಿಣಾಮವೇ ಇಂದು ನಾವು ಏಡ್ಸ್ ದಿನಾಚರಣೆ ಮಾಡುವ ಸ್ಥಿತಿಗೆ ಬಂದು ತಲುಪಿರುವೆವು. ಈ ಏಡ್ಸ್ ಎಂಬ ಮಾಹಾಮಾರಿಗೆ ದಿನೇ ದಿನೇ ಸಾಕಷ್ಟು ಜನರು ಬಲಿಯಾಗುತ್ತಾ ಇರುವರು. ಹೆಚ್ಚಾಗಿ ಏನೂ ತಿಳಿಯದ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ.
ಮುಕ್ತ ಲೈಂಗಿಕತೆ, ಲೈಂಗಿಕ ಶಿಕ್ಷಣ : ನಮ್ಮ ದೇಶದಲ್ಲಿ ಯುವ ಪೀಳಿಗೆಗೆ ಮುಖ್ಯವಾಗಿ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆ. ನಿರೋಧ, ಗರ್ಭನಿರೋಧಕ ಮಾತ್ರೆಗಳು, ಲೈಂಗಿಕ ಕಾಯಿಲೆಗಳು, ಸುರಕ್ಷಿತ ಲೈಂಗಿಕತೆ ಇವುಗಳ ಬಗ್ಗೆ ಬಾಲ್ಯಾವಸ್ಥೆ ಮುಗಿಸಿ ಬರುವ ಪ್ರತಿಯೊಬ್ಬರಿಗೂ ಮಾಹಿತಿಯ ಅಗತ್ಯತೆ ಇದೆ. ನಿರೋಧ ಬಳಕೆಯ ಬಗ್ಗೆ ಕೆಲ ಧಾರ್ಮಿಕ ಮುಖಂಡರ ಆಕ್ಷೇಪವಿದೆ. ಈ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡದೇ ಆಗಬೇಕಾಗಿರವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯತೆ ಇದೆ. ಯಾವುದೇ ಬದಲಾವಣೆಯನ್ನು ಎಲ್ಲರಿಗೂ ಅರ್ಥಮಾಡಿಸಿ ಬದಲಾಯಿಸಲು ಸಾಧ್ಯವಿಲ್ಲ. ಪ್ರೌಢ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ ಮಾಡುವುದು, ಲೈಂಗಿಕ ಕಾಯಿಲೆ, ಸುರಕ್ಷಿತ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ಸೃಷ್ಟಿಸುವುದು, ಲೈಂಗಿಕತೆಯನ್ನು ಸಹಜವಾಗಿ ನೋಡುವ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ.
ಇಲ್ಲಿ ನಾವು ಸಂಪ್ರದಾಯ ತಪ್ಪು, ಸರಿ ಎಂದು ಚರ್ಚೆ ಮಾಡುತ್ತಾ ಇದ್ದರೆ ಮುಂದಿನ ಕೆಲವು ವರ್ಷಗಳಲ್ಲಿ ಏಡ್ಸ್ ಕಾಯಿಲೆ ಜನಸಂಖ್ಯೆಯ ಬಹುಪಾಲನ್ನು ಆಕ್ರಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಮಾತ್ರ ಈ ಮಾಹಾ ಮಾರಿಯ ಬಗ್ಗೆ ಚರ್ಚೆ ನಡೆಸುವುದು, ಮೆರವಣಿಗೆ ಮಾಡುವುದು ಇವೆಲ್ಲವುಗಳ ಜೊತೆಗೆ ಹಳ್ಳಿ ಹಳ್ಳಿಯಲ್ಲಿ ಇದರ ಬಗ್ಗೆ ತಿಳಿಯುವಂತೆ ಮೂಡಿಸುವ ಅಗತ್ಯವಿದೆ. ಕೇವಲ 30 ವರ್ಷಗಳಲ್ಲಿ ಏಡ್ಸ್ ನಮ್ಮ ಜಗತ್ತನ್ನು ವ್ಯಾಪಿಸಿರುವ ರೀತಿ ತುಂಬಾ ಭಯಾನಕವಾಗಿರುವುದು. ಮುಂಬರುವ ದಿನಗಳು ಇನ್ನೂ ಭಯಾನಕವಾಗುವ ಮೊದಲೇ ನಮ್ಮ ಸಂಪ್ರದಾಯವನ್ನು ಸ್ವಲ್ಪ ಸಡಿಲಗೊಳಿಸುವ ಅಗತ್ಯತೆ ಇದೆ. ನಾವೇ ಎಷ್ಟೇ ಬುದ್ದಿಜೀವಿಗಳೆಂದು ಹೇಳಿಕೊಂಡರೂ ಈ ಕಾಯಿಲೆಗೆ ನಾವು ಇದೂವರೆಗೂ ಪರಿಣಾಮಕಾರಿಯಾದ ಔಷಧವನ್ನು ಕಂಡುಹಿಡಿಯಲು ವಿಫಲರಾಗಿರುವೆವು ಎಂಬುದನ್ನು ನಾವು ಮರೆಯಬಾರದು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications